ಕನ್ನಡಪ್ರಭ ವಾರ್ತೆ ಬೆಳಗಾವಿ
ಶುಕ್ರವಾರ ನಗರದ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ, ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಘಟಕ ಆಯೋಜಿಸಿದ್ದ ಬಂಡಾಯ ಸಾಹಿತ್ಯ: ಹೊಸ ತಲೆಮಾರು ಅಭಿಯಾನದ ಅಂಗವಾಗಿ ಸಂಘಟಿಸಲಾಗುವ ರಾಜ್ಯ ಮಟ್ಟದ ವಿಚಾರ ಸಂಕಿರಣದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಸಾಮಾಜಿಕ ಜವಾಬ್ದಾರಿಯಿಂದ ಬರೆಯುವವರು ಕ್ಲಿಷ್ಟಕರ ಗಂಡಾಂತರಗಳನ್ನು ಎದುರಿಸಲೇಬೇಕಾಗುತ್ತದೆ. ಇದು ಸಾಹಿತಿ ಕಲಾವಿದರ ಆತ್ಮಸಾಕ್ಷಿ ಪ್ರಕ್ರಿಯೆಯಾಗಿದೆ ಎಂದರು.
ರಂಗಕರ್ಮಿ ರವಿ ಕೋಟಾರಗಸ್ತಿ ಮಾತನಾಡಿ, ಪ್ರಗತಿಪರತೆಯನ್ನು ಬರಹದಲ್ಲಿ ಮಾತ್ರ ಅಭಿವ್ಯಕ್ತಿಸುವುದಲ್ಲ, ಅದನ್ನು ಬದುಕಿನ ಭಾಗವಾಗಿ ಅನುಸರಿಸಬೇಕು. ಬದುಕು ಆದರ್ಶಮಯವಾಗಿರಬೇಕು ಎನ್ನುವುದು ನಮ್ಮ ಅದ್ಯತೆಯಾಗಿರಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ ಮಾತನಾಡಿ, ಸಾಹಿತ್ಯ ಚಳುವಳಿಯ ಸೃಷ್ಟಿ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಹೊಸತಲೆಮಾರಿಗೆ ಗಟ್ಟಿಯಾದ ಸೈದ್ಧಾಂತಿಕ ಬದ್ಧತೆಯನ್ನು ಕಾರ್ಯಾಗಾರ ಮತ್ತು ವಿಚಾರ ಸಂಕಿರಣಗಳ ಮೂಲಕ ಕಳೆದ 46 ವರ್ಷಗಳಿಂದ ಬಂಡಾಯ ಸಾಹಿತ್ಯ ಸಂಘಟನೆ ಜವಾಬ್ದಾರಿಯಿಂದ ನಿರ್ವಹಿಸುತ್ತಾ ಬಂದಿದೆ. ಹೊಸ ತಲೆಮಾರನ್ನು ಒಳಗೊಳ್ಳುವುದರ ಭಾಗವಾಗಿ ಬರುವ ಮೇ.2ರಂದು ಬೆಳಗಾವಿಯಲ್ಲಿ ವಿಚಾರ ಸಂಕಿರಣವನ್ನು ಬಂಡಾಯ ಸಂಘಟನೆ ಆಯೋಜಿಸುತ್ತಿದೆ ಎಂದು ತಿಳಿಸಿದರು.