ದೊಡ್ಡಬಳ್ಳಾಪುರ: ಜನಸಾಮಾನ್ಯರ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಜಾ ಸೇವೆ ಇಲಾಖೆ ಸ್ಥಾಪಿಸಿದ್ದು ಜಿಲ್ಲೆಯಲ್ಲಿ ಪ್ರಜಾ ಸೇವೆ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಎಲ್ಲಾ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ ಸೂಚನೆ ನೀಡಿದರು.
ಪ್ರಜಾಸೇವಾ, ಜನಸ್ಪಂದನ ಸಭೆಗಳ ಸಂದರ್ಭದಲ್ಲಿ ನಾಗರಿಕರಿಂದ ಸ್ವೀಕರಿಸಲಾಗುವ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಸಭಾ ಸ್ಥಳದಲ್ಲಿ ಸ್ಥಾಪಿಸಲಾಗುವ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ನಾಗರಿಕ ಸೇವೆಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದರು.
ಪ್ರಜಾಸೇವೆ ಅಭಿಯಾನದಂದು ವಿಲೇವಾರಿಗೆ ನಾಗರಿಕರು ಮೊದಲ ಬಾರಿಗೆ ದಾಖಲಿಸುತ್ತಿರುವ ದೂರುಗಳು ಒಂದು ಸರದಿ, ಇತ್ಯರ್ಥವಾಗದ, ತೃಪ್ತಿಕರವಾಗಿ ಇತ್ಯರ್ಥವಾಗದ ದೂರುಗಳು IPGRS ಪೋರ್ಟಲ್ನಲ್ಲಿ ಈಗಾಗಲೇ ದಾಖಲಾಗಿದ್ದು, ವಿಲೇವಾರಿಗೆ ನಿಗದಿಪಡಿಸಿದ ಗರಿಷ್ಠ 21 ದಿನಗಳ ಅವಧಿ ಮುಗಿದ ನಂತರವೂ ಯಾವುದೇ ಪ್ರತಿಕ್ರಿಯೆ ಅಥವಾ ತೃಪ್ತಿಕರ ಪ್ರತಿಕ್ರಿಯೆ ಬಂದಿರದ ದೂರುಗಳಿಗೆ ಇನ್ನೊಂದು ಸರದಿ ಮಾಡಲಾಗುತ್ತದೆ.ಪ್ರಜಾ ಸೇವಾ ಅಭಿಯಾನ ಆಯೋಜಿಸುವ ದಿನದಂದು ವಿವಿಧ ಇಲಾಖೆಗಳ ಸ್ಟಾಲ್ ಳನ್ನು ನಿರ್ಮಿಸಿ ಸರ್ಕಾರಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ. ಸಾರ್ವಜನಿಕರು ಪ್ರಜಾ ಸೇವಾ ಅಭಿಯಾನದಂದು ತಮ್ಮ ಕುಂದು ಕೊರತೆ ಅಹವಾಲುಗಳನ್ನು ಸಲ್ಲಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು. ಹೋಬಳಿ, ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಜಾಸೇವಾ ಅಭಿಯಾನ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
29ಕೆಡಿಬಿಪಿ2-