ಕೆ.ಎಂ.ಮಂಜುನಾಥ್
ಕ್ಯಾನ್-ಸ್ಟಿಕ್ಕರ್-ಹಣ ಪಾವತಿ:
ಜನಮುಖಿ ಸೇವಾ ಮನಸ್ಸಿನ ಸಮಾನ ಮನಸ್ಕರ ಗೆಳೆಯರ ತಂಡವಾದ ಸನ್ಮಾರ್ಗ ಗೆಳೆಯರ ಬಳಗ ಕಳೆದ 10 ವರ್ಷಗಳಿಂದಲೂ ಬಸ್ನಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡುತ್ತಾ ಬರುತ್ತಿದೆ (ಕೋವಿಡ್ ದಿನಗಳು ಹೊರತುಪಡಿಸಿ) ಈ ಹಿಂದೆ ಬಳಗದ ಸದಸ್ಯರೇ ನೀರು ತಂಪಾಗಿಸಲು ವಾಟರ್ ಕ್ಯಾನ್ಗೆ ಗೋಣಿಚೀಲದಿಂದ ಹೊಲಿದು ಶುದ್ಧ ನೀರಿನ ಘಟಕದಿಂದ ನೀರು ಭರ್ತಿ ಮಾಡಿಕೊಂಡು ಬಂದು ಬಸ್ ಗಳಿಗೆ ಕೊಡುತ್ತಿದ್ದರು. ಜೊತೆಗೆ "ಈ ಬಸ್ನಲ್ಲಿ ಕುಡಿವ ನೀರಿನ ವ್ಯವಸ್ಥೆಯಿದೆ " ಎಂಬ ಸ್ಟಿಕ್ಕರ್ ಸಹ ನೀಡುತ್ತಿದ್ದರು. ಬಳ್ಳಾರಿ ನಗರದಲ್ಲಿ ಸುತ್ತಾಡುವ ಬಸ್ ಸೇರಿದಂತೆ ಬಳ್ಳಾರಿ ವಿಭಾಗದಿಂದ ರಾಜ್ಯದ ನಾನಾ ಕಡೆ ತೆರಳುವ ಬಸ್ಗಳಲ್ಲಿ ನೀರಿನ ವ್ಯವಸ್ಥೆಯಾಗುತ್ತಿತ್ತು. ಆದರೆ, ಈ ವರ್ಷದಿಂದ ಬಸ್ ಚಾಲಕ ಅಥವಾ ನಿರ್ವಾಹಕರೇ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದಾಗಿ ಹೇಳಿದ್ದರಿಂದ ವಾಟರ್ ಕ್ಯಾನ್ ಜೊತೆಗೆ ನೀರು ಖರೀದಿಗೆ ₹60 ಸಹ ನೀಡುತ್ತಿದ್ದಾರೆ.ಕೆಲವರು ದುಡ್ಡು ಬೇಡ ಅಂತಾರೆ:
ಸೇವಾ ಕೈಂಕರ್ಯ: ಸಮಾಜಮುಖಿ ಚಿಂತನೆಯ ಗೆಳೆಯರು ಸೇರಿಕೊಂಡು ದಶಕದ ಹಿಂದೆ "ಸನ್ಮಾರ್ಗ ಗೆಳೆಯರ ಬಳಗ " ಹುಟ್ಟುಹಾಕಿದ್ದಾರೆ. ಸನ್ಮಾರ್ಗ ಬಳಗದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು, ಉಪನ್ಯಾಸಕರು, ಶಿಕ್ಷಕರು, ಲೇಖಕರು, ಚಿಂತಕರು, ಉದ್ಯಮಿಗಳು ಇದ್ದಾರೆ. ವರ್ಷದುದ್ದಕ್ಕೂ ಅನೇಕ ಸೇವಾ ಕಾರ್ಯ ಕೈಗೊಳ್ಳುವ ಇವರು ಯಾರಿಂದಲೂ ದೇಣಿಗೆ ಸಂಗ್ರಹಿಸುವುದಿಲ್ಲ. ತಿಂಗಳಿಗೆ ಇಂತಿಷ್ಟೆಂದು ತಾವೇ ಹಣ ಕ್ರೋಡೀಕರಿಸಿಕೊಂಡು ಸಮಾಜಸೇವಾ ಚಟುವಟಿಕೆ ನಡೆಸುತ್ತಿದ್ದಾರೆ.
ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ಸನ್ಮಾರ್ಗ ಗೆಳೆಯರ ಬಳಗದಿಂದ ಬಸ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ದುಬಾರಿ ಹಣ ನೀಡಿ ಬಾಟಲ್ ನೀರು ಖರೀದಿ ಕಷ್ಟ. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ನಲ್ಲಿ ತಂಪಾದ ನೀರು ಕೊಡುತ್ತಿದ್ದೇವೆ ಎನ್ನುತ್ತಾರೆ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷ ಲಕ್ಷ್ಮಿಕಾಂತ ರೆಡ್ಡಿ.