ರಾಜಾ ಅಮರೇಶ್ವರ ನಾಯಕ ಗೆಲುವಿಗೆ ಮೈತ್ರಿ ಸಹಕಾರಿ

KannadaprabhaNewsNetwork |  
Published : May 04, 2024, 12:37 AM IST
3-ಮಾನ್ವಿ-2: | Kannada Prabha

ಸಾರಾಂಶ

ಮದ್ಲಪೂರ ಗ್ರಾಮದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಪರ ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಮತಯಾಚನೆ ಮಾಡಿದರು.

ಮಾನ್ವಿ: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 4ಲಕ್ಷ ಜನರು ಜೆಡಿಎಸ್ ಬೆಂಬಲಿಸುವ ಮತದಾರರಿರುವುದರಿಂದ ರಾಜಾ ಅಮರೇಶ್ವರನಾಯಕ ರವರ ಗೆಲುವಿಗೆ ಮೈತ್ರಿಯಿಂದ ಅನುಕೂಲವಾಗಲಿದೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಹೇಳಿದರು.ತಾಲೂಕಿನ ಮದ್ಲಪೂರ ಗ್ರಾಮದಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಪರ ಮತಯಾಚನೆ ಮಾಡಿ ಮಾತನಾಡಿ, ಸಂಸದರು ಕ್ಷೇತ್ರದ ಅಭಿವೃದ್ಧಿಗಾಗಿ 20ಕೋಟಿ ರು. ಸಂಸದರ ಅನುದಾನ ಬಳಸಿಕೊಂಡು ಶಾಶ್ವತವಾದ ಹಲವು ಯೋಜನೆ ತಂದಿದ್ದಾರೆ ಕುಡಿಯುವ ನೀರಿನ ಯೋಜನೆ, ರಸ್ತೆಗಳ ಅಭಿವೃದ್ಧಿ, ರೈಲ್ವೆಯೋಜನೆ ಜಾರಿಗೆಗೆ ಶ್ರಮಿಸಿದ್ದಾರೆ. ದೇಶದಲ್ಲಿನ 550 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಕೇವಲ 220ರಲ್ಲಿ ಮಾತ್ರ ಸ್ಪರ್ಧೆ ನಡೆಸಿದ್ದು, ಆ ಕ್ಷೇತ್ರಗಳಲ್ಲಿ 50 ಸ್ಥಾನ ಮಾತ್ರ ಗೇಲುವುದಕ್ಕೆ ಸಾಧ್ಯವಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತಹಾಕದೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಲು ಮೇ 7ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಕೋರಿದರು.

ಮಾಜಿ ಶಾಸಕ ಗಂಗಾಧರನಾಯಕ ಮತಯಾಚನೆ ಮಾಡಿ ಮಾತನಾಡಿದರು. ತಾಲೂಕಿನ ದದ್ದಲ್, ಚೀಕಲಪರ್ವಿ, ಕಾತರಕಿ ಸೇರಿ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪಕ್ಷದ ಮುಖಂಡರು ಮತಯಾಚನೆ ನಡೆಸಿದರು. ಜೆಡಿಎಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷರಾದ ರಾಜಾ ರಾಮಚಂದ್ರನಾಯಕ, ತಾ.ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಬಲ್ಲಟ್ಟಗಿ, ಶರಣಯ್ಯ ಜಾಡಲದಿನ್ನಿ, ಮಲ್ಲೇಶ ನಾಯಕ, ಹನುಮಂತಭೋವಿ, ಮಲ್ಲನಗೌಡ ನಕ್ಕುಂದಿ, ಚಂದ್ರಕಾಲಧಾರ ಸ್ವಾಮಿ, ಜಯಪ್ಪಗೌಡ, ಈರಣ್ಣ ನಾಯಕ, ಜಾವೇದ್ ಖಾನ್ ಸೇರಿ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ