ಗುಣಮಟ್ಟದ ಹಾಲು ಪೂರೈಕೆ ಹೈನುಗಾರರ ಧ್ಯೇಯವಾಗಲಿ

KannadaprabhaNewsNetwork |  
Published : Jun 03, 2026, 01:15 AM IST
್ಿ್ಿ್ಿ | Kannada Prabha

ಸಾರಾಂಶ

ತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಪ್ರಾರಂಭವಾದ 7 ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಸುಮಾರು 1 ಲಕ್ಷ ರು. ಬೆಲೆಯ ಪರಿಕರಗಳನ್ನು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುತಾಲೂಕಿನಲ್ಲಿ 2024-25ನೇ ಸಾಲಿನಲ್ಲಿ ಪ್ರಾರಂಭವಾದ 7 ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಸುಮಾರು 1 ಲಕ್ಷ ರು. ಬೆಲೆಯ ಪರಿಕರಗಳನ್ನು ವಿತರಿಸಲಾಯಿತು. ನಗರದ ಹೊರವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಹಾಲು ಒಕ್ಕೂಟದ ಆಡಳಿತ ಮಂಡಳಿ ಕಚೇರಿ ಆವರಣದಲ್ಲಿ ತಾಲೂಕಿನ ಬಿದರೆಕಟ್ಟೆ, ಗಳಿಗೇನಹಳ್ಳಿ, ನಾಗವಲ್ಲಿ, ಸಿದ್ದೆಬೇಗೂರು, ಶೆಟ್ಟಪ್ಪನಹಳ್ಳಿ, ಚಿಕ್ಕಹಳ್ಳಿ ಹಾಗೂ ಬಿದನಗೆರೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ 1 ಲಕ್ಷ ರು. ನಂತೆ 7 ಸಂಘಗಳಿಗೆ ಒಟ್ಟು 7 ಲಕ್ಷ ರು. ಮೌಲ್ಯದ ಪರಿಕರಗಳನ್ನು ತುಮಕೂರು ತಾಲೂಕು ತುಮುಲ್ ನಿರ್ದೇಶಕ ನಂಜೇಗೌಡ ವಿತರಿಸಿದರು.ನಂತರ ಮಾತನಾಡಿದ ನಿರ್ದೇಶಕ ನಂಜೇಗೌಡ ಅವರು, 2024-25ನೇ ಸಾಲಿನಲ್ಲಿ ಪ್ರಾರಂಭವಾದ ತಾಲೂಕಿನ 7 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಒಕ್ಕೂಟದ ವತಿಯಿಂದ ತಲಾ 1 ಲಕ್ಷ ರು. ನಂತೆ 7 ಲಕ್ಷ ರು. ಬೆಲೆಯ ಪರಿಕರಗಳನ್ನು ವಿತರಿಸಲಾಗಿದೆ. ಇದರಲ್ಲಿ ಸಂಘಕ್ಕೆ ಅಗತ್ಯ ಇರುವ ಬೀರು, ಹಾಲು ಅಳತೆಯ ಮಾಪಕ, ಅನಲೈಸರ್, ಪೀಠೋಪಕರಣಗಳು ಸೇರಿದಂತೆ ಇತರೆ ವಸ್ತುಗಳು ಸೇರಿವೆ ಎಂದರು. ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಮೂಲಕ ಒಕ್ಕೂಟದ ಹೆಸರು ಇಡೀ ರಾಜ್ಯ ಮತ್ತು ದೇಶದಲ್ಲೇ ಬೆಳಗುವಂತಾಗಬೇಕು. ಜತೆಗೆ ಹಾಲು ಉತ್ಪಾದಕ ರೈತರು ಆರ್ಥಿಕವಾಗಿ ಸಬಲರಾಗಬಹುದಾಗಿದೆ. ಗುಣಮಟ್ಟದ ಹಾಲು ಪೂರೈಕೆ ಹೈನುಗಾರರ ಧ್ಯೇಯವಾಗಬೇಕು. ಆಗ ಮಾತ್ರ ಇನ್ನು ಹೆಚ್ಚಿನ ರೀತಿಯಲ್ಲಿ ಸಂಘಗಳಿಗೆ ಆರ್ಥಿಕ ಸಹಾಯ ದೊರೆಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ತುಮುಲ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಮಾತನಾಡಿ, ದೇಶದಲ್ಲೇ ಹೈನುಗಾರಿಕೆಯಲ್ಲಿ ಗುಜರಾತ್ ಹೊರತುಪಡಿಸಿದರೆ ಕರ್ನಾಟಕ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 15 ಹಾಲು ಒಕ್ಕೂಟಗಳು ಕಾರ್ಯನಿರ್ವಹಿಸುತ್ತಿವೆ. ತುಮಕೂರು ಹಾಲು ಒಕ್ಕೂಟ ರಾಜ್ಯದ ಒಕ್ಕೂಟಗಳಲ್ಲೇ ಪ್ರತಿಷ್ಠಿತ ಒಕ್ಕೂಟವಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.ಜಿಲ್ಲೆಯಲ್ಲಿ ೧೩೩೮ ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ರೈತರಿಂದ ಶೇಖರಿಸಿದ ಹಾಲನ್ನು ಸಂಸ್ಕರಣೆ ಮಾಡಿ ವಿವಿಧ ಪ್ರದೇಶಗಳಲ್ಲಿ ಮಾರಾಟ ಮಾಡಿ ಅದರಿಂದ ಬಂದಂತಹ ಹಣದಲ್ಲಿ ರೈತರಿಗೆ ಬಟವಾಡಿ ನೀಡಲಾಗುತ್ತಿದೆ ಎಂದರು. ಹಾಲು ಉತ್ಪಾಕರ ಸಹಕಾರ ಸಂಘಗಳಿಗೆ ತುಮುಲ್ ವತಿಯಿಂದ ಅಗತ್ಯ ಇರುವ ಪರಿಕರಣಗಳನ್ನು ವಿತರಿಸಲಾಗಿದೆ. ಹಾಗೆಯೇ ರೈತರು ಸಹ ಗುಣಮಟ್ಟದ ಹಾಲನ್ನು ಸಂಘಗಳನ್ನು ಪೂರೈಸಬೇಕು. ಈ ಮೂಲಕ ಸಂಘಗಳು ಹಾಗೂ ರೈತರು ಆರ್ಥಿಕವಾಗಿ ಸಬಲತೆ ಹೊಂದಬಹುದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ.ಜಿ. ವೆಂಕಟೇಗೌಡ, ತುಮುಲ್ ನಿರ್ದೇಶಕ ನಂಜೇಗೌಡ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್, ತುಮುಲ್ ಅಧಿಕಾರಿಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಮೀರ್‌ ವಿರುದ್ಧ ಕಠಿಣ ಕ್ರಮ, ಮಂಪರು ಪರೀಕ್ಷೆಗೆ ಒತ್ತಾಯ
ನಾಲ್ಕು ಹೋಬಳಿಯಲ್ಲಿ ಬಿತ್ತನೆ ಬೀಜ ವಿತರಣೆ