ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿಧಾನ ಪರಿಷತ್ ಸದಸ್ಯರನ್ನು ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ಸದಸ್ಯರನ್ನಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡಿತ್ತು. ಅದರಂತೆಯೇ ರಾಜ್ಯದ ವಿಪ ಸದಸ್ಯರನ್ನು ಅವರು ಪ್ರತಿನಿಧಿಸುವ ಊರಿನ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೇಮಕ ಮಾಡಲಾಗಿತ್ತು ಎಂದರು.ಪೂಜಾರ ವಿರುದ್ಧ ವೀರಣ್ಣ ಆರೋಪವೇನು?:
ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇಲ್ಲಿನ ಸದಸ್ಯರೊಬ್ಬರು ನೇಮಕವಾಗಿದ್ದಲ್ಲದೇ ಸರ್ಕಾರದ ಆದೇಶ ಇಟ್ಟುಕೊಂಡು ಬಿಟಿಡಿಎ ಸದಸ್ಯತ್ವ ಪಡೆಯಲು ಮುಂದಾಗಿದ್ದರು. ಆದರೆ ಸರ್ಕಾರದ ಆದೇಶ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ಗಳಿಗೆ ಮಾತ್ರ ಸೀಮಿತ ಎಂಬುದನ್ನು ಮನಗಂಡು ಬಿಟಿಡಿಎಯಲ್ಲಿ ಅವರ ಸದಸ್ಯತ್ವಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರಿನ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ ವಿಪ ಸದಸ್ಯ ಪಿ.ಎಚ್.ಪೂಜಾರ ತನ್ನ ಸದಸ್ಯತ್ವ ರದ್ದಾಗಿರುವುದನ್ನು ಮಾತ್ರವೇ ಪ್ರಶ್ನಿಸಬೇಕಿತ್ತು. ಆದರೆ ಸಂತ್ರಸ್ತರ ಹಿತಕಾಯಲು ಸ್ಥಾಪನೆಗೊಂಡ ಬಿಟಿಡಿಎ ಅಸ್ತಿತ್ವ ಪ್ರಶ್ನಿಸಿದರ ಪರಿಣಾಮ ನ್ಯಾಯಾಲಯದಿಂದ ಬಿಟಿಡಿಎ ಅಸ್ತಿತ್ವಕ್ಕೆ ಸಂಚಕಾರ ಬಂದಿದೆ ಎಂದು ದೂರಿದರು.ಬಿಟಿಡಿಎ ಸಂತ್ರಸ್ತರ ವಿಚಾರದಲ್ಲಿ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ನ್ಯಾಯಾಲಯದ ಗಮನಕ್ಕೆ ತಾರದೇ ಯಕಶ್ಚಿತ ತನ್ನ ಸದಸ್ಯತ್ವ ಹೋಗಿದೆ ಎಂಬ ಕಾರಣಕ್ಕೆ ಪ್ರಾಧಿಕಾರವೇ ಬೇಕಿಲ್ಲ ಎಂಬ ಅವರ ಧೋರಣೆಯಿಂದಾಗಿ ಸಂತ್ರಸ್ತರಿಗೆ ಅನ್ಯಾಯವಾಗುವ ಕಾಲ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾಗದಕ್ಕಷ್ಟೇ ಸೀಮಿತವಾಗುವ ಸಂಭವ:ಪ್ರಸಕ್ತ ಹೈಕೋರ್ಟ್ನ ಆದೇಶದ ಪ್ರಕಾರ ಬಿಟಿಡಿಎ ತನ್ನ ಅಸ್ತಿತ್ವ ಕಳೆದುಕೊಂಡು ಕೇವಲ ಕಾಗದಕ್ಕಷ್ಟೇ ಸೀಮಿತವಾಗುವ ಸಂಭವವಿದೆ. ನಗರ ವ್ಯಾಪ್ತಿಯಲ್ಲಿನ ಭೂಸ್ವಾಧೀನ, ಸ್ಥಳಾಂತರ ಪ್ರಕ್ರಿಯೆ ಕಾರ್ಯ ಎಲ್ಲವೂ ಬುಡಾಕ್ಕೆ ಹಸ್ತಾಂತರಗೊಳ್ಳಬೇಕು. ಬುಡಾ ವ್ಯಾಪ್ತಿ ಹೊರತಾದ ಮುಳುಗಡೆಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಕೃಷ್ಣಾ ಬೇಸಿನ್ ಬೋರ್ಡ್ಗೆ ವರ್ಗಾವಣೆ ಆಗಬೇಕೆಂದು ಆದೇಶದಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಬುಡಾಕ್ಕೆ ಬಿಟಿಡಿಎ ನಿರ್ವಹಿಸುವ ನವನಗರದ ಯುನಿಟ್ -1, 2 ನಿರ್ವಹಿಸುವ ಹಕ್ಕಿಲ್ಲ. ಹೀಗಾಗಿ ನವನಗರವನ್ನು ತ್ವರಿತವಾಗಿ ನಗರಸಭೆಗೆ ಹಸ್ತಾಂತರಿಸುವ ಸನ್ನಿವೇಶ ನಿರ್ಮಾಣವಾಗುವ ಸಾಧ್ಯತೆ ಇದೆ. ಇದಕ್ಕೆ ಪಿ.ಎಚ್.ಪೂಜಾರ ಅವರ ಅಧಿಕಾರದ ದುರಾಸೆ ಕಾರಣ ಎಂದು ದೂರಿದರು.ಬಿಟಿಡಿಎ ಹೋದರೆ ಏನಾಗುತ್ತದೆ?- ಚರಂತಿಮಠ ಆತಂಕವೇನು?
- ಡಾ.ವೀರಣ್ಣ ಚರಂತಿಮಠ,
ಮಾಜಿ ಶಾಸಕರು.