ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ತೆರಕಣಾಂಬಿ ಗ್ರಾಮದ ಡಾ.ಬಾಬು ಜಗಜೀವನರಾಂ ಭವನದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯತ್ ಏರ್ಪಡಿಸಿದ್ದ ಪ್ರಜಾ ಸೇವೆ ಆಂದೋಲನದಲ್ಲಿ ೪೫ಕ್ಕೂ ಅರ್ಜಿಗಳು ಸ್ವೀಕೃತಗೊಂಡಿವೆ.
ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದಲ್ಲಿ ಸಾರ್ವಜನಿಕರ ಸಮಸ್ಯೆಗಲ್ಲಿ ಪ್ರಮುಖವಾಗಿ ಕೆರೆಗೆ ನೀರು,ವಿದ್ಯುತ್ ಸಮಸ್ಯೆ,ಕಾಡು ಪ್ರಾಣಿಗಳ ಹಾವಳಿ,ಮೇವು,ಬರ ಪರಿಹಾರ ಕುರಿತು ಸಭೆಯಲ್ಲಿದ್ದ ರೈತರು ಮಾತನಾಡಿದರು.ರೈತರ ಸಮಸ್ಯೆ ಆಲಿಸಿದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸಿನ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಜಾ ಸೇವೆ ಆಂದೋಲನ ಜನರ ಬಾಗಲಿಗೆ ಸೇವೆ ಒದಗಿಸುವ ಉದ್ದೇಶ ಎಂದರು.
ಮಳೆ ಕೊರತೆಯಿಂದ ವಿದ್ಯುತ್ ಸಮಸ್ಯೆ ತಲೆ ದೋರಿದೆ.ವಿದ್ಯುತ್ ಸಮಸ್ಯೆ ನಮ್ಮ ತಾಲೂಕಿನ ಸಮಸ್ಯೆಯಲ್ಲ.ರಾಜ್ಯದ ಸಮಸ್ಯೆಯಾಗಿದ್ದು,ಈ ಸಮಸ್ಯೆಗೆ ಪರಿಹಾರ ರಾಜ್ಯ ಸರ್ಕಾರ ಪರಿಹಾರ ನೀಡಲಿದೆ ರೈತರು ಕೂಡ ಸಹಕರಿಸಿ ಎಂದು ಮನವಿ ಮಾಡಿದರು.
ಆಲಂಬೂರು ೧,೨,೩ ಮತ್ತು ೪ ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಬರುವ ಸೆ.೧೯ ರಂದು ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದ ಪ್ರಜಾ ಸೇವೆ ಆಂದೋಲನ ನಡೆಯಲಿದ್ದು,ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಲಾಗುವುದು.೪ ನೇ ಹಂತದ ಕೆರೆಗಳಿಗೆ ನೀರು ತುಂಬಿಸಬೇಕು ಎಂಬುದು ನನ್ನ ಆಗ್ರಹ.ಹೆಚ್ಚುವರಿ ಮೋಟರ್ ಖರೀದಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜನರ ಸಮಸ್ಯೆ ಪರಿಹಾರ ಕೊಡಲು ಪ್ರಜಾ ಸೇವೆ ಆಂದೋಲನ ರಾಜ್ಯ ಸರ್ಕಾರ ಜಾರಿಗೆ ತಂದಿದ್ದು,ಜನರ ಸಮಸ್ಯೆ ಆಲಿಸಿ ಪರಿಹರಿಸಲು ಪ್ರಯತ್ನಿಸುವುದಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ರೈತರಿಗೆ ಸಾಗುವಳಿ,ರಸ್ತೆ,ನೀರು,ನಿವೇಶನ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಮುಟ್ಟಿಸಿ ಹಾಗೂ ಒತ್ತಡ ಹೇರಿ ಪರಿಹಾರ ಕಂಡು ಕಂಡು ಹಿಡಿಯುವ ಕೆಲಸ ಮಾಡುವುದು ನನ್ನ ಕೆಲಸವಾಗಿದ್ದು,ಈ ಕೆಲಸ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.
ತಾಲೂಕಿನ ೩ ಮತ್ತು ೪ ನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ಪ್ರಯತ್ನ ನಡೆಯುತ್ತಿದೆ.೪ ನೇ ಹಂತದ ಕೆರೆಗಳಿಗೆ ಪೈಪ್ ಲೈನ್ ಮೂಲಕ ನೀರು ಹರಿದರೆ ಮಾತ್ರ ಪರಿಹಾರ ಸಿಗುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
೧೧೦ ಕೆರೆ,ಕಟ್ಟೆಗಳ ಯೋಜನೆಯಲ್ಲಿ ೪೭೫ ಕೋಟಿ ಅನುದಾನದಲ್ಲಿ ಹುತ್ತೂರು ಕೆರೆಯಿಂದ ಮುಂದಿನ ಕೆರೆಗಳಿಗೆ ಪೈಪ್ ಲೈನ್ ಹಾಕಿದರೆ ಮಾತ್ರ ಕೆರೆಗಳಿಗೆ ನೀರು ತುಂಬಲು ಸಾದ್ಯ.ಪೈಪ್ ಲೈನ್ ಕಾಮಗಾರಿ ಆರಂಭ ಶೀಘ್ರದಲ್ಲೇ ಆಗಲಿದೆ ಎಂದು ಸಮಜಾಯಿಸಿ ನೀಡಿದರು.
ಪ್ರಜಾಸೇವೆ ಆಂದೋಲನದಲ್ಲಿ ತಹಸೀಲ್ದಾರ್ ಎಂ.ಎಸ್.ತನ್ಮಯ್,ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಷಣ್ಮುಗಂ, ತಾಲೂಕು ಮಟ್ಟದ ಅಧಿಕಾರಿಗಳು, ಹೋಬಳಿ ವ್ಯಾಪ್ತಿಯ ಸಾರ್ವಜನಿಕರು, ರೈತ ಮುಖಂಡರು ಇದ್ದರು.