ಶಿವಾನಂದ ಗೊಂಬಿ
ರಾಜ್ಯದಲ್ಲಿ ನಡೆಯಲಿರುವ ರೈಲು ಯೋಜನೆಗಳ ಭೂಸ್ವಾಧೀನಕ್ಕೆ ಬಜೆಟ್ನಲ್ಲಿ ರಾಜ್ಯ ಸರ್ಕಾರ ₹ 2950 ಕೋಟಿ ಘೋಷಿಸಿದೆ. ಇದೀಗ ಧಾರವಾಡ-ಕಿತ್ತೂರ- ಬೆಳಗಾವಿ ರೈಲು ಮಾರ್ಗದ ನಿರ್ಮಾಣಕ್ಕೆ ಮೊದಲ ಹಂತದ ಭೂಸ್ವಾಧೀನಕ್ಕೆ ₹ 300 ಕೋಟಿ ತಕ್ಷಣವೇ ಬೇಕಿದ್ದು, ರಾಜ್ಯ ಸರ್ಕಾರ ತಡ ಮಾಡದೇ ಬಿಡುಗಡೆ ಮಾಡಿ ಕಾಮಗಾರಿ ಶೀಘ್ರವೇ ಪ್ರಾರಂಭಿಸಬೇಕೆಂಬುದು ರೈಲು ಹೋರಾಟಗಾರರ ಒಕ್ಕೊರಲಿನ ಆಗ್ರಹ.
ರೈಲ್ವೆ ಖಾತೆಯ ಮಾಜಿ ಸಚಿವ ದಿ. ಸುರೇಶ ಅಂಗಡಿ ಅವರು ಈ ಮಾರ್ಗಕ್ಕೆ ಕೇಂದ್ರದಿಂದ ಅನುಮೋದನೆ ಕೊಡಿಸಿದ್ದರು. 73 ಕಿಮೀ ದೂರದ ಈ ಮಾರ್ಗದ ನಿರ್ಮಾಣದಿಂದ ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮಧ್ಯೆ ರೈಲು ಸಂಚಾರದ ಅವಧಿ ಒಂದುವರೆ ಗಂಟೆಗೂ ಕಡಿಮೆಯಾಗುತ್ತದೆ. ಮೂರು ನಗರಗಳು ತ್ರಿವಳಿ ನಗರಗಳಂತೆ ಬೆಳವಣಿಗೆ ಹೊಂದಲು ಸಹಕಾರಿಯಾಗುತ್ತವೆ. ಅಭಿವೃದ್ಧಿಗೆ ಪೂರಕವಾದ ಈ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆಯೇ ಅಡ್ಡಿಯಾಗಿದೆ. ಹಾಗಂತ ಭೂಸ್ವಾಧೀನವೇ ಆಗಿಲ್ಲ ಅಂತೇನೂ ಇಲ್ಲ. ತಕ್ಕಮಟ್ಟಿಗೆ ಭೂಸ್ವಾಧೀನವೂ ಆಗಿದ್ದು ಪರಿಹಾರ ಹಣ ನೀಡಬೇಕಿದೆ.ಎಷ್ಟೆಷ್ಟು ಭೂಮಿ; ಪರಿಹಾರ ಎಷ್ಟು?:
ಇನ್ನು ಮಮ್ಮಿಗಟ್ಟಿ ಬಳಿ 41 ಎಕರೆ ಸ್ವಾಧೀನಕ್ಕೆ ರೈತರ ವಿರೋಧ ವ್ಯಕ್ತವಾಗಿದೆ. ಇದನ್ನು ಇಲಾಖೆ ಅಧಿಕಾರಿ ವರ್ಗ ಸರಿಪಡಿಸಿಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿ ವರ್ಗ ಕೆಲಸ ಮಾಡುತ್ತಿದೆ.
ಬಿಡುಗಡೆ ಮಾಡಲಿ:ಈ ನಡುವೆ ರೈಲ್ವೆ ಯೋಜನೆಗಳ ಭೂಸ್ವಾಧೀನಕ್ಕೆ ₹ 2950 ಕೋಟಿ ಮೀಸಲಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು ಇದು ಬರೀ ಘೋಷಣೆಯಾಗದೇ ₹ 500 ಕೋಟಿಗೂ ಅಧಿಕ ಹಣವನ್ನು ಧಾರವಾಡ- ಕಿತ್ತೂರ- ಬೆಳಗಾವಿ ಯೋಜನೆಗೆ ಬಿಡುಗಡೆ ಮಾಡಬೇಕು. ಪರಿಹಾರ ನೀಡಿ ಸ್ವಾಧೀನ ಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದರೆ ಕಾಮಗಾರಿ ಶುರುವಾಗಲಿದೆ.ಕೋಟ್...
ರಾಜ್ಯ ಸರ್ಕಾರ ರೈಲು ಯೋಜನೆಗಳಿಗಾಗಿ ಪ್ರತ್ಯೇಕ ಹಣ ಮೀಸಲಿಟ್ಟಿರುವುದಾಗಿ ಘೋಷಿಸಿರುವುದು ಸಂತಸಕರ. ಆದರೆ, ಇದು ಬರೀ ಘೋಷಣೆಯಷ್ಟೇ ಆಗದೇ ಆದಷ್ಟು ಶೀಘ್ರ ಬಿಡುಗಡೆ ಮಾಡುವ ಮೂಲಕ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅಂದಾಗ ರೈಲು ಹಳಿ ಕೆಲಸ ಶುರುವಾಗುತ್ತದೆ.ಮಂಜುನಾಥ ಪಾಟೀಲ, ಉದ್ಯಮಿ