ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ವಿದ್ಯಾರ್ಥಿಗಳ ಉತ್ತಮ ಸಾಧನೆ

KannadaprabhaNewsNetwork |  
Published : May 11, 2026, 03:45 AM IST
ಫೋಟೋ: ರಶ್ಮಿ ಕೆ ಆರ್, ದೀಕ್ಷಾ ಜೆ, ಅದಿತಿ ಯು | Kannada Prabha

ಸಾರಾಂಶ

ಪುತ್ತೂರು ಕೇಂದ್ರ ಸರಕಾರದ ಎನ್‌ಟಿಎ ಪ್ರಾಧಿಕಾರ ನಡೆಸಿದ ೨೦೨೬ನೇ ಸಾಲಿನ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಪುತ್ತೂರು ಕೇಂದ್ರ ಸರಕಾರದ ಎನ್‌ಟಿಎ ಪ್ರಾಧಿಕಾರ ನಡೆಸಿದ ೨೦೨೬ನೇ ಸಾಲಿನ ಜೆಇಇ ಮೈನ್ಸ್ ಪ್ರವೇಶ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್‌ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಾದ ರಶ್ಮಿ ಕೆ.ಆರ್. (ಮಡಿಕೇರಿಯ ರಮೇಶ್ ಕೆ. ಕೆ. ಹಾಗೂ ರೇಣುಕಾ ಬಿ.ವಿ. ದಂಪತಿ ಪುತ್ರಿ) ಬಿ. ಪ್ಲಾನಿಂಗ್ ೨೦೯೮ನೇ ರ‍್ಯಾಂಕ್, ಬಿ ಆರ್ಚ್ ೩೩೩೫ನೇ ರ‍್ಯಾಂಕ್, ದೀಕ್ಷಾ ಜೆ. (ಕಾಸರಗೋಡಿನ ಕುಂಬಳೆಯ ಎಸ್. ನಾರಾಯಣ ಹಾಗೂ ಪುಷ್ಪಾ ಕೆ. ದಂಪತಿ ಪುತ್ರಿ) ಬಿ. ಪ್ಲಾನಿಂಗ್ ೧೬೫೦ನೇ ರ‍್ಯಾಂಕ್, ಬಿ ಆರ್ಚ್ ೨೭೩೪ನೇ ರ‍್ಯಾಂಕ್ ಹಾಗೂ ಅದಿತಿ ಯು. (ಬೆಂಗಳೂರಿನ ಉಮಾಶಂಕರ್ ಹಾಗೂ ಸುಮಾ ಕೆ.ಡಿ. ದಂಪತಿ ಪುತ್ರಿ) ಬಿ ಪ್ಲಾನಿಂಗ್ ೨೫೯೭ನೇ ರ‍್ಯಾಂಕ್, ಬಿ ಆರ್ಚ್ ೧೫೮೫೭ನೇ ರ‍್ಯಾಂಕ್‌ ಗಳಿಸಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೇವಾ ಕಾರ್‍ಯದಲ್ಲಿ ರೋಟರಿ ಪ್ರಮುಖ ಪಾತ್ರ: ರಾಮಕೃಷ್ಣ
ಬಿಸಿಲಾಘಾತ: ಕಾಫಿ, ಕಾಳುಮೆಣಸು ಕೃಷಿಕರಿಗೆ ಆತಂಕ