ಕಿಲ್ಲೆ ಮೈದಾನ ೬೯ನೇ ಗಣೇಶೋತ್ಸವ: ವಿನಾಯಕ ವಿಗ್ರಹ ರಚನೆಗೆ ಮುಹೂರ್ತ

KannadaprabhaNewsNetwork |  
Published : Aug 20, 2026, 02:45 AM IST
ಫೊಟೋ: ೧೭-ಮುಹೂರ್ತಗಣೇಶನ ವಿಗ್ರಹ ರಚನೆಗೆ ಮುಹೂರ್ತ ನೆರವೇರಿಸಲಾಯಿತು.  | Kannada Prabha

ಸಾರಾಂಶ

ಪುತ್ತೂರು: ಶ್ರೀ ದೇವತಾ ಸಮಿತಿ ಪುತ್ತೂರು ಆಶ್ರಯದಲ್ಲಿ ನಗರದ ಕಿಲ್ಲೆ ಮೈದಾನದಲ್ಲಿ ೭ ದಿನಗಳ ಕಾಲ ನಡೆಯುವ ೬೯ನೇ ವರ್ಷದ ಮಹಾ ಗಣೇಶೋತ್ಸವಕ್ಕೆ ಪೂರ್ವಭಾವಿಯಾಗಿ ನಾಗರಪಂಚಮಿ ದಿನವಾದ ಸೋಮವಾರ ಶ್ರೀ ವಿನಾಯಕನ ವಿಗ್ರಹ ರಚನಾ ಕಾರ್ಯಕ್ಕೆ ಮುಹೂರ್ತ ನೆರವೇರಿಸಲಾಯಿತು.

ಪುತ್ತೂರು: ಶ್ರೀ ದೇವತಾ ಸಮಿತಿ ಪುತ್ತೂರು ಆಶ್ರಯದಲ್ಲಿ ನಗರದ ಕಿಲ್ಲೆ ಮೈದಾನದಲ್ಲಿ ೭ ದಿನಗಳ ಕಾಲ ನಡೆಯುವ ೬೯ನೇ ವರ್ಷದ ಮಹಾ ಗಣೇಶೋತ್ಸವಕ್ಕೆ ಪೂರ್ವಭಾವಿಯಾಗಿ ನಾಗರಪಂಚಮಿ ದಿನವಾದ ಸೋಮವಾರ ಶ್ರೀ ವಿನಾಯಕನ ವಿಗ್ರಹ ರಚನಾ ಕಾರ್ಯಕ್ಕೆ ಮುಹೂರ್ತ ನೆರವೇರಿಸಲಾಯಿತು.ನಗರದ ಕೋರ್ಟ್ ರಸ್ತೆಯ ವಿಶ್ವ ಸಂಕೀರ್ಣ ಕಟ್ಟಡದಲ್ಲಿ ಮೂರ್ತಿ ರಚನೆ ಆರಂಭಿಸಲಾಯಿತು. ಪ್ರತಿ ವರ್ಷ ಕಿಲ್ಲೆ ಮೈದಾನ ಗಣೇಶೋತ್ಸವಕ್ಕೆ ನಾಗರ ಪಂಚಮಿ ದಿನದಂದೇ ಮೂರ್ತಿ ರಚನೆ ಮುಹೂರ್ತ ಮಾಡುವ ಸಂಪ್ರದಾಯ ನಡೆದುಕೊಂಡು ಬಂದಿದ್ದು, ಅದರಂತೆ ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ಮೃತ್ತಿಕೆ ಪೂಜೆ, ಪ್ರಾರ್ಥನೆ ನೆರವೇರಿಸಿದರು. ಮೂರ್ತಿ ರಚನೆಕಾರ ರಮೇಶ್ ಪೂಜಾರಿ ವಿಗ್ರಹ ವಿನ್ಯಾಸಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭ ಗಣೇಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

ಹಿರಿಯರಾದ ಗೀತಾ ಎಸ್. ಶೆಟ್ಟಿ ನೆಲ್ಲಿಕಟ್ಟೆ, ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್,ಸುದೇಶ್ ಚಿಕ್ಕಪುತ್ತೂರು, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಖಾಸಗಿ ಬಸ್‌ ಪಲ್ಟಿಯಾಗಿ ಬೈಕ್‌ ಸವಾರ ಸಾವು
ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಮುಂದುವರೆದ ಧರಣಿ