ಶಿವಕುಮಾರ ಕುಷ್ಟಗಿ
ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 78 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಇವುಗಳಲ್ಲಿ ಬರೋಬ್ಬರಿ 70 ಘಟಕಗಳು ಸುಸ್ಥಿತಿಯಲ್ಲಿದ್ದು, ಚಾಲ್ತಿಯಲ್ಲಿವೆ ಮತ್ತು ಕೇವಲ 8 ಘಟಕಗಳು ಮಾತ್ರ ದುರಸ್ತಿಯಲ್ಲಿವೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಮತ್ತು ಬರ ಪರಿಶೀಲನೆಗೆ ಬಂದ ತಂಡಗಳಿಗೆ ಅಧಿಕೃತ ಮಾಹಿತಿ ರವಾನಿಸಿದೆ. ಆದರೆ, ವಾಸ್ತವದಲ್ಲಿ ಶೇ. 60ಕ್ಕಿಂತಲೂ ಅಧಿಕ ಘಟಕಗಳು ಅಂತರ್ಜಲ ಕೊರತೆ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಸಂಪೂರ್ಣವಾಗಿ ನಿಂತು ಹೋಗಿವೆ.
ಅಧಿಕಾರಿಗಳ ದ್ವಂದ್ವ ನೀತಿಅಧಿಕಾರಿಗಳ ವರದಿಯಲ್ಲೇ ಎದ್ದು ಕಾಣುವ ದ್ವಂದ್ವ ನೀತಿಯೆಂದರೆ, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಒಟ್ಟು 1253ರಲ್ಲಿ 237 ಕೊಳವೆಬಾವಿಗಳು ದುರಸ್ತಿಯಲ್ಲಿವೆ ಅಥವಾ ಅಂತರ್ಜಲ ಕೊರತೆಯಿಂದಾಗಿ ಸ್ಥಗಿತಗೊಂಡಿವೆ ಎಂದಿದೆ. ಆದರೆ, ಅದೇ ಕೊಳವೆಬಾವಿಗಳನ್ನೇ ಮೂಲವಾಗಿ ನೆಚ್ಚಿಕೊಂಡಿರುವ ಘಟಕಗಳು ಮಾತ್ರ 78 ರಲ್ಲಿ 70 ಚಾಲನೆಯಲ್ಲಿವೆ ಎಂದು ಹೇಳುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಅಂತರ್ಜಲ ಮಟ್ಟ ಕುಸಿದ ಪರಿಣಾಮ ಘಟಕಗಳಿಗೆ ಅಗತ್ಯವಿರುವಷ್ಟು ನೀರು ಪೂರೈಕೆಯಾಗುತ್ತಿಲ್ಲ. ಮೂಲದಲ್ಲೇ ನೀರಿಲ್ಲದಿದ್ದಾಗ ಘಟಕಗಳು ಹೇಗೆ ಕಾರ್ಯಾಚರಣೆ ನಡೆಸಲು ಸಾಧ್ಯ ಎಂಬ ಸರಳ ಪ್ರಶ್ನೆಗೆ ಅಧಿಕಾರಿಗಳ ಬಳಿ ಉತ್ತರವಿಲ್ಲ.
ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಇಲ್ಲದೇ ಮುಚ್ಚಿ ಹೋಗಿವೆ. ಸಾರ್ವಜನಿಕರು ಅನಿವಾರ್ಯವಾಗಿ ನೀರಿಗಾಗಿ ದೂರದ ಖಾಸಗಿ ಘಟಕಗಳಿಗೆ ಹೋಗಬೇಕು. ಹೆಚ್ಚಿನ ಹಣ ಕೊಟ್ಟು ಶುದ್ಧ ನೀರು ತರುವಂತಾಗಿದೆ. ಆದರೆ, ಅಧಿಕಾರಿಗಳು ಇವೆಲ್ಲವೂ ಬಂದ್ ಆಗಿಲ್ಲ, ನಡೆಯುತ್ತಿವೆ ಎಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎನ್ನುತ್ತಾರೆ ಜೆಡಿಎಸ್ ರಾಜ್ಯ ವಕ್ತಾರ ವಿ.ಆರ್. ಗೋವಿಂದಗೌಡ್ರ.
ಗದಗ ನಗರಸಭೆ 21 21 00
ಲಕ್ಷ್ಮೇಶ್ವರ 05 04 01
ನರಗುಂದ 09 04 05
ಮುಳಗುಂದ 07 07 07
ಶಿರಹಟ್ಟಿ 05 05 00