ಸರಿಯಾದ ವ್ಯವಸ್ಥೆ ಇಲ್ಲದೆ ವಾಹನ ನಿಲುಗಡೆಗಾಗಿ ಪರದಾಡಿದ ಸಾರ್ವಜನಿಕರು

KannadaprabhaNewsNetwork |  
Published : Sep 29, 2025, 01:02 AM IST
33 | Kannada Prabha

ಸಾರಾಂಶ

ವಿವಿಧ ಕಾರ್ಯಕ್ರಮಗಳನ್ನು ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಪ್ರದರ್ಶನ ಮಳಿಗೆ ಮತ್ತು ಅಕ್ವೇರಿಯಂ ಗ್ಯಾಲರಿ, ರೈತ ದಸರಾ ವಸ್ತು ಪ್ರದರ್ಶನ, ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಒಂದೇಡೆ ಆಯೋಜಿಸುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಎಲ್‌.ಎಸ್. ಶ್ರೀಕಾಂತ್‌

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜೆ.ಕೆ. ಮೈದಾನಲ್ಲಿ ಭಾನುವಾರ ನಡೆದ ಶ್ವಾನ ಪ್ರದರ್ಶನಕ್ಕೆ ಭಾರಿ ಜನಸ್ತೋಮವೇ ಸೇರಿದ್ದರಿಂದ ಮೈದಾನದೊಳಗೆ ಬರಲು ಸಾರ್ವಜನಿಕರು, ವಾಹನ ನಿಲುಗಡೆಗಾಗಿ ಪರದಾಡಿದರು.

ತಮ್ಮ ಮುದ್ದು ಮುದ್ದಾದ ಶ್ವಾನಗಳನ್ನು ಕರೆ ತಂದಿದ್ದ ಮಾಲೀಕರು ಮತ್ತು ಶ್ವಾನ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರು, ಪ್ರಾಣಿ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳಲ್ಲಿ ಬಂದ ಕಾರಣ ಕಿರಿಕಿರಿ ಉಂಟಾಯಿತು.

ಜೆ.ಕೆ. ಮೈದಾನಕ್ಕೆ ಬರುವುದಕ್ಕೆ ಬಹಳ ಸಾಹಸ ಪಡುತ್ತಿದ್ದರು.

ಜೆ.ಕೆ. ಮೈದಾನದ ಗೇಟಿನ ಮುಂದೆ ಸಿಗ್ನಲ್‌ ಇರುವ ಕಾರಣ ಸಿಗ್ನಲ್‌ ಗಾಗಿ ಕಾಯುತ್ತಿದ್ದ ವಾಹನಗಳು ನಿಂತ ಕಾರಣ, ಜೆ.ಕೆ. ಮೈದಾನದೊಳಗೆ ಬರುವ ಮತ್ತು ಹೊರಗಡೆ ಹೋಗುವ ವಾಹನಗಳಿಗೆ ಬಹಳ ತೊಂದರೆಯಾಯಿತು.

ವಾಹನ ನಿಲುಗಡೆಗೂ ತೊಂದರೆ

ನೂರಾರು ಕಾರುಗಳು ಹಾಗೂ ಬೈಕ್‌ ಗಳನ್ನು ನಿಲ್ಲಿಸುವುದಕ್ಕೂ ತೊಂದರೆಯಾಯಿತು. ಕಳೆದ ಒಂದು ವಾರದಿಂದ ನಡೆದ ಮಹಿಳಾ ದಸರಾ, ಕೃಷಿ ದಸರಾ ಹಾಗೂ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಗಾಗಿ ಹಾಕಲಾಗಿದ್ದ ಪೆಂಡಾಲ್‌ ಗಳನ್ನು ಕಾರ್ಯಕ್ರಮ ಮುಗಿದರೂ ತೆರವು ಮಾಡದ ಕಾರಣ ವಾಹನಗಳ ನಿಲುಗಡೆ ಜನರು ಹೈರಾಣರಾದರು.

ಕಾರ್ಯಕ್ರಮ ಮುಕ್ತಾಯಗೊಂಡಿದ್ದ ಸ್ಥಳದಲ್ಲಿ ಹಾಕಲಾಗಿದ್ದ ಪೆಂಡಾಲ್‌ ಗಳನ್ನು ತೆರವು ಗೊಳಿಸಿದ್ದರೆ ಇಷ್ಟೊಂದು ಅವ್ಯವಸ್ಥೆಯಾಗುತ್ತಿರಲಿಲ್ಲ. ಮೈದಾನಕ್ಕೆ ಇನ್ನೊಂದು ದ್ವಾರವಿದ್ದಿದ್ದರೆ ಅನುಕೂಲವಾಗುತ್ತಿತ್ತು, ಒಟ್ಟಿನಲ್ಲಿ ಜೆ.ಕೆ. ಮೈದಾನದಿಂದ ಒಳ ಮತ್ತು ಹೊರಗಡೆ ಹೋಗಲು ಸಾರ್ವಜನಿಕ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.

ಕಳೆದ ಬಾರಿಯು ಸಹ ಇದೇ ಅವ್ಯವಸ್ಥೆ

ವಿವಿಧ ಕಾರ್ಯಕ್ರಮಗಳನ್ನು ಜೆ.ಕೆ. ಮೈದಾನದಲ್ಲಿ ಮೀನುಗಾರಿಕೆ ಇಲಾಖೆ ಮತ್ತು ಪ್ರದರ್ಶನ ಮಳಿಗೆ ಮತ್ತು ಅಕ್ವೇರಿಯಂ ಗ್ಯಾಲರಿ, ರೈತ ದಸರಾ ವಸ್ತು ಪ್ರದರ್ಶನ, ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಒಂದೇಡೆ ಆಯೋಜಿಸುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

ಭಾರಿ ಜನಸ್ತೋಮವೆ ಭೇಟಿ ನೀಡಿದ್ದರಿಂದ ಸಾರ್ವಜನಿಕರು ಹೈರಾಣರಾದರು.

ಕೆಲವರು ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಹೋಗಿದ್ದರಿಂದ ಬೇರೆಯವರು ತಮ್ಮ ವಾಹನ ತೆಗೆದುಕೊಂಡು ಹೋಗಲು ಗಂಟೆಗಟ್ಟಲೆ ಕಾದರು.

ಈ ಹಿಂದೆ ನಡೆಸ ದಸರಾ ಮಹೋತ್ಸವದಲ್ಲಿ ಶ್ವಾನ ಪ್ರದರ್ಶನ ಬೇರೆ ಸ್ಥಳದಲ್ಲಿ ಆಯೋಜಿಸುತ್ತಿದ್ದರು. ಆದರೆ ಕಳೆದ ಮೂರು ವರ್ಷದಿಂದ ಜಿ.ಕೆ. ಮೈದಾನದಲ್ಲಿ ಆಯೋಜಿಸಿದ್ದು, ಭಾನುವಾರವಾದ್ದರಿಂದ ಹೆಚ್ಚಿನ ಜನರು ಪ್ರದರ್ಶನ ವೀಕ್ಷಿಸಲು ಹಾಗೂ ಸ್ಪರ್ಧಿಗಳು ಭಾಗವಹಿಸುವುದರಿಂದ ತೊಂದರೆ ಅನುಭವಿಸಿದರು.

ಒಂದೆಡೆ ಒಂದು ಪ್ರದರ್ಶನ ಆಯೋಜಿಸಿದರೆ ಜನರಿಗೆ ವೀಕ್ಷಿಸಲು ಅನುಕೂಲವಾಗುತ್ತದೆ ಎಂಬುದು ಸಾರ್ವಜನಿಕರ ವಾದವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ