ದೇವಾಲಯದ ಪುಷ್ಕರಣಿ ಅವಸಾನದ ಅಂಚಿಗೆ

KannadaprabhaNewsNetwork | Published : Oct 13, 2024 1:02 AM

ಕೋಲಾರ ನಗರದಲ್ಲಿ ಒಂದು ಕಾಲದಲ್ಲಿ ಹತ್ತಾರು ಕಲ್ಯಾಣಿಗಳು ಇದ್ದವು. ಕೆಲವರು ಸ್ವಾರ್ಥಕ್ಕೆ ಕಲ್ಯಾಣಿಗಳನ್ನು ಮುಚ್ಚಿ ಅದರ ಮೇಲೆ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಜಿಲ್ಲಾ ಆಡಳಿತ, ಸ್ಥಳೀಯ ಸಂಸ್ಥೆ, ಜನಪ್ರತಿನಿಧಿಗಳು ಹಾಗೂ ಜನತೆಯಲ್ಲಿ ಜಲ ಸಂಸ್ಕೃತಿ ಬಗ್ಗೆ ತಾತ್ಸಾರ ಭಾವನೆ ಇರುವುದರಿಂದ ಕಲ್ಯಾಣಿಗಳು ಅವನತಿಯ ಹಂತದಲ್ಲಿವೆ.

ಕನ್ನಡಪ್ರಭ ವಾರ್ತೆ ಕೋಲಾರಸುಮಾರು ಮೂರು ವರ್ಷಗಳ ಹಿಂದೆ ಕೋಲಾರ ಹೃದಯ ಭಾಗದ ಟೇಬಲ್ ರಸ್ತೆಯಲ್ಲಿ (ಕೈವಾರ ತಾತಯ್ಯ ವೃತ್ತ) ಪಾಳೇಗಾರರು ನಿರ್ಮಿಸಿರುವ ಪುಷ್ಕರಣಿ ಅವಸಾನದ ಅಂಚಿಗೆ ತಲುಪಿದೆ.ನಗರದ ಟೇಕಲ್ ರಸ್ತೆಯಲ್ಲಿರುವ ಕಠಾರಿಪಾಳ್ಯದ ಪುರಾತನ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದ ವಿಗ್ರಹಗಳನ್ನು ಸ್ವಚ್ಛಗೊಳಿಸುವ ಹಾಗೂ ಅಭಿಷೇಕ ಸಲುವಾಗಿ ನೀರಿನ ವ್ಯವಸ್ಥೆ ಮಾಡಿಕೊಡಲು ಕೋಲಾರ ಜನತೆ ವಿಶೇಷವಾಗಿ ಕಠಾರಿ ಪಾಳ್ಯದ ನಿವಾಸಿಗಳು ಕೋರಿಕೆ ಮೇರೆಗೆ ಹಾಲಿ ಕೈವಾರ ತಾತಯ್ಯ ವೃತ್ತದಲ್ಲಿ ಪುಷ್ಕರಣಿ ನಿರ್ಮಿಸಲಾಗಿತ್ತು. ಪುಷ್ಕರಣಿ ಮುಚ್ಚಿ ಕಟ್ಟಡ ನಿರ್ಮಾಣಕೋಲಾರ ನಗರದಲ್ಲಿ ಒಂದು ಕಾಲದಲ್ಲಿ ಹತ್ತಾರು ಕಲ್ಯಾಣಿಗಳು ಇದ್ದವು. ಕೆಲವರು ಸ್ವಾರ್ಥಕ್ಕೆ ಕಲ್ಯಾಣಿಗಳನ್ನು ಮುಚ್ಚಿ ಅದರ ಮೇಲೆ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಜಿಲ್ಲಾ ಆಡಳಿತ, ಸ್ಥಳೀಯ ಸಂಸ್ಥೆ, ಜನಪ್ರತಿನಿಧಿಗಳು ಹಾಗೂ ಜನತೆಯಲ್ಲಿ ಜಲ ಸಂಸ್ಕೃತಿ ಬಗ್ಗೆ ತಾತ್ಸಾರ ಭಾವನೆ ಇರುವುದರಿಂದ ಜಲಕಣ್ಣು ಶಾಶ್ವತವಾಗಿ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎನ್ನಲಾಗಿದೆ.

ಪುಷ್ಕರಣಿ ಜೀರ್ಣೋದ್ಧಾರ ಅಗತ್ಯ

ಟೇಬಲ್ ರಸ್ತೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಸೇರಿದ ಪುಷ್ಕರಣಿ ಜೀರ್ಣೋದ್ಧಾರ ಗೊಳಿಸಲು ಈ ಹಿಂದೆ ಡಿಸಿ ಆಗಿದ್ದ ಡಾ.ವಿಶ್ವನಾಥ್ ನಗರಸಭೆ ಮೂಲಕ ಯೋಜನೆ ಕೈಗೆತ್ತಿಕೊಂಡು ಹೊಳು ತೆಗೆಸಿದ್ದರು, ನಂತರ ಡಿ.ಕೆ.ರವಿ ಮತ್ತು ಡಾ.ಕೆ.ವಿ.ತ್ರಿಲೋಕ ಚಂದ್ರ ಅವರು ಸಹ ಆಸಕ್ತಿ ವಹಿಸಿದ್ದರು. ಬಳಿಕ ಪುಷ್ಕರಣಿ ಸುತ್ತ ಬೇಲಿ ಜೊತೆಗೆ ಮೆಟ್ಟಿಲುಗಳ ನಿರ್ಮಾಣ ಮಾಡಲಾಯಿತು. ಆದರೆ ಕಳಪೆ ಕಾಮಗಾರಿ ಮತ್ತು ನಿರ್ವಹಣೆ ಇಲ್ಲದೆ ಪುಷ್ಕರಣಿಯ ಗೋಡೆ ಕುಸಿಯಲಾರಂಭಿಸಿದ್ದು, ಪುಷ್ಕರಣಿ ನಾಶವಾಗುವ ಭೀತಿ ಎದುರಾಗಿದೆ.

ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಟ್ರಸ್ಟ್ ಆಡಳಿತ ಮಂಡಳಿ, ನಗರಸಭೆ ತಕ್ಷಣ ಎಚ್ಚೆತ್ತುಕೊಂಡು ಪುಷ್ಕರಣಿಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.