ದೇವನಹಳ್ಳಿ: ಇಲ್ಲಿನ ಕೋಟೆ ಬೀದಿಯಲ್ಲಿರುವ ರಾಯರ ಮಠದಲ್ಲಿರುವ ರಾಘವೇಂದ್ರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ನಿಂದ ಕಳೆದ ಎರಡು ದಿನಗಳಿಂದ ಲೋಕ ಕಲ್ಯಾಣಕ್ಕಾಗಿ ಮತ್ತು 353ನೇ ಆರಾಧನಾ ಮಹೋತ್ಸವ ಅಂಗವಾಗಿ ವಿಶೇಷ ಪೂಜಾ ಕಾರ್ಯಗಳು ನಡೆಯಿತು. ಮಧ್ಯಾರಾಧನೆ ಅಂಗವಾಗಿ ರಾಘವೇಂದ್ರರ ಉತ್ಸವ ಮೂರ್ತಿಯ ರಥದ ಮೆರವಣೆಗೆ ಬುಧವಾರ ನಡೆಯಿತು. ತಾಲೂಕು ಬ್ರಾಹ್ಮಣರ ಸಂಘದ ಅಧ್ಯಕ್ಷ ದೇ.ಸೂ.ನಾಗರಾಜು, ಸಿ. ವಿಶ್ವನಾಥ್, ಪ್ರಹ್ಲಾದರಾವ್, ಸುಬ್ರಮಣ್ಯ ಉಪಸ್ಥಿತರಿದ್ದರು.