ಬೆಳ್ಳಂದೂರು ಸಮೀಪ ಖಾಸಗಿ ನಿರ್ಮಿತ ಫ್ಲೈಓವರ್‌ ಶೀಘ್ರ ಜನರ ಸಂಚಾರಕ್ಕೆ ಮುಕ್ತ

KannadaprabhaNewsNetwork |  
Published : May 29, 2026, 03:45 AM IST
ಖಾಸಗಿಯಾಗಿ ನಿರ್ಮಿಸಿರುವ ಫ್ಲೈಓವರ್‌ ನೋಟ. | Kannada Prabha

ಸಾರಾಂಶ

ಬೆಳ್ಳಂದೂರು ಹೊರ ವರ್ತುಲ ರಸ್ತೆಯಿಂದ ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕಿಸುವ ಖಾಸಗಿ ಸಂಸ್ಥೆ ನಿರ್ಮಿತ 1.5 ಕಿ.ಮೀ ಉದ್ದದ ಫ್ಲೈಓವರ್ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಮುಕ್ತವಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಳ್ಳಂದೂರು ಹೊರ ವರ್ತುಲ ರಸ್ತೆಯಿಂದ ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕಿಸುವ ಖಾಸಗಿ ಸಂಸ್ಥೆ ನಿರ್ಮಿತ 1.5 ಕಿ.ಮೀ ಉದ್ದದ ಫ್ಲೈಓವರ್ ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಮುಕ್ತವಾಗಲಿದೆ.

ಹೊರ ವರ್ತುಲ ರಸ್ತೆಯಲ್ಲಿರುವ ಪ್ರೆಸ್ಟೀಜ್ ಟೆಕ್‌ಪಾರ್ಕ್‌ ಮೂಲಕ ಹಾದು ಹೋಗುವ ಈ ಫ್ಲೈಓವರ್‌ ವಿವಿಧ ಟೆಕ್‌ಪಾರ್ಕ್‌ಗಳ ವಾಹನಗಳು, ಉದ್ಯೋಗಿಗಳು ಓಡಾಟಕ್ಕೆ ಅನುಕೂಲ ಕಲ್ಪಿಸುತ್ತದೆ. ಅನುಮೋದನೆ ಪಡೆದ 1 ವರ್ಷದಲ್ಲೇ ನಿರ್ಮಾಣ ಕೆಲಸ ಪೂರ್ಣಗೊಳಿಸಲಾಗಿದೆ. ಟೆಕ್‌ಪಾರ್ಕ್‌ನ ಉದ್ಯೋಗಿಗಳ ಸಂಚಾರಕ್ಕೆ ಸೋಮವಾರದಿಂದ ಮುಕ್ತಗೊಳಿಸಲಾಗಿದೆ. ಸಣ್ಣ ಪುಟ್ಟ ಕೆಲಸಗಳು ಬಾಕಿ ಉಳಿದಿದ್ದು, ಸಾರ್ವಜನಿಕ ವಾಹನಗಳ ಸಂಚಾರಕ್ಕೆ ಶೀಘ್ರದಲ್ಲೇ ಮುಕ್ತಗೊಳ್ಳಲಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಪಾಲಿಕೆಯಿಂದ ಅನುಮೋದನೆ ನೀಡಲಾಗಿತ್ತು. 1 ವರ್ಷದಲ್ಲಿ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಲಾಗಿದೆ. ಪ್ರೆಸ್ಟೀಜ್ ಟೆಕ್‌ ಪಾರ್ಕ್‌ ಒಳಗಿನಿಂದಲೇ ಹಾದು ಹೋಗುವ ಈ ಫ್ಲೈಓವರ್‌ ಬಹುತೇಕ ಮಳೆ ನೀರು ಕಾಲುವೆಯ ಬಫರ್ ವಲಯ ಸೇರಿ ಸಾರ್ವಜನಿಕ ರಸ್ತೆಯಲ್ಲಿ ನಿರ್ಮಾಣಗೊಂಡಿದೆ.

ಒಪ್ಪಂದದ ಪ್ರಕಾರ ಈ ಫ್ಲೈಓವರ್‌ನಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೂ ಅವಕಾಶ ಕಲ್ಪಿಸಲಾಗುತ್ತದೆ ಎಂದು ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

ದಟ್ಟಣೆ ನಿವಾರಣೆ:

ಟೆಕ್‌ಪಾರ್ಕ್‌ನ ಸುಮಾರು 5000 ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಜೊತೆಗೆ ಹೊರ ವರ್ತುಲ ರಸ್ತೆಯಿಂದ ಯಮಲೂರು ಮತ್ತು ಎಚ್‌ಎಎಲ್ ಏರ್‌ಪೋರ್ಟ್ ಕಡೆ ತೆರಳುವ ವಾಹನ ಸವಾರರಿಗೆ ಪರ್ಯಾಯ ಮಾರ್ಗವಾಗಲಿದೆ. ಕಾಡುಬೀಸನಹಳ್ಳಿ ಹಾಗೂ ಮಾರತ್ತಹಳ್ಳಿ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗುವ ಕಾರಣ ಪರ್ಯಾಯ ಮಾರ್ಗವಾಗಿ ಈ ಫ್ಲೈಓವರ್ ಹೆಚ್ಚು ಅನುಕೂಲವಾಗಲಿದೆ. ಈಗಾಗಲೇ ಬೆಳ್ಳಂದೂರು ಕೆರೆಯ ರಸ್ತೆಯನ್ನು ಅಗಲೀಕರಣ ಮಾಡಲಾಗಿದೆ ಎಂದು ಜಿಬಿಎ ಅಧಿಕಾರಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ವಿದಾಯ
ಸಿದ್ದು ಮಾರ್ಗದರ್ಶನದಲ್ಲಿ ನಡೆಯುವೆ : ಡಿಕೆಶಿ ವಾಗ್ದಾನ