ಸೆ.1ರಂದು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ

KannadaprabhaNewsNetwork |  
Published : Aug 31, 2026, 02:30 AM IST
ಕಾರಟಗಿಯಲ್ಲಿ ಕರ್ನಾಟಕ ನಾಗರಿಕ ಸಂಘಟನೆಗಳ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕರಪತ್ರ ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ರಾಜ್ಯದ ೬೦ ಲಕ್ಷ ಅರ್ಹ ಮತದಾರರ ಮತದಾನದ ಹಕ್ಕನ್ನು, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ರದ್ದುಗೊಳಿಸಿರುವುದು

ಕಾರಟಗಿ: ರಾಜ್ಯದಲ್ಲಿ ವಿಶೇಷ ಮತದಾನ ಪರಿಷ್ಕರಣೆಯ ಹೆಸರಿನಲ್ಲಿ ೪೩,೮ ಲಕ್ಷ ಜನ ಮತದಾರರನ್ನು ಸ್ಥಳಾಂತರದ ಹೆಸರಿನಲ್ಲಿ ತೆಗೆಯುವ ಹುನ್ನಾರ ನಡೆದಿದ್ದೆ. ಇದನ್ನು ವಿರೋಧಿಸಿ ಸೆ. ೧ರಂದು ಚುನಾವಣೆ ಆಯೋಗದ ವಿರುದ್ಧ ಬೆಂಗಳೂರು ಚಲೋ ನಡೆಸಲಿದ್ದು, ಪ್ರತಿಭಟನೆ ಮೆರವಣಿಗೆ ಮೂಲಕ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ನಾಗರಿಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ದುರುಗೇಶ ಬರಗೂರು ಹೇಳದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ರಾಜ್ಯದ ೬೦ ಲಕ್ಷ ಅರ್ಹ ಮತದಾರರ ಮತದಾನದ ಹಕ್ಕನ್ನು, ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ರದ್ದುಗೊಳಿಸಿರುವುದು ಮತ್ತು ೪೩.೮ ಲಕ್ಷ ಮತದಾರರಿಗೆ ನಿಮ್ಮ ನಾಗರಿಕತ್ವದ ಬಗ್ಗೆ ನಮಗೆ ಅನುಮಾನವಿದೆ ಎಂದು ನೋಟೀಸ್ ಕಳಿಸಿ ಮಾನಸಿಕ ಹಿಂಸೆಗೆ ಗುರಿಪಡಿಸಿರುವುದು ಮತ್ತು ಹೊಸದಾಗಿ ಸೇರ್ಪಡೆಯಾಗಬೇಕಿರುವ ಕನಿಷ್ಟ ೧೫ ಲಕ್ಷ ಮತದಾರರ ನೊಂದಾವಣಿ ಸಮಸ್ಯಾತ್ಮಕಗೊಳಿಸಿರುವ ಚುನಾವಣಾ ಆಯೋಗದ ವಿರುದ್ಧ ಸೆ.೧ ರಂದು ಬೆಂಗಳೂರು ಚಲೋ ನಡೆಸಲಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಚುನಾವಣಾ ಆಯೋಗದ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಆಕ್ಷೇಪಣೆಗೆ ಒಂದು ತಿಂಗಳ ಕಾಲಾವಕಾಶ ಸಾಲದು ಆರು ತಿಂಗಳು ನೀಡಬೇಕು. ಬೇರೆ ಕಡೆ ಸ್ಥಳಾಂತರಗೊಂಡ ಮತದಾರರನ್ನು ಗುರುತಿಸಿ ಎನ್ಯುಮರೇಷನ್ ಫಾರಂ ನೀಡುವ ಕೆಲಸ ಆಗಬೇಕು. ಕರ್ನಾಟಕದ ೨೦೨೫ರ ಮತದಾರರ ಪಟ್ಟಿಯಲ್ಲಿದ್ದ ೫.೫೪ಕೋಟಿ ಮತಗಳ ಪೈಕಿ ೧.೦೮ ಕೋಟಿ ಮತ ಶಾಶ್ವತವಾಗಿ ತೆಗೆಯಲು ಮುಂದಾಗಿರುವುದು ಸರಿಯಲ್ಲ. ಇಂಥ ದೋಷಪೂರಿತ ಪ್ರಕ್ರಿಯೆ ರೂಪಿಸಿರುವ ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷ ಜ್ಞಾನೇಶ್‌ಕುಮಾರ್ ಅವರು ರಾಜಿನಾಮೆ ಕೊಡಬೇಕೆಂದು ಒತ್ತಾಯಿಸಿದರು.

ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಎಂ.ಡಿ.ಸಿರಾಜ್ ಮಾತನಾಡಿ, ಯಾವೊಬ್ಬ ಮತದಾರರನ್ನು ಸಕಾರಣವಿಲ್ಲದೆ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಡಿಲೀಟ್ ಮಾಡಲಾಗಿರುವ ಕನಿಷ್ಠ ೬೦ ಲಕ್ಷ ಮತದಾರರು ಸೇರ್ಪಡೆಗೊಳ್ಳಲು ಅವಕಾಶ ನೀಡಬೇಕು. ಗ್ರಾಮಸಭೆ ಹಾಗೂ ವಾರ್ಡ್‌ ಸಭೆಗಳನ್ನು ಕಡ್ಡಾಯವಾಗಿ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಕ್ಷೇಪಣೆ ಹಾಗೂ ಅಫೀಲು ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಬೇಕು ಎಂದರು.

ಮುಖಂಡ ಖಾಜಾ ಹುಸೇನ್ ಮುಲ್ಲಾ, ಲಿಂಗತ್ವ ಅಲ್ಪಸಂಖ್ಯಾತರ ಮುಖಂಡೆ ರಮ್ಯಾ ಮಾತನಾಡಿ, ಈ ಎಸ್ಐಆರ್ ಪ್ರತಿಕ್ರಿಯೆ ದೋಷಪೂರಿತದ್ದಾಗಿದೆ. ಈ ಅವೈಜ್ಞಾನಿಕ ಎಸ್ಐಆರ್ ಪ್ರಕ್ರಿಯೆಯಿಂದ ರಾಷ್ಟ್ರದ ಕೋಟ್ಯಂತರ ಜನರ ಬದುಕು ಅಲ್ಲೋಲ ಕಲ್ಲೋಲವಾಗಿದೆ. ಆ ಕಾರಣಕ್ಕೆ ಈ ಇಡೀ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಕದ ತಟ್ಟಲಿದ್ದೇವೆ ಎಂದರು.

ಗೋಷ್ಠಿಯಲ್ಲಿ ನ್ಯಾಯವಾದಿ ಯಮನೂರು, ಸೋಮಶೇಖರ ಮೈಲಾಪುರ, ನಂದಿತ, ದುರುಗೇಶ, ಯಮುನಾ ಚಳ್ಳೂರು, ಕೆವಿಎಸ್ ಸಂಘಟನೆ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಖ್ಯಾಬಲ ಕಾಂಗ್ರೆಸ್‌ಗಿದ್ದರೂ ಪಿಕಾರ್ಡ್ ಬ್ಯಾಂಕ್ ಗದ್ದುಗೆ ಬಿಜೆಪಿಗೆ!
ವೈಚಾರಿಕ ಚಿಂತನೆ ಬೆಳೆಸಲು ಅಂಬೇಡ್ಕರ್ ಓದು ಪ್ರೇರಣೆ: ಜಗದೀಶ್