ಪೆಹಲ್ಗಾಮ್ ಉಗ್ರರ ದಾಳಿ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Apr 24, 2025, 12:05 AM IST
(23ಎನ್.ಆರ್.ಡಿ1 ಉಗ್ರರ ದಾಳಿ ಖಂಡಿಸಿ ಕನ್ನಡ ಸಂಘಟಿನೆಯವರು ತಹಸೀಲ್ದಾರರಗೆ ಮನವಿ ನೀಡುತ್ತಿದ್ದಾರೆ.)  | Kannada Prabha

ಸಾರಾಂಶ

ದೇಶ ಮತ್ತು ವಿದೇಶದ ಜನರು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಉಗ್ರರು ಹಿಂದುಗಳನ್ನು ಗುರಿಯಾಗಿಸಿ ಗುಂಡಿಕ್ಕಿ ಕೊಂದದ್ದು ಅವಮಾನೀಯ

ನರಗುಂದ: ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಪ್ರದೇಶದಲ್ಲಿ ನಡೆದ ಪ್ರವಾಸಿಗರ ಮೇಲಿನ ಉಗ್ರರರ ದಾಳಿ ಖಂಡನೀಯ ಎಂದು ಕನ್ನಡಪರ ಸಂಘಟನೆ ಮುಖಂಡ ರಾಘವೇಂದ್ರ ಗುಜಮಾಗಡಿ ಹೇಳಿದರು.

ಅವರು ಬುಧವಾರ ಪಟ್ಟಣದ ಮಿನಿ ವಿಧಾನಸೌಧದಲ್ಲಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ತಹಸೀಲ್ದಾರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.ಜಮ್ಮು-ಕಾಶ್ಮೀರದ ಪೆಹಲ್ಗಾಮ್ ಪ್ರದೇಶ ಮಿನಿ ಸ್ವಿರ್ಜಲೆಂಡ್ ರೀತಿಯ ಪ್ರವಾಸ ತಾಣವಾಗಿದೆ, ಈ ಪ್ರದೇಶಕ್ಕೆ ದೇಶ ಮತ್ತು ವಿದೇಶದ ಜನರು ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಉಗ್ರರು ಹಿಂದುಗಳನ್ನು ಗುರಿಯಾಗಿಸಿ ಗುಂಡಿಕ್ಕಿ ಕೊಂದದ್ದು ಅವಮಾನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪರ ಸಂಘಟನೆ ಮುಖಂಡ ಚನ್ನು ನಂದಿ ಮಾತನಾಡಿ, ಕಳೆದ 2 ದಶಕಗಳಿಂದ ಜಮ್ಮ-ಕಾಶ್ಮೀರ ಉಗ್ರರಿಂದ ಮುಕ್ತವಾಗಿತ್ತು. ಆದರೆ ಮಂಗಳವಾರ ಮತ್ತೇ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ಮಾಡಿ 30 ಪ್ರವಾಸಿಗರನ್ನು ಕೊಂದಿದ್ದು ನೋವಿನ ಸಂಗತಿ, ಕೇಂದ್ರ ಸರ್ಕಾರ ಯಾವುದೇ ಮುಲಾಜಿಲ್ಲದೇ ಭಯೋತ್ಪಾದಕರನ್ನು ಕೊಂದು ಹಾಕಿ, ಇಲ್ಲವೇ ಜೀವಂತ ಸೆರೆ ಸಿಕ್ಕರೆ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು ಎಂದು ಮನವಿ ಮಾಡಿದರು.

ಶಿರಸ್ತೇದಾರ ಸುನಂದಾ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಸರ್ಕಾರಕ್ಕೆ ಮನವಿ ರವಾನೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಬಸವರಾಜ ತಾವರೆ, ವಿಕಾಶ ಮುಧೋಳೆ, ಬಸವರಾ ಸತ್ತಿಗೇರ, ಶಿವಯೋಗಿ ಬೆಂಡಿಗೇರಿ, ನಬಿಸಾಬ್‌ ಕಿಲ್ಲೇದಾರ, ಶಂಕರಪ್ಪ ಜಾಲಗಾರ, ನಾಗರಾಜ, ಶರಣಪ್ಪ ಗುದಗಿ ಸೇರಿದಂತೆ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ