ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಗ್ರಾಮಾಂತರ ಪೊಲೀಸ್ ಠಾಣೆ ಬಳಿಯ ಸರ್ವಿಸ್ ರಸ್ತೆ ಬಳಿ ಡಿಜೆ ವಾಹನವನ್ನು ತಡೆದಿದ್ದಕ್ಕೆ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಹಾಗೂ ಮುಖಂಡರಾದ ಪ್ರಭಂಜನ್, ಡಾ.ಸಿದ್ದಾರ್ಥ, ಕೇಶವ್, ಉಮೇಶ್ ಕಾರಜೋಳ ಹಾಗೂ ಮತ್ತಿತರರ ನಡುವೆ ವಾಗ್ವಾದ ನಡೆಯಿತು.ಸ್ಥಳಕ್ಕೆ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜೊತೆಗೆ ಮಾತುಕತೆ ನಡೆಸಿದ ಪರಿಣಾಮ ಅಂತಿಮವಾಗಿ ಒಂದು ವಾಹನದಲ್ಲಿ ನಾಲ್ಕು ಧ್ವನಿವರ್ಧಕಗಳಂತೆ ಒಟ್ಟು 16 ಬಾಕ್ಸ್ಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಶೋಭಾಯಾತ್ರೆಯಲ್ಲಿ ಯಾವುದೇ ತರಹದ ಚಲನಚಿತ್ರ ನಟರ ಭಾವಚಿತ್ರ ಇರುವ ಧ್ವಜಗಳನ್ನು ಶೋಭಯಾತ್ರೆಯಲ್ಲಿ ನಿಷೇಸಲಾಗಿದೆ ಎಂದು ಹಿಂದೂ ಮಹಾ ಗಣಪತಿ ಮಹೋತ್ಸವ ಸಮಿತಿ ತಿಳಿಸಿದೆ.