ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘಗಳ ಜಂಟಿ ಸಹಯೋಗದಲ್ಲಿ ‘ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಮುದ್ರಣ ಮಾಧ್ಯಮದ ಪ್ರಸ್ತುತತೆ’ ವಿಷಯ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.
ದಿನಪತ್ರಿಕೆಗಳು ಮಾತ್ರವೇ ವೈವಿಧ್ಯಮಯವಾದ ವಿಷಯ ಮತ್ತು ದೃಷ್ಟಿಕೋನಗಳನ್ನು ನೀಡುವ ಸಶಕ್ತ ಸಾಧನಗಳು. ವಿವಿಧ ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್, ಗೂಗಲ್ನಂತಹ ನ್ಯೂಸ್ ಫೀಡರ್ಗಳಲ್ಲಿ ಪಡೆಯುವ ಸುದ್ದಿಗಳು ಒಮ್ಮುಖದ ವಾದ, ಆಲೋಚನಾ ಕ್ರಮ, ಆಭಿರುಚಿಗಳನ್ನು ಬಿತ್ತುತ್ತವೆ. ಸರ್ಚ್ ಎಂಜಿನ್ ಆಪ್ಟಿಮೈಸೇಶನ್, ನ್ಯೂಸ್ ಆಲ್ಗಾರಿದಂಗಳ ಪ್ರಕ್ರಿಯೆಯೇ ಇದಕ್ಕೆ ಕಾರಣ ಎಂದರು.ಟಿವಿ ಚಾನಲ್ಗಳು ಬ್ರೇಕಿಂಗ್ ಮೌಲ್ಯ ಆಧರಿಸಿ ಸುದ್ದಿಗಳ ಹಿಂದೆ ಬೀಳುತ್ತವೆ. ಡಿಜಿಟಲ್ ಸುದ್ದಿ ತಾಣಗಳು ಕ್ಲಿಕ್, ಶೇರ್, ವ್ಯೂವ್ಗಳ ಗಳಿಸುವ ದೃಷ್ಟಿಕೋನದಲ್ಲಿ ಮತ್ತು ಆವಸರದಲ್ಲಿ ಸುದ್ದಿಗಳನ್ನು ರೂಪಿಸುತ್ತವೆ. ವೈಭವೀಕೃತ ಆಯಾಮಗಳನ್ನು ಹುಡುಕಿ ವಿಷಯ (ಕಂಟೆಂಟ್ ಕ್ರಿಯೇಷನ್) ರೂಪಿಸುತ್ತಾರೆ. ಮುದ್ರಣ ಮಾಧ್ಯಮವು ಸುದ್ದಿಗೆ ಇರಬಹುದಾದ ಸಮಗ್ರ ಆಯಾಮಗಳನ್ನು ತರ್ಕಿಸಿ, ಬರವಣಿಗೆಯ ಶೈಲಿ, ಓದುಗರ ಸದಭಿರುಚಿಗಳನ್ನು ಗಮನದಲ್ಲಿರಿಸಿಕೊಂಡು ವಸ್ತುನಿಷ್ಠ, ವಿಶ್ವಾಸಾರ್ಹ ಮಾದರಿಯಲ್ಲಿ ಸುದ್ದಿ ನೀಡುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಭಾಗದ ಅಧ್ಯಕ್ಷ ಪ್ರೊ. ಎಂ.ಆರ್. ಸತ್ಯಪ್ರಕಾಶ್, ಪ್ರೊ. ಸತೀಶ್ ಕುಮಾರ್, ಪ್ರೊ.ವರ್ಗೀಸ್, ಸಂಘದ ಕಾರ್ಯದರ್ಶಿ ಶರತ್ಕುಮಾರ್ ಇದ್ದರು.
ಉಪನ್ಯಾಸ ಕಾರ್ಯಕ್ರಮದಲ್ಲಿ ಪತ್ರಕರ್ತ ರವಿಶಂಕರ್ ಭಟ್ ಅವರನ್ನು ಅಭಿನಂದಿಸಲಾಯಿತು.