ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ವಿಷಯಾಧಾರಿತ ಹೋರಾಟಗಳಲ್ಲಿ ರೈತಸಂಘ ಯಶಸ್ಸು-ಮಲ್ಲಿಕಾರ್ಜುನ ಬಳ್ಳಾರಿ

KannadaprabhaNewsNetwork | Published : Nov 13, 2024 12:45 AM

ಆಣೂರು ಮತ್ತು ಬುಡುಪನಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸುವುದು ರೈತ ಸಂಘದ ವಿಷಯಾಧಾರಿತ ಹೋರಾಟಗಳಲ್ಲಿ ಒಂದಾಗಿದ್ದು, ಇದರಲ್ಲಿ ಯಶಸ್ಸು ಗಳಿಸಿದ ಬಳಿಕ ರೈತ ಸಂಘಟನೆ ಇನ್ನಷ್ಟು ಗಟ್ಟಿಗೊಂಡಿದೆ. ಸದರಿ ಹೋರಾಟಕ್ಕೆ ಹಿನ್ನೆಲೆಯಾಗಿ ಪ್ರೇರಣೆ ನೀಡಿದ ಸಿರಿಗೆರೆ ತರಳಬಾಳುಶ್ರೀಗಳು ಸೇರಿದಂತೆ ರೈತ ಮುಖಂಡ ಹಾಗೂ ಪಾಂಡವಪುರ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರೊಂದಿಗೆ ಬಾಗಿನ ಅರ್ಪಿಸುವ ಕಾರ್ಯಕ್ಕೆ ನ.16ರಂದು ಚಾಲನೆ ನೀಡುವುದಾಗಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ಬ್ಯಾಡಗಿ: ಆಣೂರು ಮತ್ತು ಬುಡುಪನಹಳ್ಳಿ ಏತ ನೀರಾವರಿ ಯೋಜನೆಯಡಿ ಕೆರೆಗಳನ್ನು ತುಂಬಿಸುವುದು ರೈತ ಸಂಘದ ವಿಷಯಾಧಾರಿತ ಹೋರಾಟಗಳಲ್ಲಿ ಒಂದಾಗಿದ್ದು, ಇದರಲ್ಲಿ ಯಶಸ್ಸು ಗಳಿಸಿದ ಬಳಿಕ ರೈತ ಸಂಘಟನೆ ಇನ್ನಷ್ಟು ಗಟ್ಟಿಗೊಂಡಿದೆ. ಸದರಿ ಹೋರಾಟಕ್ಕೆ ಹಿನ್ನೆಲೆಯಾಗಿ ಪ್ರೇರಣೆ ನೀಡಿದ ಸಿರಿಗೆರೆ ತರಳಬಾಳುಶ್ರೀಗಳು ಸೇರಿದಂತೆ ರೈತ ಮುಖಂಡ ಹಾಗೂ ಪಾಂಡವಪುರ ಶಾಸಕ ದರ್ಶನ ಪುಟ್ಟಣ್ಣಯ್ಯ ಅವರೊಂದಿಗೆ ಬಾಗಿನ ಅರ್ಪಿಸುವ ಕಾರ್ಯಕ್ಕೆ ನ.16ರಂದು ಚಾಲನೆ ನೀಡುವುದಾಗಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

ಈ ಕುರಿತು ರೈತ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಯ ಪ್ರಮುಖ ಆಧಾರಸ್ಥಂಭವಾಗಿರುವ ರೈತರು ಎಲ್ಲವೂ ಹೋರಾಟ ಮಾಡಿಯೇ ಪಡೆದುಕೊಳ್ಳಬೇಕಾಗಿದ್ದು ದುರದೃಷ್ಟಕರ, ಆದಾಗ್ಯೂ ಜಿಲ್ಲೆಯ ರಾಜ್ಯದ ಶ್ರೇಯೋಭಿವೃದ್ಧಿಗಾಗಿ ಸಂಘಟನೆ ಹೋರಾಟಕ್ಕಿಳಿದಿದ್ದೇವೆ, ಕಳಪೆ ಹತ್ತಿ ಬೀಜ ಮಾರಾಟ ಮಾಡಿ ರೈತರಿಗೆ ಮೋಸವೆಸಗಿದ್ದ ಕನಕ ಬೀಜ ಕಂಪನಿಯಿಂದ ಹಿಡಿದು, ಕುಲಾಂತರಿ ತಳಿಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಮಹಿಕೋ ಕಂಪನಿ ಹೊರಗೆ ಹಾಕುವವರೆಗೂ ಹತ್ತು ಹಲವು ಹೋರಾಟಗಳನ್ನು ನಡೆಸುತ್ತಾ ಬಂದಿದ್ದೇವೆ, ಕೈಗಾರಿಕೆ ಅಭಿವೃದ್ಧಿ ನೆಪದಲ್ಲಿ ಮೋಟೆಬೆನ್ನೂರ ಬಳಿ ರೈತರ 1 ಸಾವಿರ ಎಕರೆ ಜಮೀನು ಕಬಳಿಸಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಮಸಿ ಬಳಿಯುವ ಮೂಲಕ ಸರ್ಕಾರದ ಕೈಯಿಂದ ಜಮೀನು ಕಿತ್ತು ರೈತರಿಗೆ ಮರಳಿಸಿದ್ದೇವೆ ಇವೆಲ್ಲವೂ ರೈತ ಸಂಘದ ಹೋರಾಟಗಳಲ್ಲಿ ಪ್ರಮುಖವೆನಿಸಿವೆ ಎಂದರು.

ನ.16 ರಂದು ಬಾಗಿನ ಅರ್ಪಣೆ: ಮಳೆ ನೀರು ಸೇರಿದಂತೆ ತುಂಗಭದ್ರಾ ನದಿಯಿಂದ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಉಕ್ಕಿ ಹರಿದಿವೆ. ಈ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸದರಿ ಕಾರ್ಯಕ್ರಮ ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ನಡೆಯಲಿದ್ದು ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಸೇರಿದಂತೆ ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ನಡೆಸಲು ಉದ್ದೇಶಿಸಿದ್ದು ಜಿಲ್ಲೆಯ ರೈತರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗಂಗಣ್ಣ ಎಲಿ, ಕಿರಣಕುಮಾರ ಗಡಿಗೋಳ, ಮಹದೇವಪ್ಪ ಶಿಡೇನೂರ, ಸಣ್ಣಫಕ್ಕೀರಪ್ಪ ಬಟ್ಟಲಕಟ್ಟಿ, ವಿರೂಪಾಕ್ಷಪ್ಪ ಗುಡಗೂರ, ಕೆ.ವಿ. ದೊಡ್ಡಗೌಡ್ರ, ನಾಗಪ್ಪ ಸಪ್ಪಣ್ಣನವರ, ರಾಜಣ್ಣ‌ ಕೋಡಿಹಳ್ಳಿ, ಪ್ರಕಾಶ ಸಿದ್ಧಪ್ಪನವರ, ಚನ್ನಪ್ಪ ಹಂಚಿನಮನಿ ಸೇರಿದಂತೆ ಇನ್ನಿತರರಿದ್ದರು.