ನಿರೀಕ್ಷಿತ ಮಟ್ಟದಲ್ಲಿ ಆಗದ ವರ್ಷಧಾರೆ । ಏಪ್ರಿಲ್ನಲ್ಲಿಯೂ ಮಳೆ ಕೊರತೆ । ಮೇ 10ರವರೆಗೆ ೧೧೬ ಎಂಎಂ ವಾಡಿಕೆ, ಆಗಿದ್ದು, ೭೦.೨೮ ಎಂಎಂ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಮುಂಗಾರಿನಲ್ಲಿ ವಾಡಿಕೆಯಷ್ಟು ಮಳೆ ಬೀಳದ ಕಾರಣ ತಾಲೂಕಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಕುಂಠಿತಗೊಂಡಿದ್ದು, ರೈತರು ಮಂಗಾರು ಮಳೆಯ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.ಮುಂಗಾರು ಆರಂಭವಾಗೋದೇ ಜೂನ್ ತಿಂಗಳಲ್ಲಿ ಆದರೆ ಏಪ್ರಿಲ್ ತಿಂಗಳಲ್ಲಿ ೭೨.೭೫ ಎಂಎಂ ವಾಡಿಕೆ ಮಳೆ ಬರಬೇಕಿತ್ತು. ಆದರೆ ೩೩.೪೦ ಎಂಎಂ ಮಳೆ ಬಿದ್ದಿದೆ. ವಾಡಿಕೆಯಷ್ಟು ಮಳೆ ಬಾರದೇ ಏಪ್ರಿಲ್ನಲ್ಲಿ ಬಿತ್ತನೆ ಕುಂಠಿತಗೊಂಡಿತ್ತು.
ತಾಲೂಕಿನ ಕಸಬಾ ಹೋಬಳಿಯಲ್ಲಿ ಏಪ್ರಿಲ್ನಲ್ಲಿ ವಾಡಿಕೆ ಮಳೆ ೭೬.೨ ಎಂಎಂ ಬದಲಿಗೆ ೪೯.೨ ಎಂಎಂ ಮಳೆ ಬಂದರೆ, ಮೇನಲ್ಲಿ ವಾಡಿಕೆ ಮಳೆ ೧೨೮ ಎಂಎಂ ಬದಲಿಗೆ ೫೮.೯ ಎಂಎಂ ಮಳೆಯಾಗಿದೆ.ತಾಲೂಕಿನ ಬೇಗೂರು ಹೋಬಳಿಯಲ್ಲಿ ಏಪ್ರಿಲ್ನಲ್ಲಿ ವಾಡಿಕೆ ೬೭.೩ ಬದಲು ೧೯.೧ ಎಂಎಂ, ಮೇನಲ್ಲಿ ವಾಡಿಕೆ ೧೦೩.೩ ಬದಲಿಗೆ ೫೨.೯ ಎಂಎಂ ಮಳೆಯಾಗಿದೆ.
ತಾಲೂಕಿನ ಹಂಗಳ ಹೋಬಳಿಯಲ್ಲಿ ಏಪ್ರಿಲ್ನಲ್ಲಿ ವಾಡಿಕೆ ೭೫.೩ ಎಂಎಂ ಬದಲಿಗೆ ೩೩.೪೦ ಎಂಎಂ ಮಳೆ, ಮೇನಲ್ಲಿ ವಾಡಿಕೆ ಮಳೆ ೧೧೬ ಎಂಎಂ ಬದಲಿಗೆ ೭೦.೨೮ ಎಂಎಂ ಮಳೆ ಬಿದ್ದಿದೆ.
ತಾಲೂಕಿನಲ್ಲಿ ನೆಲಗಡಲೆ ಬಿತ್ತನೆಗೆ ರೈತರು ತಯಾರಾಗಿದ್ದಾರೆ. ಆದರೆ ವಾಡಿಕೆಯಷ್ಟು ಮಳೆ ಬೀಳದ ಕಾರಣ ಕೃಷಿ ಇಲಾಖೆಯ ಗುರಿ ೩೫ ಸಾವಿರ ಹೆಕ್ಟೇರ್ನಷ್ಟಿದೆ. ಮುಂಗಾರು ಪೂರ್ವ ಮಳೆ ಸದ್ಯಕ್ಕೆ ಬೀಳದೆ ಇದ್ದರೆ, ಖಂಡಿತ ಕೃಷಿ ಇಲಾಖೆಯ ನಿರೀಕ್ಷಿತ ಬಿತ್ತನೆ ಆಗುವುದಿಲ್ಲ.
---
ರಾಜ್ಯ ಹವಾಮಾನ ಇಲಾಖೆ ಪ್ರಕಾರ ಬರುವ ಮೇ ೨೫ ಅಥವಾ ೨೬ರಿಂದ ಮುಂಗಾರು ಮಳೆ ಪ್ರವೇಶವಾಗಲಿದೆ ಎಂದು ಅಂದಾಜಿಸಲಾಗಿದೆ.
---೨೧ಜಿಪಿಟಿ೧
ಗುಂಡ್ಲುಪೇಟೆ ತಾಲೂಕಿನಲ್ಲಿ ಇತ್ತೀಚಗೆ ಬಿದ್ದ ಮಳೆಗೆ ಸೂರ್ಯಕಾಂತಿ ಬಿತ್ತನೆ ಮಾಡುತ್ತಿರುವ ರೈತರ ಜಮೀನಿಗೆ ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ಭೇಟಿ ನೀಡಿದ್ದರು.---
ಏಪ್ರಿಲ್ನಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಬೀಳದ ಕಾರಣ ಬಿತ್ತನೆ ಆಗಿಲ್ಲ. ಮೇನಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದ ಬಿತ್ತನೆ ಕಾರ್ಯ ಶುರುವಾಗಿದ್ದು, ಅಂದಾಜು ೧೦ ಸಾವಿರ ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ರೈತರಿಗೆ ಪ್ರಸ್ತುತ ಬೇಕಿರುವ ನೆಲಗಡಲೆ, ಅಲಸಂದೆ, ಮುಸುಕಿನ ಜೋಳ ದಾಸ್ತಾನಿದ್ದು, ವಿತರಣೆಗೆ ಕೃಷಿ ಇಲಾಖೆ ಸಿದ್ಧವಿದೆ.- ಶಶಿಧರ್, ಕೃಷಿ ಸಹಾಯಕ ನಿರ್ದೇಶಕ