ಅಪರೂಪದ ಗೂಬೆ ಮರಿಗಳ ರಕ್ಷಣೆ

KannadaprabhaNewsNetwork |  
Published : Sep 16, 2024, 01:48 AM IST
ಅಪರೂಪದ ಗೂಬೆ ಮರಿಗಳ ರಕ್ಷಣೆ. | Kannada Prabha

ಸಾರಾಂಶ

ಅಪರೂಪದ ಗೂಬೆ ಮರಿಗಳ ರಕ್ಷಣೆ

ಕನ್ನಡಪ್ರಭ ವಾರ್ತೆ ತುಮಕೂರುತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜ್ ಆವರಣದಲ್ಲಿ ಅನಾಥವಾಗಿದ್ದ 5 ಗೂಬೆ ಮರಿಗಳನ್ನು ರಕ್ಷಿಸಲಾಗಿದೆ.ಕಾಲೇಜು ಆವರಣದಲ್ಲಿ ಗೂಬೆ ಮರಿಗಳನ್ನು ಕಂಡ ಡಾ. ಮಾಂತೇಶ್ ಕೂಡಲೇ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಂಸ್ಥೆಯ ಉರಗ ಸಂರಕ್ಷಕ ಮನು ಅಗ್ನಿವಂಶಿ ಮತ್ತು ಚೇತನ್ ಅಪರೂಪದ 5 ಬರ್ನ್‌ ಔಲ್ ಜಾತಿಯ (ಕಣಜದ ಗೂಬೆ) ಮರಿಗಳನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಈ ವೇಳೆ ಮಾತನಾಡಿದ ಉರಗ ಸಂರಕ್ಷಕ ಮನು ಅಗ್ನಿವಂಶಿ 5 ಮರಿಗಳನ್ನು ವಲಯ ಅರಣ್ಯಾಧಿಕಾರಿ ನಮಿತಾ ರವರ ಅನುಮತಿ ಪಡೆದು ಬೆಂಗಳೂರಿನ ಪೀಪಲ್ ಫಾರ್ ಆ್ಯನಿಮಲ್ಸ್ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು. ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆ ಮಾಡಲು 9964519576 ಕರೆಮಾಡಬಹುದು ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ