ದೇವಾಲಯ ಜಮೀನು ಮಾರಿದ ಅರ್ಚಕನ ಪತ್ನಿ ಮಕ್ಕಳು

KannadaprabhaNewsNetwork | Published : Jun 1, 2025 11:46 PM
ತಾಲೂಕಿನ ತೊಗರಿಘಟ್ಟ ಗ್ರಾಮದ ಶ್ರೀ ಚೆಲುವ ಚೆನ್ನಿಗರಾಯ ದೇವಾಲಯಕ್ಕೆ ಸರ್ಕಾರದಿಂದ ಸರ್ವೇ ನಂ.೧೩೦ರಲ್ಲಿ ೪ಎಕೆರೆ ೬ಗುಂಟೆ ಜಮೀನು ಮಂಜೂರು ಮಾಡಿದೆ. ಈ ದೇವಾಲಯ ಮುಜುರಾಯಿ ಇಲಾಖೆ ಒಳಪಡಲಿದ್ದು. ದೇವಸ್ಥಾನದ ಅರ್ಚಕರ ಕುಟುಂಬ ನೆಲಮಂಗಲದ ಮಹಿಳೆಗೆ ಕ್ರಯ ಮಾಡಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.

ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ

ತಾಲೂಕಿನ ತೊಗರಿಘಟ್ಟ ಗ್ರಾಮದ ಶ್ರೀ ಚೆಲುವ ಚೆನ್ನಿಗರಾಯ ದೇವಾಲಯಕ್ಕೆ ಸರ್ಕಾರದಿಂದ ಸರ್ವೇ ನಂ.೧೩೦ರಲ್ಲಿ ೪ಎಕೆರೆ ೬ಗುಂಟೆ ಜಮೀನು ಮಂಜೂರು ಮಾಡಿದೆ. ಈ ದೇವಾಲಯ ಮುಜುರಾಯಿ ಇಲಾಖೆ ಒಳಪಡಲಿದ್ದು. ದೇವಸ್ಥಾನದ ಅರ್ಚಕರ ಕುಟುಂಬ ನೆಲಮಂಗಲದ ಮಹಿಳೆಗೆ ಕ್ರಯ ಮಾಡಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ತೊಗರಿಘಟ್ಟ ಗ್ರಾಮದಲ್ಲಿ ೧೯೭೫ ರಲ್ಲಿ ಶ್ರೀ ಚಲುವ ಚೆನ್ನಿಗರಾಯ ಸ್ವಾಮಿ ದೇವಸ್ಥಾನದ ಆರ್ಚಕರಾಗಿದ್ದ ಶ್ರೀರಂಗಮೂರ್ತಿ ಅವರನ್ನ ನೇಮಕ ಮಾಡಲಾಗಿತ್ತು. ಆರ್ಚಕರ ಕುಟುಂಬ ದೇವಸ್ಥಾನಕ್ಕೆ ಸೇರಿದ ಜಮೀನನ್ನ ಉಳುಮೆ ಮಾಡಿ ಬಂದಂತ ಬೆಳೆಯನ್ನು ಮಾತ್ರ ಪಡೆಯಲು ಊರಿನ ಗ್ರಾಮಸ್ಥರ ಒಪ್ಪಂದ ನಡೆದಿತ್ತು. ಅರ್ಚಕ ಮೃತಪಟ್ಟ ನಂತರ ಅರ್ಚಕನ ಪತ್ನಿಗೆ ಜಮೀನು ವರ್ಗಾವಣೆ ಮಾಡಿಕೊಂಡು ಇಲಾಖೆ ಗಮನಕ್ಕೆ ತರದೇ ನೆಲಮಂಗಲ ಭಾಗ್ಯಮ್ಮ ಮತ್ತು ದೀಪ.ಜೆ ಎಂಬುವವರಿಗೆ ಮಾರಾಟ ಮಾಡಿದ್ದಾರೆ ಎಂದು ಊರಿನ ಮುಖಂಡರ ಆರೋಪವಾಗಿದೆ.ಸರ್ಕಾರದಿಂದ ದೇವಾಲಯಕ್ಕೆ ಜಮೀನು ಮಂಜುರಾದ ವೇಳೆ ಅರ್ಚಕರಾಗಿ ನೇಮಕವಾಗಿದ್ದ ಚೆನ್ನಕೇಶವಚಾರ್ ಮತ್ತು ಪತ್ನಿ ಪುಟ್ಟಲಕ್ಷಮ್ಮನವರು ಖಾತೆ, ಪಹಣಿ ಮಾಡಿಸಿಕೊಂಡಿದ್ದರು, ಇವರ ಮರಣದ ನಂತರ ಸೊಸೆ ಸುಶೀಲಮ್ಮ ಕೋಂ ಲೇಟ್ ಶ್ರೀರಂಗಮೂರ್ತಿ ರವರ ಹೆಸರಿಗೆ ಎಂಆರ್‌ಎಚ್ ೫೪/೨೦೧೯-೨೦ರಲ್ಲಿ ಖಾತೆ ಮತ್ತು ಪಹಣಿಯಾಗಿದ್ದು, ಗ್ರಾಮಸ್ಥರು ಇದನ್ನು ವಿರೋಧಿಸಿ ಜಮೀನಿನ ಮೇಲೆ ಭೂ ನ್ಯಾಯಮಂಡಳಿಯಲ್ಲಿ ಕೇಸು ದಾಖಲಿಸಿದ್ದು, ಜಮೀನು ವಿಚಾರಣೆಯ ಸಂಬಂಧಪಟ್ಟಂತೆ ಪಹಣಿಯಲ್ಲಿ ಉಲ್ಲೇಖವಾಗಿದೆ. ಕೊರಟಗೆರೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮತ್ತು ಉಚ್ಚ ನ್ಯಾಯಾಲಯ ದೇವಾಲಯದ ಹೆಸರಿಗೆ ಖಾತೆ ಬದಲಾವಣೆ ಮಾಡುವಂತೆ ಆದೇಶ ಮಾಡಿದೆ. ನ್ಯಾಯಾಲಯ ಆದೇಶವನ್ನೇ ಉಲ್ಲಂಘಿಸಿ ಸುಶೀಲಮ್ಮ ರವರ ಮಗ ನರಸಿಂಹಮೂರ್ತಿ ಮತ್ತು ಸೊಸೆ ಅಶ್ವಿನಿ ಬಿ.ಎ ಕುಣಿಗಲ್ ಉಪ ನೊಂದಣಾಧಿಕಾರಿಗಳ ಕಚೇರಿಯಲ್ಲಿ ೧೨ ಮೇ ೨೦೨೫ರಂದು ನೆಲಮಂಗಲದ ಭಾಗ್ಯಮ್ಮ ಮತ್ತು ದೀಪ.ಜೆ ಎಂಬುವವರಿಗೆ ಕ್ರಯ ಮಾಡಿರುವುದು ಕಂಡು ಬಂದಿದೆ. ಕೂಡಲೇ ಎಂ.ಆರ್ ವಜಾಗೊಳಿಸುವಂತೆ ಕೋರಿ ತಹಶೀಲ್ದಾರ್ ಕೆ.ಮಂಜುನಾಥ್‌ಗೆ ಊರಿನ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.ಕೋಟ್:

ಸರ್ಕಾರದಿಂದ ನೂರಾರು ವರ್ಷಗಳ ಹಿಂದೆ ಚೆಲುವ ಚೆನ್ನಿಗರಾಯ ದೇವಾಲಯಕ್ಕೆಂದು ತೊಗರಿಗಟ್ಟ ಗ್ರಾಮದಲ್ಲಿ ಜಮೀನು ಮಂಜೂರು ಮಾಡಿತ್ತು. ಉಚ್ಚ ನ್ಯಾಯಾಲಯದಲ್ಲಿ ಮತ್ತು ಕೊರಟಗೆರೆ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಚಕರ ಹೆಸರಿನಲ್ಲಿದ್ದ ಖಾತೆ ಮತ್ತು ಪಹಣಿ ವಜಾಗೊಳಿಸಿ ದೇವಾಲಯದ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು. ೨೦೨೪ರವೆರೆಗೂ ಕಲಂ ೧೧ರಲ್ಲಿ ಕೇಸ್ ನಂಬರ್ ನೊಂದಾಣಿಯಾಗಿತ್ತು. ೨೦೨೫ರ ನಂತರ ಕುಣಿಗಲ್ ಉಪನೋಂದಾಣಾಧಿಕಾರಿಗಳ ಪರಿಶೀಲಿಸಿದೆ ನೆಲಮಂಗಲದ ಭಾಗ್ಯಮ್ಮ ಎಂಬುವವರಿಗೆ ಕ್ರಯ ಮಾಡಿದ್ದಾರೆ. ಎಂ.ಆರ್ ವಜಾಗೊಳಿಸುವಂತೆ ತಹಸೀಲ್ದಾರ್‌ಗೆ ಮನವಿ ಮಾಡಲಾಗಿದೆ.ಕೋದಂಡರಾಮಯ್ಯ, ಗ್ರಾಮಸ್ಥರು.

----------------------

ಶ್ರೀಚೆಲುವ ಚೆನ್ನಿಗರಾಯ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅರ್ಚಕರು ತಮ್ಮ ಪೂಜೆಯ ಜೊತೆಗೆ ಜಮೀನಿನಲ್ಲಿ ಉಳುಮೆ ಮಾಡಲು ಗ್ರಾಮಸ್ಥರು ಅವಕಾಶ ಕಲ್ಪಿಸಿದ್ದರು. ಈ ಅವಕಾಶದಿಂದ ಜಮೀನನ್ನು ತಮ್ಮಂತೆ ಮಾಡಿಕೊಳ್ಳಲು ಅರ್ಚಕರ ಕುಟುಂಬ ಮುಂದಾದ ವೇಳೆ ಗ್ರಾಮಸ್ಥರು ನ್ಯಾಯಾಲಯ ಮೊರೆ ಹೋಗಿದ್ದು, ನ್ಯಾಯಾಲಯ ದೇವಾಲಯಕ್ಕೆ ಸೀಮಿತ ಜಮೀನೆಂದು ಆದೇಶ ಮಾಡಿದೆ. ಆದರೆ ಅರ್ಚಕರ ಮರಣದ ನಂತರ ಕುಟುಂಬದ ಮಕ್ಕಳು ನೆಲಮಂಗಲದ ಭಾಗ್ಯಮ್ಮ ಎಂಬುವವರಿಗೆ ಕ್ರಯ ಮಾಡಿರುವುದು ಕಂಡು ಬಂದಿದೆ.

- ನಾರಾಯಣಪ್ಪ, ಊರಿನ ಮುಖಂಡ

---------------------