ಕನ್ನಡಪ್ರಭ ವಾರ್ತೆ ವಿಜಯಪುರ
ಮಹಿಳಾ ಕ್ರಿಕೆಟ್ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೂಲಕ ಮಿಂಚುತ್ತಿರುವ ವಿಜಯಪುರ ಪ್ರತಿಭೆ ರಾಜೇಶ್ವರಿ ಗಾಯಕವಾಡ ಅವರು ಉದಯೋನ್ಮುಖ ಸಾಧಕರಿಗೆ ಸ್ಪೂರ್ತಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ನಗರದ ಮಾನಸ ರೆಸಿಡೆನ್ಸಿ ಆವರಣದಲ್ಲಿ ಸ್ವಚ್ಛ ನಗರ ಫೌಂಡೇಶನ್, ರಾಮ ನವಮಿ ಉತ್ಸವ ಸಮಿತಿ, ರಾಜೇಶ್ವರಿ ಗಾಯಕವಾಡ ಚಾರಿಟೇಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಆಫ್ ಪರಿವಾರ ವತಿಯಿಂದ ಪರಿಸರ ದಿನಾಚರಣೆ, ತಾರೆ ರಾಜೇಶ್ವರಿ ಗಾಯಕವಾಡ ಅವರಿಂದ ಸಮಾಜಮುಖಿ ಕಾರ್ಯದ ಮೂಲಕ ಜನ್ಮದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ತಮ್ಮ ಜನ್ಮದಿನವನ್ನು ಪರಿಸರ ರಕ್ಷಣೆ ಕಾರ್ಯ, ಪೌರಕಾರ್ಮಿಕರಿಗೆ ಗೌರವ ಮೂಲಕ ಆಚರಿಸುತ್ತಿರುವುದು ಸಂತೋಷದ ಸಂಗತಿ. ಗಿಡಗಳನ್ನು ನೆಡುವುದು ಹಾಗೂ ಅವುಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸುವುದು ಸಹ ಅಷ್ಟೇ ಮುಖ್ಯ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ ಮಾತನಾಡಿ, ಪೊಲೀಸ್ ಇಲಾಖೆ ಸಹ ಪರಿಸರ ರಕ್ಷಣೆ ಕಾರ್ಯಕ್ಕೆ ಕೈ ಜೋಡಿಸಿದ್ದು, ಪೊಲೀಸ್ ಮೈದಾನ, ಠಾಣೆಯ ಆವರಣದಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗಿದೆ. ಪರಿಸರ ಸಂರಕ್ಷಣೆ ಕಾರ್ಯ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.ಸಾನ್ನಿಧ್ಯವನ್ನು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಮಹಾಸ್ವಾಮಿಗಳು ವಹಿಸಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಕಾನೂನು ತಜ್ಞೆ ಉಜ್ವಲಾ ಸರನಾಡಗೌಡ, ಚೇತನಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ರಾಜಶ್ರೀ ಜುಗತಿ ಮಾತನಾಡಿದರು. ಪಾಲಿಕೆ ಸದಸ್ಯ ಮಳುಗೌಡ ಪಾಟೀಲ, ಮುಖಂಡರಾದ ಶಿವಾನಂದ ಭುಯ್ಯಾರ, ವೈದ್ಯಾಧಿಕಾರಿ ಡಾ.ಕೆ.ಡಿ.ಗುಂಡಬಾವಡಿ, ನ್ಯಾಯವಾದಿ ಬಿ.ಡಿ.ರಾಠೋಡ, ಬಸವರಾಜ ಜೋಗೂರ, ಡಾ.ಅಶೋಕ ಜಾಧವ, ಫಯಾಜ್ ಕಲಾದಗಿ, ರಾಜೇಶ ಗಾಯಕವಾಡ, ವಿಶ್ವನಾಥ ಗಾಯಕವಾಡ, ಶಶಿಕಲಾ ಇಜೇರಿ, ಸಂತೋಷ ವೆಂಕಪ್ಪಗೋಳ ಮುಂತಾವದರು ಇದ್ದರು.