ಪ್ರದೀಪ್‌ ಈಶ್ವರ್‌ ಬಲಿಜಗರಿಗೆ ಉದ್ಯೋಗ ಮೀಸಲು ಕಲ್ಪಿಸಲಿ

KannadaprabhaNewsNetwork |  
Published : Mar 17, 2025, 12:33 AM IST
ಸುದ್ದಿಚಿತ್ರ ೧ ನಗರದ ಕೋಟೆ ವೃತ್ತದಲ್ಲಿರುವ ಶ್ರೀರಾಮನ ದೇವಾಲಯದ ಆವರಣದಲ್ಲಿ ಭಾನುವಾರ ಬಲಿಜ ಸುದ್ದಿಗೋಷ್ಠಿಯಲ್ಲಿಮಾತನಾಡಿದರು | Kannada Prabha

ಸಾರಾಂಶ

ಬಿಜೆಪಿ ಸರ್ಕಾರ ಬಲಿಜ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ಕಲ್ಪಿಸಿದೆ. ಕೈವಾರ ತಾತಯ್ಯ ಜಯಂತಿಯನ್ನು ಘೋಷಿಸಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಂಸದರಾಗಿದ್ದ ಪಿ.ಸಿ.ಮೋಹನ್ ಅವರು ಸಾಕಷ್ಟು ಶ್ರಮ ವಹಿಸಿ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿ ಕಲ್ಪಿಸಿದರು ಎಂಬುದನ್ನು ಶಾಸಕ ಶಾಸಕ ಪ್ರದೀಪ್ ಈಶ್ವರ್ ಮರೆಯಬಾರದು

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಬಲಿಜ ಸಮಾಜಕ್ಕೆ 2ಎ ಮೀಸಲಾತಿ ಸೌಲಭ್ಯ ಕಲ್ಪಿಸಿದ ಹಾಗೂ ಕೈವಾರ ತಾತಯ್ಯನವರ ಜಯಂತಿ ಘೋಷಣೆ ಮಾಡಿದ್ದು ಯಾವ ಸರ್ಕಾರ ಎಂಬುದನ್ನು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಮೊದಲು ತಿಳಿಸಲಿ ಎಂದು ನಗರಸಭೆ ಸದಸ್ಯ ರಾಘವೇಂದ್ರ ತಿಳಿಸಿದರು.

ನಗರದ ಕೋಟೆ ವೃತ್ತದಲ್ಲಿರುವ ಶ್ರೀರಾಮನ ದೇವಾಲಯದ ಆವರಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮಟ್ಟದ ಕೈವಾರ ತಾತಯ್ಯ ಜಯಂತಿಯಲ್ಲಿ ಪಾಲ್ಗೊಂಡಿದ್ದ ಶಾಸಕ ಪ್ರದೀಪ್ ಈಶ್ವರ್, ಏಕವಚನದಲ್ಲಿ ಮಾತನಾಡಿರುವುದು ನಮ್ಮ ಸಮುದಾಯ ತಲೆತಗ್ಗಿಸುವಂತಾಗಿದೆ ಎಂದರು. ಬಿಜೆಪಿ ಕೊಡುಗೆ ಮರೆಯಲಾಗದು

ಬಿಜೆಪಿ ಸರ್ಕಾರ ಬಲಿಜ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ಕಲ್ಪಿಸಿದೆ. ಕೈವಾರ ತಾತಯ್ಯ ಜಯಂತಿಯನ್ನು ಘೋಷಿಸಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸಂಸದರಾಗಿದ್ದ ಪಿ.ಸಿ.ಮೋಹನ್ ಅವರು ಸಾಕಷ್ಟು ಶ್ರಮ ವಹಿಸಿ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿ ಕಲ್ಪಿಸಿದರು ಎಂಬುದನ್ನು ಶಾಸಕ ಶಾಸಕ ಪ್ರದೀಪ್ ಈಶ್ವರ್ ಮರೆಯಬಾರದು ಎಂದರು.

ಶಾಸಕರಿಗೆ ಸಮುದಾಯದ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಮುಖ್ಯಮಂತ್ರಿಗಳ ಕೈ, ಕಾಲು ಹಿಡಿದು ಟೇಬಲ್ ಗುದ್ದಿ ಉದ್ಯೋಗ ಹಾಗೂ ರಾಜಕೀಯವಾಗಿ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲಿ. ಆಗ ಅವರನ್ನು ನಾವು ಮೆಚ್ಚುತ್ತೇವೆ. ಸಮುದಾಯದ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಆದರೆ ಬಿಜೆಪಿ ಮಾಡಿರುವುದನ್ನು ಆ ಕಾರ್ಯಕ್ರಮದಲ್ಲಿ ಕೆಲವರು ಹೇಳಿದ್ದಾರೆ ಅದು ನಿಜ ಕೂಡ. ಆದರೆ ಮುಖ್ಯ ವೇದಿಕೆಯಲ್ಲಿ ಪ್ರದೀಪ್ ಈಶ್ವರ್ ರವರ ನಡವಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು. ಮುಂದಿನ ಜಯಂತಿಗೆ ಬರಬೇಡಿ

ಪ್ರದೀಪ್ ಈಶ್ವರ್ ಅವರಿಗೆ ರಾಜಕೀಯ ಜ್ಞಾನ ಇಲ್ಲ. ಮೊದಲ ಬಾರಿ ಶಾಸಕರಾಗಿರುವ ಅವರು ಕ್ಷೇತ್ರದ ಅಭಿವೃದ್ದಿಗೆ ಒತ್ತು ಕೊಡಲಿ. ಅದು ಬಿಟ್ಟು ಕೈವಾರ ತಾತಯ್ಯ ಜಯಂತಿಯಲ್ಲಿ ಪ್ರಬುದ್ಧತೆ ಮೆರೆಯದೇ ನಮ್ಮ ಸರ್ಕಾರ ನಿಮ್ಮ ಸರ್ಕಾರ ಅಂತ ಚಮಚಾಗಿರಿ ಮಾಡಬೇಡಿ ಎಂದರು. ಮುಂದಿನ ಜಯಂತಿಗೆ ನೀವು ಬರಲೇ ಬೇಡಿ ಎಂದು ಪ್ರದೀಪ್ ಈಶ್ವರ್ ವಿರುದ್ದ ಕಿಡಿಕಾರಿದರು.ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಎ ರಮೇಶ್, ಎಸ್.ಸೋಮಶೇಕರ್ ಕೆ. ಮಹೇಶ್ , ನಂದ ಕಿಶನ್ , ನರೇಶ್, ಮಾತೃಶ್ರೀ ಮೋಹನ್, ಕುಮಾರ್ , ಹರೀಶ್, ಸುಬ್ರಮಣಿ, ರಾಜ್ ಗೋಪಾಲ್ ಸೇರಿದಂತೆ ಅನೇಕ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಪ್ರಿಮ್‌ ಶಾಲೆಯಲ್ಲಿ ಮಕ್ಕಳು ವಿವಿಧ ಸಾಂಸ್ಕೃತಿಕ ಸಂಭ್ರಮೋತ್ಸವ
ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಂತಾಪ