ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ನಗರ ಹೊರವಲಯದ ಚಿತ್ರಾವತಿ ಬಳಿಯ ಬೆಂಗಳೂರು ಉತ್ತರ ವಿವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವರಾಗಿ ನಿವೃತ್ತರಾದ ಡಾ. ಎನ್. ಲೋಕನಾಥ್ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಶಿಕ್ಷಕ ವೃತ್ತಿ ಎಂಬುದು ಸಾಮಾಜಿಕ ಬದಲಾವಣೆ ತರುವ ಹುದ್ದೆ. ಈ ಸೇವೆ ಸಿಗುವುದು ತುಂಬಾ ಅದೃಷ್ಟವಂತರಿಗೆ ಮಾತ್ರ. ಆ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಪ್ರತಿ ಕ್ಷಣವೂ ಕಲಿಸುವ ತಹತಹ ಇಮ್ಮಡಿಗೊಳಿಸಿಕೊಳ್ಳಬೇಕು. ಶಿಕ್ಷಕನಿಗೆ ನಿವೃತ್ತಿ ಇರುವುದಿಲ್ಲ. ಲೋಕನಾಥ್ ರವರು ಇದೇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ 31 ವರ್ಷ ಸೇವೆ ಸಲ್ಲಿಸಿ, ನಂತರ ಮೌಲ್ಯಮಾಪನ ಕುಲಸಚಿವರಾಗಿ ಸಾರ್ಥಕ ಕೆಲಸ ಮಾಡಿ ಈಗ ನಿವೃತ್ತಿ ಹೊಂದಿರುವುದು ಸಂತಸದ ವಿಷಯವಾಗಿದೆ ಎಂದರು.ಸೌಮ್ಯ ಸ್ವಭಾವ:
ಲೋಕನಾಥ್ ಮಾದರಿ:
ಲೋಕನಾಥ್ ಅವರು ಮಾರ್ಗದರ್ಶನ ನೀಡಿದ ಪ್ರತಿಯೊಬ್ಬರಿಗೂ ಅವರು ಪ್ರೇರಣೆ ಮತ್ತು ಮಾದರಿಯಾಗಿದ್ದರು. ಆರಂಭದಿಂದಲೂ ಅವರೊಂದಿಗೆ ಕೆಲಸ ಮಾಡಿದ ಅವರ ಸಹೋದ್ಯೋಗಿಗಳು ಇಂದು ಅವರಿಗೆ ಶುಭ ಹಾರೈಸಲು ಇಲ್ಲಿದ್ದಾರೆ. ಅವರು ಯಾವ ರೀತಿಯ ವ್ಯಕ್ತಿಯಾಗಿದ್ದರು ಮತ್ತು ಇಲ್ಲಿವರೆಗೆ ಇದ್ದಾರೆ ಎಂಬುದಕ್ಕೆ ಇದು ಸಾಕಷ್ಟು ಪುರಾವೆಯಾಗಿದೆ. ಅವರ ಅನುಭವದ ವರ್ಷಗಳ ಹೊರತಾಗಿಯೂ ಅವರು ಇನ್ನೂ ವಿನಮ್ರ ಜೀವನವನ್ನು ನಡೆಸುತ್ತಿದ್ದಾರೆ. ನಾವೆಲ್ಲರೂ ನಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಅವರು ಪರಿಪೂರ್ಣ ಉದಾಹರಣೆ. ನಾವು ಈಗಾಗಲೇ ಅವರಿಂದ ಕಲಿತದ್ದು ಬಹಳಷ್ಟಿದೆ. ನಾವು ಇನ್ನೂ ಕಲಿಯುತ್ತಿದ್ದೇವೆ ಎಂದು ಹೇಳಿದರು.
ಬಾಕ್ಸ್... ನಿವೃತ್ತಿ ಅನ್ನೋದು ಇರಲ್ಲ: ಡಾ. ಲೋಕನಾಥ್ಮೌಲ್ಯಮಾಪನ ವಿಭಾಗ ನಿವೃತ್ತ ಕುಲಸಚಿವ ಡಾ. ಎನ್.ಲೋಕನಾಥ್ ಮಾತನಾಡಿ, ಶಿಕ್ಷಕ, ಸಾಹಿತಿ, ಪತ್ರಕರ್ತ, ಹೋರಾಟಗಾರರಿಗೆ ನಿವೃತ್ತಿ ಅನ್ನೋದು ಇರುವುದಿಲ್ಲ. ಹಾಗಾಗಿ ಇರುವ ವೃತ್ತಿ ಬಿಟ್ಟು ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗುವುದಷ್ಟೆ ಇರುತ್ತದೆ. ತಂದೆ, ತಾಯಿ, ಗುರುಗಳು, ಕುಟುಂಬಸ್ಥರು, ಸಹೋದ್ಯೋಗಿಗಳು ತಮಗಾಗಿ ನೀಡಿದ ಸಹಕಾರವನ್ನು ಮತ್ತು ಪ್ರಾಧ್ಯಾಪಕರಾಗಿ, ಮೌಲ್ಯಮಾಪನ ಕುಲಸಚಿವರಾಗಲು ಸವೆಸಿದ ಹಾದಿಯನ್ನು ನೆನಪಿಸಿ ಕೊಂಡಾಗ ನೆರೆದವರ ಕಣ್ಣಾಲಿಗಳು ತೇವಗೊಂಡವು.
ನಗರ ಹೊರವಲಯದ ಚಿತ್ರಾವತಿ ಬಳಿಯ ಬೆಂಗಳೂರು ಉತ್ತರ ವಿವಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಬೆಂಗಳೂರು ಉತ್ತರ ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ಎನ್. ಲೋಕನಾಥ್ ಮತ್ತು ಅವರ ಧರ್ಮಪತ್ನಿ ವೀಣಾ ಅವರನ್ನು ಉಪ ಕುಲಪತಿ ಡಾ.ಬಿ.ಕೆ. ರವಿ ಅವರು ಸನ್ಮಾನಿಸಿದರು.