ಕನ್ನಡಪ್ರಭ ವಾರ್ತೆ ಕಲಬುರಗಿ
ರಾಸಲೀಲೆ ಪ್ರಕರಣದ ವಿಡಿಯೋಗಳು ಲಕ್ಷಾಂತರ ಜನರಿಗೆ ತಲುಪಿರುವುದರಿಂದ ಅವು ಯುವಜನರು, ಕಾಮುಕರು ಮತ್ತು ಮಕ್ಕಳ ಮೇಲೆ ಬೀರಬಹುದಾದ ಪರಿಣಾಮ ಘೋರವಾಗಲಿದ್ದು, ಕೂಡಲೇ ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಎಲ್ಲಿದ್ದರೂ ಬಂಧಿಸಿ, ಐಟಿ ಮತ್ತು ಐಪಿಸಿ ಕಾಯ್ದೆಯಡಿ ಮೊಕದ್ದಮೆ ಹೂಡಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಬಹಿರಂಗ ಪತ್ರದಲ್ಲಿ ಆಗ್ರಹಿಸಲಾಗಿದೆ.
ಜನವಾದಿ ಮಹಿಳಾ ಸಂಘಟನೆಯ ಮುಖಂಡೆ ಕೆ ನೀಲಾ ಮಾತನಾಡುತ್ತ, ಪ್ರಜ್ವಲ್ ರೇವಣ ರೇವಣನನ್ನು ಆದಷ್ಟು ಬೇಗ ಬಂದಿಸಬೇಕು ಮತ್ತು ಇಷ್ಟೆಲ್ಲಾ ಹಗರಣಗಳನ್ನು ತಮ್ಮ ಕಣ್ಣೆದುರೇ ನಡೆಯುತ್ತಿದ್ದರು ಪಕ್ಷದ ಹಿರಿಯರು ಮತ್ತು ಕುಟುಂಬದ ಎಲ್ಲಾ ಸದಸ್ಯರ ಮೇಲೆಯೂ ತನಿಖೆಗಳನ್ನು ನಡೆಸಬೇಕು. ಸಿಐಟಿ ತಂಡವು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಸಂತ್ರಸ್ತ ಮಹಿಳೆಯರು ಭೀತಿ ಇಲ್ಲದೆ ದೂರು ನೀಡುವಂತಹ ವಾತಾವರಣ ನಿರ್ಮಾಣವಾಗಬೇಕೆಂದು ಆಗ್ರಹಿಸಿದರು.ಪದ್ಮಿನಿ ಕಿರಣಗಿ, ರೇಣುಕಾ ಸರಡಗಿ ಪದ್ಮಾ ಪಾಟೀಲ್, ಲವಿತ್ರ, ಸುಜಾತಾ, ಪ್ರಿಯಾಂಕ ಮಾವಿನಕರ್, ಪ್ರಭು ಖಾನಾಪೂರ, ಪಾಂಡುರಂಗ ಮಾವಿನಕರ, ಸುಧಾಮ ಧನ್ನಿ, ಶ್ರೀಮಂತ ಬಿರಾದಾರ ಹಾಗೂ ಅನೇಕ ಮಹಿಳಾ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು.