- ನ್ಯಾಮತಿಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್ಜೀ
ಕನ್ನಡಪ್ರಭ ವಾರ್ತೆ ನ್ಯಾಮತಿ
ಭಾರತದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡುವುದು ಮಾತ್ರವೇ ನಮ್ಮ ಗುರಿಯಾಗಿರಲಿಲ್ಲ. ರಾಮ ಮಂದಿರ ನಿರ್ಮಾಣವಾಗಿದೆ. ಇನ್ನು ರಾಮ ರಾಜ್ಯದ ಸ್ಥಾಪನೆ ಹಂಬಲವಾಗಿದೆ ಎಂದು ವಿಶ್ವ ಹಿಂದು ಪರಿಷತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ಜೀ ಹೇಳಿದರು.ಪಟ್ಟಣದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ ಆಯೋಜಿಸಿದ್ದ ಹಿಂದು ಸಂಗಮ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮ ರಾಜ್ಯದಲ್ಲಿ ಸ್ತ್ರೀ, ಗೋವು ಮತ್ತು ನದಿಗಳನ್ನು ತಾಯಿಯಂತೆ ಕಾಣಲಾಗುತ್ತಿತ್ತು. ರಾಮ ರಾಜ್ಯ ಸಮೃದ್ಧವಾಗಿ, ಸತ್ಯ, ನ್ಯಾಯ ಪರವಾಗಿತ್ತು, ರಾಮ ಪರಾಕ್ರಮಶಾಲಿಯಾದ ರಾಜನಾಗಿದ್ದು, ಅಂತಹ ದೇಶ ನಮ್ಮದಾಗಬೇಕು. ಆ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ ಎಂದು ಭಾವಿಸುತ್ತಿದ್ದೇವೆ ಎಂದರು.
ಆಪರೇಷನ್ ಸಿಂದೂರದಲ್ಲಿ ಭಾಗಿಯಾಗಿದ್ದ ಬಿಎಸ್ಎಫ್ ಗಡಿ ಭದ್ರತಾ ಪಡೆಯ ಯೋಧೆ ಅನುಷಾ, ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಲಿಂಗರಾಜು ಹವಳದ ಮಾತನಾಡಿದರು. ವೇದಿಕೆಯಲ್ಲಿ ಭಾರತ ಮಾತಾ, ಬಸವೇಶ್ವರ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗಣರಾಜ್ಯೋತ್ಸವ ನಿಮಿತ್ತ ಸಂವಿಧಾನ ಪೀಠಿಕೆಯ ಬೋಧನೆ ಮತ್ತು ಅಂಬೇಡ್ಕರ್ ಕುರಿತು ಕಿರು ಪರಿಚಯ ನೀಡಲಾಯಿತು. ಸ್ವಯಂ ಸೇವಕ ರತ್ನಾಕರ್ ಗೋವಿಂದ್ ರಾಯ್ಕರ್, ಶಿಕ್ಷಕಿ ಚೈತ್ರಾ ಇದ್ದರು.
ನೂರಾರು ಮಹಿಳೆಯರು, ಪುರುಷರು, ಯುವಕರು, ಯುವತಿಯರು ಕೇಸರಿ ಟವಲ್, ರುಮಾಲು, ಪೇಟ ಧರಿಸಿ ಭಾರತ ಮಾತಕಿ ಜೈ, ಬಸವೇಶ್ವರ ಮಹಾರಾಜ್ ಕಿ ಜೈ, ಅಂಬೇಡ್ಕರ್ಗೆ ಜೈ, ಎನ್ನುವ ಉದ್ಘೋಷದೊಂದಿಗೆ ಶೋಭಾಯಾತ್ರೆಯಲ್ಲಿ ಸಾಗಿದರು.
- - -
- ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಿರೇಕಲ್ಮಠ, ಹೊನ್ನಾಳಿ.
(ಟಾಪ್ ಕೋಟ್) ಮುಸ್ಲಿಂ ತುಷ್ಠೀಕರಣ ನೀತಿ ಕಾರಣ ಕಾಂಗ್ರೆಸ್ ದೇಶದಲ್ಲಿ ಹಲವು ಅನಾಚಾರಗಳನ್ನು ನಡೆಸಿದೆ. ದೇಶ ವಿಭಜನೆಯಾಗಿದ್ದೂ ಈ ಕಾರಣದಿಂದಾಗಿಯೇ. ಹಿಂದುತ್ವದ ಆಧಾರದಲ್ಲಿ ಭಾರತವನ್ನು ನಿರ್ಮಾಣ ಮಾಡುವುದಕ್ಕಾಗಿ ಸಂಘ ಆರಂಭವಾಗಿ ಹೆಮ್ಮರವಾಗಿ ಈಗ 100 ವರ್ಷ ದಾಟುತ್ತಿದೆ.
- - -
-ಚಿತ್ರ.ಜೆಪಿಜಿ:ಹಿಂದು ಸಂಗಮ ಬೃಹತ್ ಶೋಭಾಯಾತ್ರೆ ವೇದಿಕೆ ಕಾರ್ಯಕ್ರಮವನ್ನು ವಿಹಿಂಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗೋಪಾಲ್ಜೀ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಉದ್ಘಾಟಿಸಿದರು.