ಮಾನಸಿಕವಾಗಿ ಸ್ವಾಸ್ಥ್ಯವಾಗಿಸುವ ಜೈಲು ಶುದ್ಧೀಕರಣ ಕೇಂದ್ರಗಳು: ಪ್ರೊ. ಟಿ.ಎಂ. ಭಾಸ್ಕರ್

KannadaprabhaNewsNetwork |  
Published : Jun 22, 2025, 11:47 PM IST
21ಎಚ್‌ವಿಆರ್2 | Kannada Prabha

ಸಾರಾಂಶ

ಜೈಲಿನಲ್ಲಿರುವ ಕೈದಿಗಳ ಕುರಿತು ಅವರ ಹೆತ್ತವರು ಕೊರಗುತ್ತಾರೆ, ಮರುಗುತ್ತಾರೆ. ಕೋಪಕ್ಕೆ ಬುದ್ಧಿ ಕೊಟ್ಟ ಪರಿಣಾಮ ಜೈಲಿಗೆ ಬಂದಿರುವುದರಿಂದ ನಡತೆ ಶುದ್ಧೀಕರಿಸಿಕೊಳ್ಳಲು ಅವಕಾಶ ಆಗುತ್ತದೆ.

ಹಾವೇರಿ: ಮನುಷ್ಯರನ್ನು ಮಾನಸಿಕವಾಗಿ ಸ್ವಾಸ್ಥ್ಯವಾಗಿಸುವ ಜೈಲುಗಳು ಅಧ್ಯಯನ ಶಿಬಿರಗಳು. ಇಂಥ ಶಿಬಿರದಲ್ಲಿ ಪಾಲ್ಗೊಂಡು ಮನಪರಿವರ್ತನೆಯಾಗಿ ಹೊರಬನ್ನಿ ಎಂದು ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಅಭಿಪ್ರಾಯಪಟ್ಟರು.

ಶನಿವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಾವೇರಿ ಜೈಲಿನಲ್ಲಿ ಏರ್ಪಡಿಸಿದ್ದ ಮೂರು ದಿನಗಳ ಸಾಹಿತ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಜೈಲಿನಲ್ಲಿರುವ ಕೈದಿಗಳ ಕುರಿತು ಅವರ ಹೆತ್ತವರು ಕೊರಗುತ್ತಾರೆ, ಮರುಗುತ್ತಾರೆ. ಕೋಪಕ್ಕೆ ಬುದ್ಧಿ ಕೊಟ್ಟ ಪರಿಣಾಮ ಜೈಲಿಗೆ ಬಂದಿರುವುದರಿಂದ ನಡತೆ ಶುದ್ಧೀಕರಿಸಿಕೊಳ್ಳಲು ಅವಕಾಶ ಆಗುತ್ತದೆ. ಹೀಗಾಗಿ ಜೈಲುಗಳೆಂದರೆ ಬಂದಿಖಾನೆಗಳಲ್ಲ. ಶುದ್ಧೀಕರಣ ಕೇಂದ್ರಗಳು ಎಂದರು.

ಸಾಹಿತ್ಯ ಕಮ್ಮಟದ ಸಂಚಾಲಕ ಗಣೇಶ ಅಮೀನಗಡ ರಂಗ ಚಿಕಿತ್ಸೆ ಕುರಿತು ಮಾತನಾಡಿ, ರಂಗಭೂಮಿ, ಸಂಗೀತ, ಸಾಹಿತ್ಯದ ಸಂಗ ಮಾಡುವ ಮೂಲಕ ಬದಲಾಗಬೇಕು. ನಾಟಕಗಳನ್ನು ನೋಡಿ, ನಾಟಕದಲ್ಲಿ ಅಭಿನಯಿಸುವುದರಿಂದ ಬದುಕುವ ಬಗೆಯನ್ನು ಅರಿಯುತ್ತಿರಿ ಎಂದರು.

ರಾಜ್ಯದ ಅನೇಕ ಜೈಲುಗಳಲ್ಲಿ ಯುವಕರೇ ಹೆಚ್ಚಿದ್ದಾರೆ. ದೇಶದ ಆಸ್ತಿಯಾದ ಯುವಕರು ಅಪರಾಧ ಚಟುವಟಿಕೆಗಳಿಂದ ದೂರವಾಗಬೇಕು. ಇದಕ್ಕೆ ಪೂರಕವಾಗಿ ಚಿಕಿತ್ಸೆಯಾಗುವ ಸಾಹಿತ್ಯ ಹಾಗೂ ರಂಗಭೂಮಿಯ ಸಂಸ್ಕಾರ ಪಡೆದು ಬದಲಾಗಬೇಕು ಎಂದರು.

ಜಾನಪದ ಕಲಾವಿದ ಬಸವರಾಜ ಶಿಗ್ಗಾಂವ್ ಮತ್ತು ಬಸವರಾಜ ಕರಡಿ ತತ್ಪಪದ ಹಾಡಿದರು. ಜೈಲಿನ ಪ್ರಭಾರ ಅಧೀಕ್ಷಕ ಬಿ.ಯು. ಖಿಲಾರಿ ಉಪಸ್ಥಿತರಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.ವೆಂಕಟಾಪುರದಲ್ಲಿ ರೈತರಿಗೆ ತರಬೇತಿ

ರಾಣಿಬೆನ್ನೂರು: ಬೀಜೋತ್ಪಾದನೆಯಿಂದ ಅಧಿಕ ಲಾಭವಿದ್ದು, ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ತೋಟಗಾರಿಕೆ ವಿಜ್ಞಾನಿ ಡಾ. ಸಂತೋಷ್ ಎಚ್.ಎಂ. ತಿಳಿಸಿದರು.ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ತೋಟಗಾರಿಕೆ ಬೆಳೆಗಳಲ್ಲಿ ಬೀಜೋತ್ಪಾದನೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುಂಬಳ ಜಾತಿಯಲ್ಲಿ ಗಂಡು ಮತ್ತು ಹೆಣ್ಣು ಹೂವುಗಳ ಜಾತಿ ಬೇರೆಯಾಗಿದ್ದು, ಒಂದೇ ಬಳ್ಳಿಯ ವಿವಿಧ ಸ್ಥಳದಲ್ಲಿ ಬಿಡುತ್ತವೆ. ಹೂವುಗಳು ಗಾತ್ರ ದೊಡ್ಡದಾಗಿರುವ ಕಾರಣ ಪರಕೀಯ ಪರಾಗಸ್ಪರ್ಶ ಮಾಡುವುದು ಸುಲಭ. ತರಕಾರಿ ಬೆಳೆಯಲ್ಲಿ ಬೀಜೋತ್ಪಾದನೆಗೆ ಬೇಸಾಯಕ್ಕೆ ಸೂಕ್ತ ಹವಾಗುಣ, ಕ್ಷೇತ್ರ ಆಯ್ಕೆ, ಸುರಕ್ಷಿತ ಬೇರ್ಪಡೆ, ಅಂತರ, ಭೂಮಿ ಸಿದ್ಧತೆ, ತಳಿಗಳ ಆಯ್ಕೆ, ಬೀಜೋಪಚಾರ, ಬಿತ್ತನೆ ವಿಧಾನ ಮುಂತಾದ ವಿಷಯಗಳ ಕುರಿತು ರೈತರಿಗೆ ಸಮರ್ಪಕ ಮಾಹಿತಿ ನೀಡಿದರು.ಹಿತ್ತಲ ಕೋಳಿ ಸಾಕಾಣಿಕೆ ಕುರಿತು ಪಶು ವಿಜ್ಞಾನಿ ಡಾ. ಮಹೇಶ ಕಡಗಿ ರೈತರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮದ ಸುಮಾರು 25ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ