ಕುದೂರು: ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ತುಮಕೂರು ಜಿಲ್ಲೆಯ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಮರೂರು ಹ್ಯಾಂಡ್ ಪೋಸ್ಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹೆದ್ದಾರಿಯಲ್ಲಿ ಪ್ರತಿಭಿಸಲು ಮುಂದಾದ ತಾಲೂಕಿನ ರೈತಸಂಘ, ಹಾಗೂ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಪಕ್ಷದ ನಾಯಕರೊಂದಿಗೆ ಪೊಲೀಸರು ಮಾತಿನ ಚಕಮಕಿ ನಡೆಸಿದ ಘಟನೆ ಜರುಗಿತು.
ಇದರಿಂದ ಕುಪಿತರಾದ ರೇವಣ್ಣರವರು ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಹೆದ್ದಾರಿಯಲ್ಲಿ ಕೂರಲು ಮುಂದಾದಾಗ, ಪೋಲೀಸರು ಅವರನ್ನು ತಡೆದರು. ಸರ್ ಇದು ನಿಮ್ಮದೇ ಸರ್ಕಾರ, ನೀವೇ ಹೀಗೆ ಪ್ರತಿಭಟನೆ ಮಾಡಿದರೆ ಹೇಗೆ? ದಯವಿಟ್ಟು ಕಾನೂನನ್ನು ಗೌರವಿಸಿ. ರಸ್ತೆ ಬಂದ್ ಮಾಡಲು ಅವಕಾಶವಿಲ್ಲ. ಚುನಾವಣೆ ನೀತಿ ಸಂಹಿತೆ ಇನ್ನು ಮುಗಿದಿಲ್ಲ ಎಂದು ಹೇಳಿ ಪ್ರತಿಭಟನೆಕಾರರು ರಸ್ತೆಗೆ ಬರದಂದೆ ಪೊಲೀಸರು ವೃತ್ತಾಕಾರವಾಗಿ ಹಗ್ಗ ಹಿಡಿದು ರಸ್ತೆ ಬಂದ್ ಮಾಡಲು ಅವಕಾಶ ಕೊಡಲಿಲ್ಲ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಸರ್ಕಾರದಿಂದ ಈಗಾಗಲೇ ಯೋಜನೆ ಮಂಜೂರಾಗಿ ಹಣವೂ ಬಿಡುಗಡೆಯಾಗುತ್ತಿದೆ. ತಜ್ಞರ ಸಮಿತಿಯನ್ನು ಆಧರಿಸಿ ಕುಡಿಯುವ ನೀರನ್ನು ಮಾಗಡಿ ತಾಲೂಕಿನ 86 ಕೆರೆಗಳಿಗೆ ಹರಿಸಬೇಕು ಎಂದು ತೀರ್ಮಾನಿಸಿದ ನಂತರವೂ ತುಮಕೂರು ಜಿಲ್ಲೆಯ ನಾಯಕರು ಹೇಮಾವತಿ ನದಿ ನೀರು ಮಾಗಡಿ ತಾಲೂಕಿಗೆ ಕೊಡುವುದಿಲ್ಲ ಎಂದು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಅಕ್ರೋಶ ವ್ಯಕ್ತಪಡಿಸಿದರು.ನಮ್ಮ ಹೋರಾಟ ಸರ್ಕಾರದ ವಿರೋಧ ಅಲ್ಲ. ಮಾಗಡಿ ತಾಲೂಕಿಗೆ ನೀರು ಕೊಡವುದಿಲ್ಲ ಎಂದು ಪ್ರತಿಭಟನೆ ಮಾಡುತ್ತಿರುವ ತುಮಕೂರು ಜಿಲ್ಲೆಯ ನಾಯಕರುಗಳ ವಿರುದ್ಧವಾಗಿದೆ. 1993 ರಲ್ಲಿ ಚಾಲನೆಯಾದ ಶ್ರೀರಂಗ ಏತ ನೀರಾವರಿ ಯೋಜನೆಗೆ ಇದೇ ಸಿದ್ದರಾಮಯ್ಯರವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಎರಡೂ ಜಿಲ್ಲೆಯವರು ನೀರನ್ನು ಹಂಚಿಕೊಳ್ಳಲೆಂದು ಹಣ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದರು. ಆದರೆ ನಂತರ ಬಂದ ಸರ್ಕಾರಗಳಿಂದ ಕೆಲಸ ಕುಂಠಿತವಾಯಿತು. ಏನೇ ಆದರೂ ತಾಲೂಕಿಗೆ ನೀರು ಹರಿಸದೆ ನಾವು ವಿರಮಿಸುವುದಿಲ್ಲ ಎಂದು ಹೇಳಿದರು.
ಬೆಂಗಳೂರು ಹಾಗೂ ಸುತ್ತಮುತ್ತಲೂ ನೂರಾರು ಕೆರೆ ಕಟ್ಟಿ ನೀರಾವರಿಗೆ ಅನುಕೂಲ ಮಾಡಿಕೊಟ್ಟ ಮಾಗಡಿ ಕೆಂಪೇಗೌಡರ ತವರಿನ ಕೆರೆಗಳಿಗೆ ಇಂದು ನೀರು ಕೊಡುವುದು ಬೇಡ ಎಂದರೆ ಹೇಗೆ? ಸಿದ್ದಗಂಗಾ ಶ್ರೀಗಳ ಜನ್ಮಸ್ಥಳಕ್ಕೆ ನೀರು ಬೇಡ ಎಂದರೆ ಹೇಗೆ? ಬಾಲಗಂಗಾಧರನಾಥಸ್ವಾಮೀಜಿಯವರ ಕ್ಷೇತ್ರಕ್ಕೆ ನೀರು ಬೇಡ ಎಂದರೆ ಹೇಗೆ? ಸಾಲುಮರದ ತಿಮ್ಮಕ್ಕನ ಊರಿಗೆ ನೀರು ಕೊಡುವುದಿಲ್ಲ ಎಂದರೆ ಅದು ನ್ಯಾಯವಾದ ಹೋರಾಟವಾಗುತ್ದೆಯಾ? ಎಂದು ಪ್ರಶ್ನೆ ಮಾಡಿದರು.
ಈಗಾಗಲೇ 160 ಕೋಟಿ ಖರ್ಚು:
ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡದೆ ಏನೂ ದೊರಕುವುದಿಲ್ಲ. ನಾವೂ ಕೂಡಾ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಭರ್ತಿ ಮಾಡಿಸದೆ ವಿರಮಿಸುವುದಿಲ್ಲ. ಮಾಗಡಿಗೆ ನೀರು ಬರಬಾರದೆಂದು ಪ್ರತಿಭಟನೆ ಮಾಡುತ್ತಿರುವ ನಾಯಕರುಗಳು ಇದನ್ನು ಮನಗಾಣಬೇಕು ಎಂದು ಎಚ್ಚರಿಸಿದರು.
ಮಾಗಡಿ ತಾಲೂಕಿನ ಕೆರೆಗಳಿಗೆ ಅದಷ್ಟು ಬೇಗ ಹೇಮಾವತಿ ಹರಿಯುವಂತಾಗಬೇಕು, ಎಂದು ಮಾಗಡಿ ತಹಸೀಲ್ದಾರ್ ಶರತ್ಕುಮಾರ್ ಅವರಿಗೆ ಪ್ರತಿಭಟನೆಕಾರರು ಮನವಿ ಪತ್ರ ಸಲ್ಲಿಸಿದರು.
ಬಾಕ್ಸ್...........
ಬಾಕ್ಸ್ .....................
ಪ್ರತಿಭಟನೆಕಾರರಿಗಿಂತ ಪೋಲೀಸರ ಸಂಖ್ಯೆಯೇ ಹೆಚ್ಚುಸಂಘಟನೆಯ ವಿಷಯದಲ್ಲಿ ಒಮ್ಮತವಿಲ್ಲದ ಕಾರಣ ಪ್ರತಿಭಟನೆಗೆ ರೈತರು, ಸಂಘಸಂಸ್ಥೆಯ ಮುಖಂಡರು ಭಾಗವಹಿಸಿರಲಿಲ್ಲ. ಆದರೆ ಪೋಲೀಸಿನವರ ಸಂಖ್ಯೆಯೇ ಹೆಚ್ಚಾಗಿತ್ತು. ರಸ್ತೆ ಪ್ರತಿಭಟನೆ ಮಾಡಲು ತಡೆದಾಗ ಮಾಜಿ ಸಚಿವ ಎಚ್.ಎಂ.ರೇವಣ್ಣ ಪ್ರತಿಭಟನೆ ಮಾಡುವವರಿಗಿಂತ ಪೋಲೀಸಿನವರೇ ಹೆಚ್ಚಾಗಿದ್ದಾರೆ. ಹೀಗಾಗಿ ಅವರು ನಮ್ಮನ್ನು ಬಲವಾಗಿ ತಡೆಯುತ್ತಿದ್ದಾರೆ. ಇಷ್ಟು ಕಡಿಮೆ ಜನ ಸೇರುತ್ತಾರೆ ಎಂದಿದ್ದರೆ ನಾನೇ ಜನರನ್ನು ಸೇರಿಸುತ್ತಿದ್ದೆ. ನೀರು ಹರಿಯವ 86 ಕೆರೆಗಳ ಊರಿನ ಜನರು ಬಂದಿದ್ದರೂ ಹೋರಾಟ ಇನ್ನಷ್ಟು ತೀವ್ರವಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದವು.
ಬಾಕ್ಸ್ ................ಶಾಸಕರ ಅನುಪಸ್ಥಿತಿ
ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್ ಪ್ರತಿಭಟನೆಯಲ್ಲಿ ಭಾಗವಹಿಸದೇ ಇರುವುದು ಜನರಲ್ಲಿ ಬೇಸರ ಉಂಟು ಮಾಡಿತು. ಇಂತಹ ಸಂಕಷ್ಟದ ಸಂದರ್ಭದಲ್ಲಾದರೂ ಕ್ಷೇತ್ರದ ಎಲ್ಲಾ ಪಕ್ಷದ ಮುಖಂಡರುಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಜನರು ಮನವಿಯನ್ನು ಮಾಡಿದರು.24ಕೆಆರ್ ಎಂಎನ್ 1,2,3.ಜೆಪಿಜಿ
1.ಹೇಮಾವತಿ ನದಿ ನೀರು ಮಾಗಡಿ ತಾಲೂಕಿನ ಕೆರೆಗಳಿಗೆ ಹರಿಯಬೇಕು ಎಂದು ಹೆದ್ದಾರಿಯಲ್ಲಿ ರೈತ ಸಂಘಟನಗಳು ಹಾಗೂ ಇತರೆ ಸಂಘಟನೆಗಳು ಮರೂರು ಹ್ಯಾಂಡ್ ಪೋಸ್ಟ್ ನಲ್ಲಿ ಪ್ರತಿಭಟನೆ ಮಾಡಿದರು.2.ಮಾಜಿ ಸಚಿವ ಎಚ್.ಎಂ.ರೇವಣ್ಣರವರಿಗೆ ಡಿವೈಎಸ್ಪಿ ಪ್ರವೀಣ್ ಅವರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು3.
ಪ್ರತಿಭಟನೆಕಾರರು ಹೆದ್ದಾರಿಗೆ ಬರದಂತೆ ಪೋಲೀಸರು ಹಗ್ಗ ಹಿಡಿದು ಪ್ರತಿಭಟನೆಕಾರನ್ನು ತಡೆದಿರುವುದು.