ಕೆಐಎಡಿಬಿ ಕಚೇರಿ ಮುಂದೆ ದಲಿತ ಉದ್ಯಮದಾರರ ಸಂಘದಿಂದ ಪ್ರತಿಭಟನೆ । ಎಸ್ಸಿ, ಎಸ್ಟಿ ಕೈಗಾರಿಕೆಗಳಿಗೆ ನಿವೇಶನ ತೊಂದರೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೨೪ ಹಾಗೂ ಸಾಮಾನ್ಯ ವರ್ಗದ ೧೨ ಸೇರಿ ಒಟ್ಟು ೩೮ ಉದ್ಯಮದಾರರಿಗೆ ಕೈಗಾರಿಕೆಗಳನ್ನು ಸ್ಥಾಪಿಸಲು ಎದುರಾಗುತ್ತಿರುವ ನಿವೇಶನದ ತೊಂದರೆಯನ್ನು ಸರಿಪಡಿಸಿಕೊಡದ ಜಿಲ್ಲಾಡಳಿತ ಮತ್ತು ಕೆಐಎಡಿಬಿದಿಂದ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಜಿಲ್ಲಾ ದಲಿತ ಉದ್ಯಮದಾರರ ಸಂಘದ ವತಿಯಿಂದ ಕೆಐಎಡಿಬಿ ಕಚೇರಿ ಮುಂದೆ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಆರಂಭಿಸಲಾಗಿದೆ.
ಹಾಸನ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಉದ್ಯಮಿಗಳಾಗಲು ಕೆಐಎಡಿಬಿ ಹಾಗೂ ಹಾಸನ ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿಗೆ ನಿವೇಶನಗಳಿಗೆ ಅರ್ಜಿ ಸಲ್ಲಿಸಿದರು. ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಉನ್ನತಾಧಿಕಾರದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಯೋಜನೆಗಳು ಅನುಮೋದನೆಗೊಂಡು ಕೆಎಡಿಬಿಯವರು ಕೌಶಿಕ ಗ್ರಾಮದ ಸರ್ವೆ ನಂ.೩೨೮ರಲ್ಲಿ ನಿರ್ಮಾಣ ಮಾಡಿರುವ ಉಪ ಬಡಾವಣೆ ೪ರಲ್ಲಿರುವ ನಿವೇಶನಗಳನ್ನು ಮಂಜೂರು ಮಾಡಿ ನಂತರ ಹಣ ಪಾವತಿಸಿಕೊಂಡು ನಿವೇಶನದ ಹಂಚಿಕೆ ಪತ್ರಗಳನ್ನು ನೀಡಿದ ನಂತರ ಉಳಿಕೆ ಹಣವನ್ನು ಪಾವತಿಸಲು ವಿಳಂಬ ಮಾಡಿದ್ದೇವೆ ಎಂದು ಬಡ್ಡಿ ವಿಧಿಸಿ ನಿವೇಶನದ ಸಂಪೂರ್ಣ ಹಣವನ್ನು ಪಾವತಿಸಿದ ನಂತರ ಹಾಸನ ತಾಲೂಕಿನ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಿವೇಶನದ ನೋಂದಣಿ ಮಾಡಿಸಿ ಕೌಶಿಕ ಗ್ರಾಮ ಪಂಚಾಯಿತಿಯಲ್ಲಿ ಈ ಸ್ವತ್ತನ್ನು ಪಡೆದುಕೊಂಡು ಉದ್ಯಮವನ್ನು ಪ್ರಾರಂಭಿಸಲು ಬೇಕಾದ ಎಲ್ಲಾ ದಾಖಲಾತಿಗಳನ್ನು ನೀಡಿ ಸಾಲಗಳು ಮಂಜೂರಾಗಿದ್ದವು ಎಂದು ಹೇಳಿದರು.
ಕರ್ನಾಟಕ ದಲಿತ ಉದ್ಯಮದಾರರ ಸಂಘದ ರಾಜ್ಯಾ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸ್, ಭೀಮ್ ಆರ್ಮಿಯ ಪ್ರಸನ್ನ, ರಾಜ್ಯಾಧ್ಯಕ್ಷ ರಾಜಗೋಪಾಲ್, ಆರ್.ಪಿ.ಐ. ರಾಜ್ಯಾಧ್ಯಕ್ಷ ಸತೀಶ್, ವೆಂಕಟೇಶ್ ಹಾಗೂ ರಾಜ್ಯ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ದಲಿತ ಉದ್ಯಮದಾರರ ಸಂಘದ ಎಲ್ಲಾ ಜಿಲ್ಲೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇದ್ದರು.ಕೆಐಎಡಿಬಿ ಕಚೇರಿ ಎದುರು ಜಿಲ್ಲಾ ದಲಿತ ಉದ್ಯಮದಾರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.