ಉಳ್ಳಾಲ ರಾಣಿ ಅಬ್ಬಕ್ಕ ಪ್ರತಿಮೆಗೆ ರಾಧಾ ಮೋಹನದಾಸ್ ಮಾಲಾರ್ಪಣೆ

KannadaprabhaNewsNetwork |  
Published : Jun 25, 2025, 11:47 PM IST
ಹಿರಿಯ ಬಿಜೆಪಿಗರಾದ ಸೀತಾರಾಮ ಬಂಗೇರ ಮತ್ತು ಲಲಿತಾ ಸುಂದರ್ ಅವರನ್ನು ಗೌರವಿಸಿದ ಸಂದರ್ಭ | Kannada Prabha

ಸಾರಾಂಶ

ಬುಧವಾರ ಉಳ್ಳಾಲಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಅಬ್ಬಕ್ಕ ವೃತ್ತದ ರಾಣಿ ಅಬ್ಬಕ್ಕಳ ಪುತ್ಥಳಿಗೆ ಹಾರಾರ್ಪಣೆ ನಡೆಸಿ ಗೌರವ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಉಳ್ಳಾಲಬಿಜೆಪಿ ಮಹಿಳಾ ಮೋರ್ಚದ ಕಾರ್ಯಕರ್ತೆಯರಿಗೂ ರಾಣಿ ಅಬ್ಬಕ್ಕಳ ಬಲಿದಾನವು ಸ್ಫೂರ್ತಿದಾಯಕವಾಗಲಿ‌ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಬಿಜೆಪಿ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿದ್ದಾರೆ.ಅವರು ಬುಧವಾರ ಉಳ್ಳಾಲಕ್ಕೆ ಭೇಟಿ ನೀಡಿ ಅಬ್ಬಕ್ಕ ವೃತ್ತದ ರಾಣಿ ಅಬ್ಬಕ್ಕಳ ಪುತ್ಥಳಿಗೆ ಹಾರಾರ್ಪಣೆ ನಡೆಸಿ ಗೌರವ ಸಲ್ಲಿಸಿ ಮಾತನಾಡಿದರು.ಅಬ್ಬಕ್ಕಳ 500 ನೇ ಜನ್ಮದಿನದ ವರ್ಷಾಚರಣೆಯ ಸುಸಂದರ್ಭದಲ್ಲಿ ಆಕೆಯ ಪುತ್ಥಳಿಗೆ ಮಾಲಾರ್ಪಣೆ ಮಾಡಿರುವುದು ತುಂಬಾ ಸಂತಸ ನೀಡಿದ್ದು ಈ ಸದಾವಕಾಶ ನೀಡಿದ ಜಿಲ್ಲಾ ಬಿಜೆಪಿಗೆ ನಾನು ಆಭಾರಿಯಾಗಿದ್ದೇನೆ ಎಂದರು.ಇದಕ್ಕೂ ಮೊದಲು ಉಳ್ಳಾಲದ ಹಿರಿಯ ಬಿಜೆಪಿಗರಾದ ಸೀತಾರಾಮ ಬಂಗೇರ ಮತ್ತು ಲಲಿತಾ ಸುಂದರ್ ಮನೆಗಳಿಗೆ ಅವರು ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಪಕ್ಷಕ್ಕೆ ಅಭೂತಪೂರ್ವ ಕೊಡುಗೆ ನೀಡಿದ ಹಿರಿಯರಾದ ಸೀತಾರಾಮ ಮತ್ತು ಲಲಿತಾ ಅವರನ್ನು ಅಗರ್ವಾಲ್ ಅವರು ಸನ್ಮಾನಿಸಿದರು.ಈ ವೇಳೆ ಮಾತನಾಡಿದ ಅವರು ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳ ಪುತ್ಥಳಿಯನ್ನು ಉಳ್ಳಾಲ ವೃತ್ತದಲ್ಲಿ ನಿರ್ಮಿಸಿ ಆಕೆಗೊಂದು ಶ್ರೇಷ್ಟ ಸ್ಥಾನ ಮಾನ ನೀಡಿದ ಸೀತಾರಾಮ‌ ಬಂಗೇರ ಅವರ ಕಾರ್ಯ ಬಹಳ ದೊಡ್ಡದಾಗಿದ್ದು ಎಲ್ಲರೂ ನೆನಪಿಡುವಂತದ್ದಾಗಿದೆ ಎಂದರು.ಹಿರಿಯ ಬಿಜೆಪಿಗರಾದ ಲಲಿತಾ ಸುಂದರ್ ಸ್ವಂತ ಕಟ್ಟಡದ ಕೊಠಡಿಯನ್ನು ಬಿಜೆಪಿ ಕಾರ್ಯಾಲಯಕ್ಕೆ ನೀಡಿರುವುದು ಅವರಿಗೆ ಪಕ್ಷದ ಮೇಲೆ ಎಷ್ಟೊಂದು ಅಭಿಮಾನವಿದೆ ಎಂಬುದನ್ನು ತೋರಿಸುತ್ತದೆ. ಹಣದಿಂದಲೇ ಎಲ್ಲವನ್ನೂ ಗಳಿಸಲು ಸಾಧ್ಯವಿಲ್ಲ,ಭಾವನೆಗಳೇ ಜಗತ್ತಿನ ದೊಡ್ಡ ಬಂಧನವಾಗಿದೆ ಎಂಬ ಸಂದೇಶವನ್ನ‌ ಲಲಿತಾ ಸುಂದರ್ ಅವರು ಸಾರಿದ್ದಾರೆ ಎಂದರು‌.ಸಂಸದ ಕ್ಯಾ.ಬ್ರಿಜೇಶ್ ಚೌಟ ,ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಡಾ.ಮಂಜುಳಾ ರಾವ್, ಮಂಡಲ ಮಹಿಳಾ ಮೋರ್ಚ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಉಪಾಧ್ಯಕ್ಷ ನಿಶಾಂತ್ ಪೂಜಾರಿ, ಮೀನುಗಾರ ಪ್ರಕೋಷ್ಟದ ರಾಜ್ಯ ಸಹ ಸಂಚಾಲಕ ಯಶವಂತ ಅಮೀನ್, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು, ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರು,ಚಂದ್ರಶೇಖರ ಉಚ್ಚಿಲ್,ಜಗದೀಶ್ ಶೇಣವ,ಜೀವನ್ ಕುಮಾರು ತೊಕ್ಕೊಟ್ಟು ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ