ಕನ್ನಡಪ್ರಭ ವಾರ್ತೆ ಮಂಗಳೂರು
ದಿಗಂತ್ ಕೇಸಲ್ಲಿ ತಪ್ಪಿದ ಘರ್ಷಣೆ:
ದಿಗಂತ್ ಪ್ರಕರಣದಲ್ಲಿ ಪ್ರತಿಭಟನೆ ನಡೆಸಿದವರು ಕೇವಲ ನಾಪತ್ತೆ ಬಗ್ಗೆಯೇ ಮಾತನಾಡಿದ್ದರೆ ಅದು ಆದರ್ಶ ರಾಜಕಾರಣವಾಗುತ್ತಿತ್ತು. ಆದರೆ ಇಡೀ ಪ್ರಕರಣವನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಲು ಕೆಲವರು ಪ್ರಯತ್ನಪಟ್ಟಿದ್ದರು. . ಆದರೆ ದಿಗಂತ್ನನ್ನು ಪೊಲೀಸರು ಸಕಾಲದಲ್ಲಿ ಪತ್ತೆ ಹಚ್ಚಿ ಸಂಭಾವ್ಯ ಕೋಮು ಘರ್ಷಣೆಯನ್ನು ತಪ್ಪಿಸಿದ್ದಾರೆ ಎಂದು ರಮಾನಾಥ ರೈ ಹೇಳಿದರು.ಮಾಜಿ ಮೇಯರ್ ಶಶಿಧರ ಹೆಗ್ಡೆ, ಮುಖಂಡರಾದ ಪ್ರಕಾಶ್ ಸಾಲಿಯಾನ್, ಅಬ್ದುಲ್ ಲತೀಫ್, ಅಶೋಕ್ ಡಿ.ಕೆ., ವಿಕಾಸ್ ಶೆಟ್ಟಿ, ಇಬ್ರಾಹಿಂ ನವಾಜ್, ನಝೀರ್ ಬಜಾಲ್ ಮತ್ತಿತರರಿದ್ದರು.............
ಕೋಮು ಹತ್ಯೆಗಳ ಎಸ್ಐಟಿ ತನಿಖೆಯಾಗಲಿಕರಾವಳಿಯಲ್ಲಿ ಕೋಮು ಸಂಘರ್ಷ ನಿಲ್ಲಬೇಕಾದರೆ ನಿಜವಾದ ಸೂತ್ರಧಾರರಿಗೆ ಶಿಕ್ಷೆ ಆಗಬೇಕು. ಜಿಲ್ಲೆಯಲ್ಲಿ ಇದುವರೆಗೆ ನಡೆದ ಎಲ್ಲ ಕೋಮು ಹತ್ಯೆ ಪ್ರಕರಣಗಳಲ್ಲಿ ಎಸ್ಐಟಿ ತನಿಖೆ ನಡೆಸಿ, ಹತ್ಯೆಗಳ ಹಿಂದಿನ ವ್ಯಕ್ತಿಗಳನ್ನು ಬಯಲಿಗೆಳೆಯಬೇಕು. ಕೇವಲ ಕಾರ್ಯಕರ್ತರನ್ನು ಶಿಕ್ಷೆಗೆ ಒಳಪಡಿಸಿದರೆ ಸಂಘರ್ಷ ನಿಲ್ಲಲ್ಲ ಎಂದು ರಮಾನಾಥ ರೈ ಒತ್ತಾಯಿಸಿದರು.