ಕನ್ನಡಪ್ರಭ ವಾರ್ತೆ ರೋಣ
ತಾಲೂಕಿನ ಮುಗಳಿ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾರತೀಯ ಸ್ಠೇಟ್ ಬ್ಯಾಂಕ ( ಎಸ್.ಬಿ.ಐ) ವತಿಯಿಂದ ಜರುಗಿದ ರೈತ ಸಂಪರ್ಕ ಸಭೆಯಲ್ಲಿ ಮಾತನಾಡಿದರು.
ರೈತರಿಗಾಗಿ ಬ್ಯಾಂಕ್ ಮತ್ತು ಸರ್ಕಾರದಿಂದ ಅನೇಕ ಸವಲತ್ತುಗಳು ಇರುತ್ತವೆ. ರೈತರು ಅವುಗಳ ಬಗ್ಗೆ ತಿಳಿದು, ಅವುಗಳನ್ನು ಪಡೆಯಲು ಏನು ಮಾಡಬೇಕು ಎಂಬುದನ್ನು ಅರಿಯಬೇಕು. ಬ್ಯಾಂಕ್ಗಳಲ್ಲಿ ಪಡೆದ ಸಾಲವನ್ನು ಸಕಾಲಕ್ಕೆ ಅಥವಾ ಅವಧಿ ಪೂರ್ವದಲ್ಲಿ ಮರು ಪಾವತಿ ಮಾಡುವುದು ಅತೀ ಸೂಕ್ತವಾಗಿದೆ. ಇದರಿಂದ ತಮ್ಮದೇ ಸಿಬಿಲ್ ಸ್ಕೋರ್ ಹೆಚ್ಚಳವಾಗಿ. ಶೇ. 3ರಷ್ಟು ಅಧಿಕ ಸೌಲಭ್ಯಗಳು ಸೀಗುತ್ತವೆ. ಮುದ್ರಾ, ಸ್ಟಾಂಡಪ್ ಇಂಡಿಯಾ ಯೋಜನೆ, ಸ್ಟಾರ್ಟಪ್ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಮೂಲಕ ಬ್ಯಾಂಕ್ನಲ್ಲಿ ಸಾಲ ಸೌಲಭ್ಯ ಸಿಗಲಿದ್ದು, ರೈತರು ಈ ಕುರಿತು ತಿಳಿದುಕೊಳ್ಳಬೇಕು ಎಂದರು.ಆರ್ಥಿಕ ಸಾಕ್ಷರತಾ ಸಲಹೆಗಾರ ಮಲ್ಲಿಕಾರ್ಜುನ ಕುಲಕರ್ಣಿ ಮಾತನಾಡಿ, ಸಾಮಾಜಿಕ ಸುರಕ್ಷತಾ ಯೋಜನೆಗಳಾದ ಪ್ರಧಾನಮಂತ್ರಿ ಜನಧನ, ಪ್ರಧಾನಮಂತ್ರಿ ಜೀವನ ಜ್ಯೋತಿ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಅಟಲ್ ಪೆನ್ಸನ್ ಯೋಜನೆ ಕುರಿತು ರೈತರು ತಿಳಿದು, ಅವುಗಳ ಪ್ರಯೋಜನ ಪಡೆಯಬೇಕು ಎಂದರು.