ಹಳಿಯಾಳದಲ್ಲಿ ಪೈಗಂಬರ್ ವಿರುದ್ಧ ಹೇಳಿಕೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Aug 30, 2024, 01:03 AM IST
29ಎಚ್.ಎಲ್.ವೈ-1: ಪ್ರವಾದಿ ಮಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿ ಮುಸ್ಲಿಂ ಧರ್ಮಿಯರ  ಧಾರ್ಮಿಕ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿರುವ ಮಹಾರಾಷ್ಟ್ರದ ರಾಮಗಿರಿ ಮಹಾರಾಜರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಳಿಯಾಳದ ಮುಸ್ಲಿಂ ಧರ್ಮಿಯರು, ಪಟ್ಟಣದ ವಿವಿಧ ಮೊಹಲ್ಲಾಗಳ ಪ್ರಮುಖರು, ಮುಸ್ಲಿಂ ಜನಪ್ರತಿನಿಧಿಗಳ ನಿಯೋಗವು ತಾಲೂಕಾ ಆಡಳಿತ ಸೌಧಕ್ಕೆ ತೆರಳಿ ರಾಷ್ಟ್ರಪತಿಗಳಿಗೆ  ಬರೆದ ಮನವಿಯನ್ನು  ಶಿರಸ್ತೆದಾರ ಅನಂತ ಚಿಪ್ಪಲಗಟ್ಟಿಯವರಿಗೆ ಸಲ್ಲಿಸಿದರು. . | Kannada Prabha

ಸಾರಾಂಶ

ಈ ಹೇಳಿಕೆ ಧಾರ್ಮಿಕ ಸಮುದಾಯಗಳ ಮಧ್ಯೆ ಶತ್ರುತ್ವ ಹುಟ್ಟಿಸುತ್ತಿವೆ. ಕೂಡಲೇ ರಾಮಗಿರಿ ಮಹಾರಾಜರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಹಳಿಯಾಳ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಮಹಾರಾಷ್ಟ್ರದ ರಾಮಗಿರಿ ಮಹಾರಾಜರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಮುಸ್ಲಿಂ ಧರ್ಮಿಯರು ಆಗ್ರಹಿಸಿದರು.ಗುರುವಾರ ಪಟ್ಟಣದ ವಿವಿಧ ಮೊಹಲ್ಲಾಗಳ ಪ್ರಮುಖರು, ಮುಸ್ಲಿಂ ಜನಪ್ರತಿನಿಧಿಗಳ ನಿಯೋಗವು ತಾಲೂಕು ಆಡಳಿತ ಸೌಧಕ್ಕೆ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿ ಅವರಿಗೆ ಸಲ್ಲಿಸಿದರು. ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿನ್ನರ್ ತಾಲೂಕಿನ ಶಹಾಪಂಚಲೆ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮಗಿರಿ ಮಹಾರಾಜ್ ಅವರು, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ನೀಡಿದ ಅವಮಾನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡಿದ್ದು, ಈ ಹೇಳಿಕೆಗಳು ಧಾರ್ಮಿಕ ಸಮುದಾಯಗಳ ಮಧ್ಯೆ ಶತ್ರುತ್ವ ಹುಟ್ಟಿಸುತ್ತಿವೆ. ಕೂಡಲೇ ರಾಮಗಿರಿ ಮಹಾರಾಜರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ನಿಯೋಗದಲ್ಲಿ ಮುಸ್ಲಿಂ ಗುರುಗಳಾದ ಮುಫ್ತಿ ಫಯಾಜ್ ಅಹ್ಮದ್ ಇಟ್ಟಂಗಿವಾಲೆ, ಮುಫ್ತಿ ಅರ್ಷದ ಶೇಖ್, ಹಾಪೀಜ್ ಅಶ್ರಫ್‌ ದಡವಾಡ, ಮೌಲಾನಾ ಅಷ್ಪಾಕ್ ಖತಾಲ್, ಮೌಲಾನಾ ಮೆಹಬೂಬ ಮದ್ನಳ್ಳಿ, ಸಮುದಾಯದ ಪ್ರಮುಖರಾದ ಎಲ್.ಎಸ್. ದಲಾಲ್, ಸಲಿಂ ಬಸರಿಕಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷ ಫಯಾಜ ಶೇಖ್, ಇಮ್ತಿಯಾಜ್ ಶೇಖ್, ಇಮ್ತಿಯಾಜ್ ಮನಿಯಾರ, ರಿಜ್ವಾನ್ ಕಿಲ್ಲೆದಾರ, ಇಲಿಯಾಸ ಬಳಿಗಾರ, ರಾಜು ಮುಲ್ಲಾ, ಇಮ್ರಾನ್ ಶೇಖ್, ಯುಸೂಫ್‌ ಕಿಲ್ಲೆದಾರ, ಫರೀದ ಸೌದಾಗಾರ, ಇಲಿಯಾಸ್ ತತ್ವಣಗಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!