ಹೊಸದುರ್ಗ: ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಶನಿವಾರ ಶ್ರದ್ಧಾಭಕ್ತಿಯಿಂದ ರಂಜಾನ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.
ಮೆರವಣಿಗೆ ವೇಳೆ ಶಾಸಕ ಬಿ.ಜಿ.ಗೋವಿಂದಪ್ಪ ಸೇರಿದಂತೆ ಇತರರು ಬೇಟಿ ನೀಡಿ ಮುಸ್ಲಿಂ ಸಮಾಜದ ಬಾಂಧವರಿಗೆ ಶುಭಾಶಯ ಕೋರಿದರು. ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದ ಗುರುಗಳು ಹಾಗೂ ಮುಖಂಡರು ಹಾಜರಿದ್ದರು.
ತಾಲೂಕಿನ ಶ್ರೀರಾಂಪುರ, ಜಾನಕಲ್, ಗರಗ, ಸಯ್ಯದ್ಸಾಬ್ ಪಾಳ್ಯ, ಹೈದರ್ಸಾಬ್ ಪಾಳ್ಯ, ಬೆಲಗೂರು, ಮತ್ತೋಡು ಸೇರಿದಂತೆ ವಿವಿದೆಡೆಗಳಲ್ಲಿಯೂ ಮುಸ್ಲಿಂ ಸಮಾಜ ಬಾಂದವರು ಸಂಭ್ರಮದಿಂದ ರಂಜಾನ್ ಹಬ್ಬ ವನ್ನು ಆಚರಿಸಿದರು. ಆಯಾ ಗ್ರಾಮಗಳಲ್ಲಿರುವ ಈದ್ಗಾ ಮೈದಾನ ಗಳಿಗೆ ಮರವಣಿಗೆ ಮೂಲಕ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.