ಯು ಟರ್ನ್ ಹೊಡೆವ ಪ್ರಧಾನಿ ನರೇಂದ್ರ ಮೋದಿ: ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

KannadaprabhaNewsNetwork |  
Published : Jan 08, 2024, 01:45 AM IST
7ಕೆಕೆಆರ್4:ಕುಕನೂರಲ್ಲಿ ಜರುಗಿದ ಅಭಿನಂದನಾ ಕಾರ್ಯಕ್ರಮವನ್ನು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಉದ್ಘಾಟಿಸಿದರು.  | Kannada Prabha

ಸಾರಾಂಶ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾರತದ ಆರ್ಥಿಕ ನೀತಿ ಗಟ್ಟಿಗೊಳಿಸಿದರು. ಅವರಷ್ಟು ಆರ್ಥಿಕ ನೀತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರುವುದಿಲ್ಲ. ಮನಮೋಹನ್ ಸಿಂಗ್ ಪ್ರತಿ ಆರ್ಥಿಕ ಪಾಯಿಂಟ್ ಸಹ ಪ್ರಶಂಸನೀಯ.

ಕುಕನೂರು: ಪ್ರಧಾನಿ ನರೇಂದ್ರ ಮೋದಿ ಯು-ಟರ್ನ್ ಹೊಡೆಯುತ್ತಾರೆ. ಮೊದಲು ಜಿಎಸ್‌ಟಿ, ಆಧಾರ್ ಕಾರ್ಡ್ ವಿರೋಧಿಸಿದ್ದರು. ಈಗ ಅವರೇ ಬೆಂಬಲಿಸುತ್ತಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಟೀಕಿಸಿದರು.

ಪಟ್ಟಣದಲ್ಲಿ ಜರುಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾರತದ ಆರ್ಥಿಕ ನೀತಿ ಗಟ್ಟಿಗೊಳಿಸಿದರು. ಅವರಷ್ಟು ಆರ್ಥಿಕ ನೀತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರುವುದಿಲ್ಲ. ಮನಮೋಹನ್ ಸಿಂಗ್ ಪ್ರತಿ ಆರ್ಥಿಕ ಪಾಯಿಂಟ್ ಸಹ ಪ್ರಶಂಸನೀಯ ಎಂದರು.

16ನೇ ಹಣಕಾಸು ಯೋಜನೆಗೆ ಪ್ರತಿ ರಾಜ್ಯದಿಂದ ಒಬ್ಬ ಸದಸ್ಯರ ನೇಮಕ ಮಾಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೀಘ್ರ ಪತ್ರ ಬರೆಯುತ್ತೇನೆ ಎಂದರು.ಇತ್ತೀಚೆಗೆ ಬಜೆಟ್ ಕುರಿತು ಮೊದಲ ಸಭೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ನಡೆಯಿತು. ಸಿಎಂ ಸೇರಿ ಆರು ಜನ ಮಾತ್ರ ಸಭೆಯಲ್ಲಿ ಇದ್ದೆವು. ಫಸ್ಟ್ ಇಂಪ್ರೆಷನ್ ಇಸ್ ದ ಬೆಸ್ಟ್ ಇಂಪ್ರೆಷನ್ ಎನ್ನುವಂತೆ ಮೊದಲ ಸಭೆಯಲ್ಲಿ ನನ್ನ ಸಲಹೆಗಳಿಗೆ ಸಿಎಂ ಸಿದ್ದರಾಮಯ್ಯ ಶ್ಲಾಘಿಸಿದರು. ಬಜೆಟ್ ತಯಾರಿಕೆಗೆ ಪ್ರತಿ ಹಂತದಲ್ಲೂ ರಾಯರಡ್ಡಿ ಸಲಹೆ ಪಡೆದು ಬಜೆಟ್ ತಯಾರಿಸಿ, ನನ್ನ ಹೊಣೆಗಾರಿಕೆ ಕೆಲಸ ಸಹ ಆತನದೇ ಎಂದು ಹೇಳಿದರು.ನನಗೆ ಹೊಸ ಕಾರು ಬೇಕಿಲ್ಲ, ಹೊಸ ಕಾರಿಗೆ ₹40 ಲಕ್ಷ ಬೇಕು. ನನಗೆ ಸಂಬಳ, ವಸತಿ, ಪೀಠೋಪಕರಣ ಖರ್ಚು ಬೇಡ ಎಂದು ಸಿಎಂಗೆ ಪತ್ರ ಬರೆಯುವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!