ಕನ್ನಡಪ್ರಭ ವಾರ್ತೆ ಮೈಸೂರು
ಹುಣಸೂರಿನ ಡಾ.ಬಿ.ಆರ್.ಅಂಬೇಡ್ಕರ್ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸದೇ ಗೈರು ಹಾಜರಾಗುವ ಮೂಲಕ ಪಟ್ಟಬದ್ರ ಹಿಸಾಸಕ್ತಿಗಳ ಕೈಗೊಂಬೆಯಾದ ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದು ಸಂಘದ ಚುನಾಯಿತ ನಿರ್ದೇಶಕ ಪುಟ್ಟರಾಜು ತಿಳಿಸಿದ್ದಾರೆ.ಹುಣಸೂರಿನ ಮಹಾಬೋಧಿಯ ಡಾ.ಬಿ.ಆರ್. ಅಂಬೇಡ್ಕರ್ ವಿವಿದೋದ್ದೇಶ ಸಹಕಾರ ಸಂಘಕ್ಕೆ ಏ. 27ರಂದು ನಡೆದ ಚುನಾವಣೆಯಲ್ಲಿ 30 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಅಂತಿಮವಾಗಿ ಮಾತುಕತೆ ಮೂಲಕ 13 ಮಂದಿ ಅವಿರೋಧವಾಗಿ ಆಯ್ಕೆಯಾಗಿ, ಉಳಿದವರು ನಾಮಪತ್ರ ಹಿಂಪಡೆದಿದ್ದರು. ಮೇ 13ರಂದು ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ನಿಗಧಿಯಾಗಿ, ಚುನಾವಣಾಧಿಕಾರಿ ನೇಮಿಸಲಾಗಿತ್ತು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಅಂದು 8 ಮಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರೂ, ಚುನಾವಣಾಧಿಕಾರಿ ರಾಜಣ್ಣ ಗೈರು ಹಾಜರಾಗಿದ್ದರು. ಕರೆ ಮಾಡಿದರೆ ಮೊಬೈಲ್ ಸ್ವಿಜ್ ಆಫ್ ಮಾಡಿಕೊಂಡಿದ್ದರು.ಈ ವಿಚಾರವನ್ನು ಎಆರ್ಓ, ಡಿಆರ್ಓ ಹಾಗೂ ಜೆಆರ್ಓ ಗಮನಕ್ಕೆ ತಂದು ಚುನಾವಣಾಧಿಕಾರಿ ಗೈರು ಹಾಜರಿ ಬಗ್ಗೆ ಮಾಹಿತಿ ನೀಡಿ, ಚುಣಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರೂ ಒಬ್ಬರಾದ ಮೇಲೆ ಒಬ್ಬರಂತೆ ನಾಲ್ಕು ಮಂದಿ ಅಧಿಕಾರಿಗಳೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡರು. ಇದರಿಂದ ಚುನಾವಣಾ ಪ್ರಕ್ರಿಯೇ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗೆ ಕ್ರಮ ಕ್ರಮ ಕೈಗೊಳ್ಳುವಂತೆ ಎಆರ್ಓ, ಎಆರ್ಓ ಮೇಲಿನ ಕ್ರಮಕ್ಕಾಾಗಿ ಡಿಆರ್ಓಗೆ ದೂರು ನೀಡಲಾಗಿದೆ. ಡಿಆರ್ಓ ಮೇಲೆ ಕ್ರಮ ಕೈಗೊಳ್ಳಲು ಜೆ.ಆರ್.ಸಿ.ಎಸ್ ಗೆ ದೂರು ನೀಡಿ, ಜೆ.ಆರ್.ಸಿ.ಎಸ್ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಾಧಿಕಾರಿಗಳಿಗೆ ದೂರು ನೀಡಲಾಗಿದೆ. ಹುಣಸೂರಿನಲ್ಲಿ ಸಹಕಾರಿ ಇಲಾಖೆ ಅಧಿಕಾರಿಗಳು ರಾಜಕಾರಣಿಗಳಂತೆ ವರ್ತಿಸುತ್ತಿದ್ದಾರೆ. ದುರುದ್ದೇಶದಿಂದ ಚುನಾವಣೆಗೆ ಗೈರು ಹಾಜರಾದ, ಅಲ್ಲದೆ, ಕರೆ ಮಾಡಿದರೂ ಸ್ಪಂಧಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಹಕಾರ ಇಲಾಖೆಯ ಡಿಆರ್ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿವಿದೋದ್ಧೇಶ ಸಹಕಾರ ಸಂಘದ ನಿರ್ದೇಶಕರಾದ ಪುಟ್ಟಮಾದಯ್ಯ, ಶಿವಯ್ಯ, ಸಿ.ಕೆ.ದಯಾನಂದ, ಮಹದೇವಸ್ವಾಮಿ, ಎಚ್.ಬಿ.ನಾಗರಾಜ್ ಕೊಳಗಟ್ಟ ನಾಗರಾಜು, ರಾಧಾ ಶಿವಣ್ಣ ಇದ್ದರು.18ಕ್ಕೆ ಇಲವಾಲದಲ್ಲಿ ಅಂಬೇಡ್ಕರ್ ಜಯಂತಿಕನ್ನಡಪ್ರಭ ವಾರ್ತೆ ಮೈಸೂರು
ಹುಣಸೂರು ಮುಖ್ಯ ರಸ್ತೆಯ ಇಲವಾಲದ ಸಮಾಜ ಕಲ್ಯಾಣ ಇಲಾಖೆ ಮೈದಾನದಲ್ಲಿ ಮೇ 18ರಂದು ಬೆಳಗ್ಗೆ 10ಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ನ್ಮ ದಿನಾಚರಣೆ ಆಯೋಜಿಸಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಉಪಾಧ್ಯಕ್ಷ ಹುಯಿಲಾಳು ರಾಮಸ್ವಾಮಿ ತಿಳಿಸಿದರು.ಗಾಂಧಿನಗರದ ಉರಿಲಿಂಗಪೆದ್ದಿ ಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸುವರು. ಶಾಸಕ ಜಿ.ಟಿ. ದೇವೇಗೌಡರು ಉದ್ಘಾಟಿಸುವರು. ಸಂಸದ ಸುನಿಲ್ ಬೋಸ್ ಅಂಬೇಡ್ಕರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವರು. ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತರಿರುವರು. ಸಿ.ನರೇಂದ್ರ ಪ್ರಾಸ್ತಾವಿಕ ಭಾಷಣ ಮಾಡುವರು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸುನಿಲ್, ಶಿವರಾಜ್, ಬಿ.ಕೆ. ಈಶ್ವರ್, ಸಂತೋಷ್ ಇದ್ದರು.