ಅವಧಿಗೂ ಮುನ್ನ ಜನಿಸಿದ್ದ ಕಾಡಾನೆ ಮರಿ ಸಾವು

KannadaprabhaNewsNetwork |  
Published : Jun 17, 2025, 11:50 PM IST
ಅವಧಿಗೂ ಮುನ್ನ ಜನಿಸಿದ್ದ ಕಾಡಾನೆ ಮರಿ ಸಾವನ್ನಪ್ಪಿದ್ದು ಮೃತ ಮರಿ ಶವವನ್ನು ತಾಯಿ ಕಾಡಾನೆಯು ಸೊಂಡಿಲಿನಲ್ಲಿ ಎತ್ತಿಕೊಂಡು ಮೂಕರೋದನೆಯಿಂದ ಘೀಳಿಡುತ್ತಿರುವುದು | Kannada Prabha

ಸಾರಾಂಶ

ಅವಧಿಗೂ ಮುನ್ನ ಜನಿಸಿದ್ದ ಕಾಡಾನೆ ಮರಿ ಸಾವನ್ನಪ್ಪಿದ್ದು ಮೃತ ಮರಿ ಶವವನ್ನು ತಾಯಿ ಕಾಡಾನೆಯು ಸೊಂಡಿಲಿನಲ್ಲಿ ಎತ್ತಿಕೊಂಡು ಮೂಕರೋದನೆಯಿಂದ ಘೀಳಿಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್‌‌ನಲ್ಲಿ ಸೆರೆಯಾಗಿದೆ. ಸಾವನ್ನಪ್ಪಿರುವ ತನ್ನ ಮರಿಯ ಮೃತದೇಹವನ್ನು ಸೊಂಡಲಿನಲ್ಲಿ ಹಿಡಿದು ಕೆಲವು ಗಂಟೆಗಳ ಕಾಲ ತಾಯಿ ಆನೆ ಮರುಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸರೆಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಅವಧಿಗೂ ಮುನ್ನ ಜನಿಸಿದ್ದ ಕಾಡಾನೆ ಮರಿ ಸಾವನ್ನಪ್ಪಿದ್ದು ಮೃತ ಮರಿ ಶವವನ್ನು ತಾಯಿ ಕಾಡಾನೆಯು ಸೊಂಡಿಲಿನಲ್ಲಿ ಎತ್ತಿಕೊಂಡು ಮೂಕರೋದನೆಯಿಂದ ಘೀಳಿಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್‌‌ನಲ್ಲಿ ಸೆರೆಯಾಗಿದೆ.ತಾಲೂಕಿನ ಜಾಕನಹಳ್ಳಿ ಎಸ್ಟೇಟ್‌ ಬಳಿ ಈ ಘಟನೆ ನಡೆದಿದ್ದು, ಹುಟ್ಟುವಾಗಲೇ ಕಾಡಾನೆ ಮರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕಾಡಾನೆಗಳ ಚಲನವಲನ ಅರಿಯಲು ಇತ್ತೀಗಷ್ಟೇ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗರ್ಭಿಣಿ ಕಾಡಾನೆಗೆ ರೆಡಿಯೋ ಕಾಲರ್ ಅಳವಡಿಸುವ ಮುನ್ನ ಕಾಡಾನೆಗೆ ಅರವಳಿಕೆ ಚುಚ್ಚುಮದ್ದನ್ನು ಪಶುವೈದ್ಯರು ನೀಡಿದ್ದರು. ಅರವಳಿಕೆ ಚುಚ್ಚುಮದ್ದು ನೀಡಿದ ಪರಿಣಾಮ ಅವಧಿಗೂ ಮುನ್ನ ಹೆಣ್ಣಾನೆ ಜನ್ಮ ನೀಡಿರಬಹುದು ಎಂಬ ಶಂಕೆ ಇದೆ. ಮೃತಪಟ್ಟಿರುವ ಮರಿಯ ಮೃತದೇಹದ ಮುಂದೆ ಕಾಡಾನೆಯ ತೊಳಲಾಟ ಹೇಳತೀರದಾಗಿದ್ದು, ಸಾವನ್ನಪ್ಪಿರುವ ತನ್ನ ಮರಿಯ ಮೃತದೇಹವನ್ನು ಸೊಂಡಲಿನಲ್ಲಿ ಹಿಡಿದು ಕೆಲವು ಗಂಟೆಗಳ ಕಾಲ ತಾಯಿ ಆನೆ ಮರುಗುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸರೆಹಿಡಿದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ