ಪ್ರಧಾನಿ ಘೋಷಣೆ ದೇಶದ ಬಲಿಷ್ಠ ಆರ್ಥಿಕತೆಗೆ ಭದ್ರ ಬನಾದಿ: ಎಸ್‌.ಎಸ್‌. ನಾಯಕ್‌

KannadaprabhaNewsNetwork |  
Published : May 15, 2026, 02:45 AM IST
ದ.ಕ. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠ ಸಂಚಾಲಕ ಸಿಎ ಎಸ್‌.ಎಸ್‌.ನಾಯಕ್‌ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಪ್ರಧಾನಮಂತ್ರಿಯವರು ಮೇ 10ರಂದು ಮಾಡಿದ ಘೋಷಣೆಗಳು ಭಾರತದ ಆರ್ಥಿಕತೆಯನ್ನು ಇನ್ನಷ್ಟು ಬಲಿಷ್ಠ, ಸ್ವಾವಲಂಬಿ ಮತ್ತು ಭವಿಷ್ಯದತ್ತ ದೂರದೃಷ್ಟಿಯ ಕ್ರಮವಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಅನಿಶ್ಚಿತತೆಗಳ ನಡುವೆಯೂ ಭಾರತ ಆತ್ಮವಿಶ್ವಾಸದಿಂದ ಹಾಗೂ ಯೋಜಿತ ರೀತಿಯಲ್ಲಿ ಮುಂದುವರಿಯುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ದ.ಕ. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠ ಹೇಳಿದೆ.

ಮಂಗಳೂರು: ಪ್ರಧಾನಮಂತ್ರಿಯವರು ಮೇ 10ರಂದು ಮಾಡಿದ ಘೋಷಣೆಗಳು ಭಾರತದ ಆರ್ಥಿಕತೆಯನ್ನು ಇನ್ನಷ್ಟು ಬಲಿಷ್ಠ, ಸ್ವಾವಲಂಬಿ ಮತ್ತು ಭವಿಷ್ಯದತ್ತ ದೂರದೃಷ್ಟಿಯ ಕ್ರಮವಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಅನಿಶ್ಚಿತತೆಗಳ ನಡುವೆಯೂ ಭಾರತ ಆತ್ಮವಿಶ್ವಾಸದಿಂದ ಹಾಗೂ ಯೋಜಿತ ರೀತಿಯಲ್ಲಿ ಮುಂದುವರಿಯುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ದ.ಕ. ಜಿಲ್ಲಾ ಬಿಜೆಪಿ ಆರ್ಥಿಕ ಪ್ರಕೋಷ್ಠ ಹೇಳಿದೆ.

ಪ್ರಕೋಷ್ಠ ಸಂಚಾಲಕ ಸಿಎ ಎಸ್‌.ಎಸ್‌. ನಾಯಕ್‌ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಘೋಷಣೆಗಳನ್ನು ಬೆಂಬಲಿಸಿ ಮಾತನಾಡಿದರು. ವಿಶ್ವದ ಐದನೇ ಆರ್ಥಿಕ ಶಕ್ತಿಯಾಗಿ ಭಾರತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿದ್ದು , ವಿಶ್ವದ ಅತಿದೊಡ್ಡ ಯುವಜನಸಂಖ್ಯೆ ಹೊಂದಿರುವ ದೇಶವಾಗಿದೆ. ಭಾರತದ ಜಿಡಿಪಿ ಈಗ ಸುಮಾರು 4.15 ಟ್ರಿಲಿಯನ್ ಡಾಲರ್ ಮಟ್ಟ ತಲುಪಿದ್ದು, ಮುಂದಿನ ಕೆಲವು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯತ್ತ ಸಾಗುತ್ತಿದೆ. ಭಾರತ ತನ್ನ ಅಗತ್ಯ ಕಚ್ಚಾ ತೈಲದ ಸುಮಾರು ಶೇ. 85 ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಅದರ ಕಾರಣ ಸ್ವಲ್ಪ ಮಟ್ಟಿನ ಇಂಧನ ಉಳಿತಾಯವೂ ಸಾವಿರಾರು ಕೋಟಿ ರು. ವಿದೇಶಿ ವಿನಿಮಯ ಉಳಿಸಬಹುದು ಎಂದರು.

ಕಚ್ಚಾ ತೈಲ, ಚಿನ್ನ, ಸಸ್ಯಜನ್ಯ ಎಣ್ಣೆಗಳು ಹಾಗೂ ರಸಗೊಬ್ಬರ ಈ ನಾಲ್ಕು ವಸ್ತುಗಳು ಭಾರತದ ಒಟ್ಟು ಆಮದಿನ ಶೇಕಡಾ 31.1 ರಷ್ಟಿದೆ. ಒಟ್ಟು ಆಮದು ಬಿಲ್‌ನಲ್ಲಿ ಚಿನ್ನ ಮಾತ್ರ ಶೇಕಡಾ 10 ರಷ್ಟಿದೆ. ಭಾರತ ವಿಶ್ವದ ಅತಿ ದೊಡ್ಡ ಚಿನ್ನ ಬಳಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 700 ರಿಂದ 900 ಟನ್ ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ ಹಾಗೂ ಇದಕ್ಕಾಗಿ 72 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ವೆಚ್ಚವಾಗುತ್ತದೆ ಎಂದರು.2024-25ನೇ ಹಣಕಾಸು ವರ್ಷದಲ್ಲಿ ಭಾರತದ ವ್ಯಾಪಾರ ಕೊರತೆ 95 ಬಿಲಿಯನ್ ಡಾಲರ್ ಆಗಿದ್ದು , 2025-26 ರಲ್ಲಿ 119 ಬಿಲಿಯನ್ ಡಾಲರ್‌ಗೆ ಏರಿದೆ. ಹಾಗೆಯೇ ಚಾಲ್ತಿ ಖಾತೆ ಕೊರತೆ 88 ಬಿಲಿಯನ್ ಡಾಲರ್ ಗೆ ಏರಿದ್ದು ಜಿಡಿಪಿಯ ಶೇ. 2.1 ಆಗಿದೆ. ಈ ಕೊರತೆಯನ್ನು ಜಿಡಿಪಿಯ ಶೇ. 1 ಕ್ಕಿಂತ ಕಡಿಮೆ ಇಳಿಸುವ ಅಗತ್ಯತೆ ಇದೆ. ಅದೇ ರೀತಿ ಚಿನ್ನದ ಆಮದು ಶೇ. 30-40 ರಷ್ಟು ಕುಸಿದರೂ ಸಹ 20-25 ಬಿಲಿಯನ್ ಡಾಲರ್‌ಗಳನ್ನು ಉಳಿಸಬಹುದು. ಶೇ.50ರ ಕುಸಿತವು 36 ಬಿಲಿಯನ್ ಡಾಲರ್‌ಗಳನ್ನು ಉಳಿಸಬಹುದು ಎಂದರು.

ದೇಶದ ಅಡುಗೆ ಎಣ್ಣೆಯ ಬೇಡಿಕೆಯ ಸುಮಾರು 55 ರಿಂದ 60 ಶೇಕಡಾ ವಿದೇಶಗಳಿಂದ ಆಮದು ಆಗುತ್ತಿದೆ. ವಿಶೇಷವಾಗಿ Palm Oil, Sunflower Oil ಮತ್ತು Soybean Oil ಮೇಲಿನ ಅವಲಂಬನೆ ಹೆಚ್ಚಿದೆ. ಆದರೆ ಕೇಂದ್ರ ಸರ್ಕಾರದ National Edible Oil Mission ಮೂಲಕ ದೇಶೀಯ ಎಣ್ಣೆ ಬೀಜ ಉತ್ಪಾದನೆಯನ್ನು ಹೆಚ್ಚಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ.

ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಭಾರತ ತನ್ನ ಅಗತ್ಯ ಕಚ್ಚಾ ತೈಲದ 85 ಶೇಕಡಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. Electric Vehicle ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದ್ದು, Charging Infrastructure, Battery Manufacturing ಮತ್ತು Renewable Energy ಕ್ಷೇತ್ರಗಳಿಗೆ ಭಾರಿ ಹೂಡಿಕೆ ಬರುತ್ತಿದೆ. Solar Energy ಮತ್ತು Green Hydrogen ಕ್ಷೇತ್ರಗಳಲ್ಲಿ ಭಾರತ ಜಾಗತಿಕ ನಾಯಕತ್ವದತ್ತ ಹೆಜ್ಜೆ ಇಡುತ್ತಿದೆ. ರಸಗೊಬ್ಬರ ಕ್ಷೇತ್ರದಲ್ಲಿಯೂ ಭಾರತ ಸ್ವಾವಲಂಬನೆಯತ್ತ ಸಾಗುತ್ತಿದೆ. ವಿಶೇಷವಾಗಿ IFFCO ಅಭಿವೃದ್ಧಿಪಡಿಸಿರುವ Nano Urea ಭಾರತಕ್ಕೆ ಹೊಸ ಆಶಾಕಿರಣವಾಗಿದೆ ಎಂದರು.ಇದರಿಂದಾಗಿ ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ತಮ್ಮ ಹಣವನ್ನು ಹಿಂಪಡೆಯಬಹುದು. ದೇಶೀಯವಾಗಿ ಬೆಲೆ ಏರಿಕೆಯಾಗಲಿದೆ. ರುಪಾಯಿ ಮೌಲ್ಯ ಕುಸಿದಾಗ, ಭಾರತದ ಸರಕು ಮತ್ತು ಸೇವೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಗ್ಗವಾಗುತ್ತವೆ. ಇದು ಐಟಿ (IT), ಫಾರ್ಮಾ (ಔಷಧ) ಮತ್ತು ಜವಳಿ ಉದ್ಯಮಗಳಿಗೆ ಹೆಚ್ಚಿನ ರಫ್ತು ಆದೇಶಗಳನ್ನು ತರಲಿದೆ. ವಿದೇಶದಲ್ಲಿರುವ ಭಾರತೀಯರು ತಮ್ಮ ಹಣವನ್ನು ಭಾರತಕ್ಕೆ ಕಳುಹಿಸಿದಾಗ ಹೆಚ್ಚಿನ ರುಪಾಯಿ ಮೌಲ್ಯವನ್ನು ಪಡೆಯುತ್ತಾರೆ. ಆಮದು ದುಬಾರಿಯಾಗುವುದರಿಂದ ಸ್ಥಳೀಯವಾಗಿ ವಸ್ತುಗಳನ್ನು ತಯಾರಿಸಲು (Make in India) ಪ್ರೋತ್ಸಾಹ ಸಿಗುತ್ತದೆ ಎಂದರು.

ಕಚ್ಚಾ ತೈಲ ಮತ್ತು ಯಂತ್ರೋಪಕರಣಗಳ ಆಮದು ದುಬಾರಿಯಾಗುವುದರಿಂದ ದೇಶದಲ್ಲಿ ಇಂಧನ ಮತ್ತು ಇತರೆ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ಪ್ರಧಾನಮಂತ್ರಿಯವರ ಮೇ 10 ರ ಘೋಷಣೆಯ ಸಕಾರಾತ್ಮಕ ಉದ್ದೇಶಗಳನ್ನು ಹೊಂದಿದೆ. ಸಂಕಷ್ಟದ ಸೂಚನೆ ಅಲ್ಲ, ಜವಾಬ್ದಾರಿಯುತ ನಾಯಕತ್ವದ ಸಂಕೇತವಾಗಿದೆ. ದೇಶದ ಆರ್ಥಿಕ ಭದ್ರತೆ, ಆತ್ಮನಿರ್ಭರತೆ, ಸ್ಥಳೀಯ ಕೈಗಾರಿಕೆಗಳ ಬೆಳವಣಿಗೆ, ದೀರ್ಘಕಾಲದ ಸ್ಥಿರ ಅಭಿವೃದ್ಧಿ ಇವುಗಳತ್ತ ಭಾರತವನ್ನು ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ. ಭಾರತ ಇಂದು ಸವಾಲುಗಳನ್ನು ಮಾತ್ರ ಎದುರಿಸುತ್ತಿಲ್ಲ, ಅವನ್ನು ಅವಕಾಶಗಳಾಗಿ ಪರಿವರ್ತಿಸುತ್ತಿದೆ ಎಂದರು.ಸಹ ಸಂಚಾಲಕ ಜಿ.ಯೋಗೀಶ್‌ ಪೈ, ಸದಸ್ಯರಾದ ರಾಜೇಶ್‌ ರಾವ್‌ ಎಂ., ಸಿಎ ಶ್ರೀಕೃಷ್ಣ ಭಟ್‌ ಕೊಕ್ಕಡ, ವಸಂತ ಶೆಟ್ಟಿ, ಡಾ.ಎಸ್‌. ಎಂ.ಶಿವಪ್ರಕಾಶ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಬಕವಿಯಲ್ಲಿದೆ ೮೪ ಸದಸ್ಯರನ್ನೊಳಗೊಂಡ ಅವಿಭಕ್ತ ಕುಟುಂಬ!
ಶಿವಂ ಅಸೋಸಿಯೇಟ್ ಕಚೇರಿ ಮೇಲೆ ದಾಳಿ