ರೈಲು ಯೋಜನೆ ನಿಗದಿತ ಅವಧಿಯಲ್ಲಿ ಮುಗಿಸಿ: ಸಚಿವ

KannadaprabhaNewsNetwork |  
Published : Jan 29, 2024, 01:34 AM IST
ಆನೇಕಲ್‌ ರೈಲು ನಿಲ್ದಾಣದ ಕಾಮಗಾರಿಯ ಪ್ರಗತಿಯನ್ನು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವೀಕ್ಷಿಸಿದರು. ಆರ್‌.ಕೆ.ಸಿಂಗ್‌, ಕೃಷ್ಣಾರೆಡ್ಡಿ, ಚೈತನ್ಯ, ರಾಜೇಶ್‌, ಯಂಗಾರೆಡ್ಡಿ, ದಿನ್ನೂರು ರಾಜು, ತಿಮ್ಮರಾಜು,  ಡಾ। ಮೋಹನ್‌, ಕರಷ್ಣರಾಜು, ರಘುರಾಜು ಇದ್ದರು. | Kannada Prabha

ಸಾರಾಂಶ

ರೈಲು ಯೋಜನೆ ನಿಗದಿತ ಅವಧಿಯಲ್ಲಿ ಮುಗಿಸಿ: ಸಚಿವ

ಕನ್ನಡಪ್ರಭ ವಾರ್ತೆ ಆನೇಕಲ್

ರೈಲು ಯೋಜನೆಗಳು ಪ್ರಯಾಣಿಕರು ಮೆಚ್ಚುವಂತೆ ಇದ್ದಲ್ಲಿ ನೂರಾರು ಕೋಟಿ ರೂಪಾಯಿ ಬಂಡವಾಳ ಸಾರ್ಥಕವಾಗುತ್ತದೆ. ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿಯನ್ನು ತ್ವರತಗತಿಯಲ್ಲಿ ಪೂರ್ಣಗೊಳಿಸಬೇಕೆಂದು ಕೇಂದ್ರ ಸಾಮಾಜಿಕ ಹಾಗೂ ಸಬಲೀಕರಣ ಮಂತ್ರಿ ಎ.ನಾರಾಯಣಸ್ವಾಮಿ ರೈಲ್ವೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಅವರು ಆನೇಕಲ್ ರೈಲು ನಿಲ್ದಾಣದ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿ, ರೈಲು ನಿಲ್ದಾಣವನ್ನು ಮುಖ್ಯ ರಸ್ತೆಗೆ ಸಮೀಪ ಮಾಡಬೇಕೆಂದು ಸೂಚಿಸಿದರು.

ಸಚಿವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಮುಖಂಡರು ಹಾಗೂ ಕೆಲ ಪತ್ರಕರ್ತರು ಆನೇಕಲ್ ರೈಲು ನಿಲ್ದಾಣದಲ್ಲಿನ ಹಲವು ಲೋಪ ಮತ್ತು ನಿರ್ಲಕ್ಷ್ಯ ಧೋರಣೆಗಳ ಬಗ್ಗೆ ಬೆಳಕು ಚೆಲ್ಲಿದರು. ಎಲ್ಲವನ್ನೂ ಆಲಿಸಿದ ಸಚಿವರು, ಅಧಿಕಾರಿಗಳಿಗೆ ಪಟ್ಟಿ ಮಾಡಿಕೊಳ್ಳುವಂತೆ ತಿಳಿಸಿ, ಮುಖ್ಯ ರಸ್ತೆಯಿಂದ ಹಾಲಿ ನಿಲ್ದಾಣದವರೆಗೆ ಒಂದು ಕಿಮೀ ರಸ್ತೆ ಅಗಲೀಕರಣ, ಬೀದಿ ದೀಪ ಅಳವಡಿಕೆ, ಸುಗಮ ವಾಹನ ಸಂಚಾರಕ್ಕೆ ರಸ್ತೆಯ ಜೊತೆಗೆ, ಪಾದಚಾರಿಗಳಿಗೆ ಅನುಕೂಲವಾಗುವಂತೆ ವಿಶಾಲ ಮಾರ್ಗವನ್ನು ರಚಿಸಲು ತಿಳಿಸಿದರು.

ಅಧಿಕಾರಿಗಳಾದ ಆರ್.ಕೆ.ಸಿಂಗ್, ಕೃಷ್ಣಾ ರೆಡ್ಡಿ, ಚೈತನ್ಯ, ರಾಜೇಶ್, ಮುಖಂಡರಾದ ಯಂಗಾರೆಡ್ಡಿ, ದಿನ್ನೂರು ರಾಜು, ತಿಮ್ಮರಾಜು, ಡಾ। ಮೋಹನ್, ಕೃಷ್ಣರಾಜು, ರಘು ರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ