ಕನ್ನಡಪ್ರಭ ವಾರ್ತೆ ಮಧುಗಿರಿ
ಇಲ್ಲಿನ ಶಿರಾ ಗೇಟ್ ಬಳಿ ಇರುವ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಸುಮಾರು 300 ಜನ ಕಾರ್ಮಿಕ ಅರ್ಹ ಫಲಾನುಭವಿಗಳಿಗೆ ಟೂಲ್ ಕಿಟ್ ವಿತರಿಸಿ ಮಾತನಾಡಿದರು.
ಅಂದಾಜು 23 ವಿವಿಧ ಕಾರ್ಮಿಕ ವಲಯಗಳನ್ನು ಸರ್ಕಾರ ಪತ್ತೆ ಹಚ್ಚಿದೆ. ಸಾಮಾಜಿಕ ಭದ್ರತಾ ನಿರ್ವಹಣಾ ಮಂಡಳಿಯಲ್ಲಿ 10 ಸಾವಿರ ಕೋಟಿ ರು. ಹಣವಿದ್ದು, ಈ ಹಣವನ್ನು ಕಾರ್ಮಿಕ ಇಲಾಖೆಗೆ ಬಳಸಿಕೊಳ್ಳಲು ಅವಕಾಶವಿದೆ. ಈಗ್ಗೆ 10 ವರ್ಷಗಳ ಹಿಂದೆ ನಮ್ಮ ಸ್ನೇಹಿತರ ತಂಡ ತಾಲೂಕಿನಲ್ಲಿನರುವ ಕಟ್ಟಡ, ಕೂಲಿ ಕಾರ್ಮಿಕರನ್ನು ಗುರುತಿಸಿದೆ. ಸದಸ್ಯರ ನೋಂದಣಿಗೆ ಅಗತ್ಯವಿದ್ದ ಹಣವನ್ನು ನಾನೇ ಭರಿಸಿದ್ದೆ. ಆದರೆ ಅಂದು ಸೌಲಭ್ಯಗಳ ಕೊರತೆಯಿತ್ತು.ಪ್ರಸ್ತತ ಕಾರ್ಮಿಕ ವರ್ಗಕ್ಕೆ ಸೌಲಭ್ಯಗಳು ಹರಿದು ಬರುತ್ತಿರುವ ಕಾರಣ ಸಕಾಲಕ್ಕೆ ತಮ್ಮ ಸದಸ್ಯತ್ವವನ್ನು ನವೀಕರಿಸಿ ಇಲಾಖೆಯಿಂದ ದೊರೆಯುವ ಎಲ್ಲ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಿ, ಅಲ್ಲದೆ ಕಾರ್ಮಿಕರು ತಮಗೆ ದೊರೆಯುವ ಸೌಲಭ್ಯಗಳನ್ನು ಇತರೆ ಕಾರ್ಮಿಕರಿಗೂ ದೊರಕಿಸಿ ಕೊಡಲು ಮುಂದಾಗಿ ಎಂದ ಅವರು, ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇ.100ರಷ್ಠು ಕಾರ್ಮಿಕರ ನೋಂದಣಿಗೆ ಅಧಿಕಾರಿಗಳು ಮುಂದಾಗಿ ಗುರಿ ಮುಟ್ಟಬೇಕು. ತಾವು ಜೀವನ ನಿರ್ವಹಣೆಗೆ ಕಷ್ಟಪಡುವುದು ನಿಮ್ಮ ತಲೆ ಮಾರಿಗೆ ಅಂತ್ಯವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಅಪಾರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಜಿಪಂ ಸಿಇಒ ಜಿ. ಪ್ರಭು, ಇಒ ಲಕ್ಷ್ಮಣ್, ತಹಸೀಲ್ದಾರ್ ಶಿರಿನ್ ತಾಜ್, ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ತುಮುಲ್ ನಿರ್ದೇಶಕ ಬಿ.ನಾಗೇಶ್ ಬಾಬು, ಪುರಸಭೆ ಸದಸ್ಯ ಎಂ.ವಿ.ಗೋವಿಂದರಾಜು, ಆಲೀಮ್, ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು, ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ಶ್ರೀಕಾಂತ್, ಅಬ್ದುಲ್, ಕಾರ್ಮಿಕ ಇಲಾಖೆ ರವಿಕುಮಾರ್, ಎಇಇ ರಾಜ್ ಗೋಪಾಲ್, ಕೆಪಿಸಿಸಿ ಕಾರ್ಮಿಕ ವಿಭಾಗದ ಪಾಂಡುರಂಗಯ್ಯ, ಡಿವೈಎಸ್ಪಿ ಮಂಜುನಾಥ್ ಮತ್ತಿತರರು ಇದ್ದರು.