ನವಲಗುಂದದಲ್ಲಿ ರಂಜಾನ್‌ ಆಚರಣೆ

KannadaprabhaNewsNetwork |  
Published : Mar 22, 2026, 02:00 AM IST
ನವಲಗುಂದ ಪಟ್ಟಣದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ನವಲಗುಂದ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಈದ್ ಉಲ್ ಫಿತರ್ ರಂಜಾನ್‌ ಹಬ್ಬವನ್ನು ಸಡಗರದ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನವಲಗುಂದ: ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಈದ್ ಉಲ್ ಫಿತರ್ ರಂಜಾನ್‌ ಹಬ್ಬವನ್ನು ಸಡಗರದ ಸಂಭ್ರಮದಿಂದ ಆಚರಿಸಲಾಯಿತು.

ಪಟ್ಟಣದ ಈದ್ಗಾ ಮೈದಾನದಲ್ಲಿ ಜಮಾಯಿಸಿದ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಹೊಸ ಉಡುಪುಗಳನ್ನು ಧರಿಸಿ, ಒಬ್ಬರಿಗೊಬ್ಬರು ಆಲಿಂಗನ ಮಾಡಿ ಹಬ್ಬದ ಶುಭಾಶಯ ಕೋರಿದ್ದು ವಿಶೇಷವಾಗಿತ್ತು.

ಪಟ್ಟಣದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ ಪಾಲ್ಗೊಂಡು ಶುಭಾಶಯ ಕೋರಿದರು.

ಧರ್ಮಗುರುಗಳಾದ ಸೈಯ್ಯದ ಅಮಾನುಲ್ಲಾ ಖಾಜಿ, ಸೈಯ್ಯದ ಅಬ್ದುಲಅಜೀಜ್‌ ಖಾಜಿ, ಕೆಪಿಸಿಸಿ ಸದಸ್ಯ ವಿನೋದ ಅಸೂಟಿ, ಮುಸ್ಲಿಂ ಸೈಪುದ್ದೀನ್‌ ಅವರಾದಿ, ಉಸ್ಮಾನ ಬಬರ್ಚಿ, ಬಾಬಾಜಾನ ಮುಲ್ಲಾ, ಮೋದಿನಸಾಬ್ ಶಿರೂರು, ಅಬ್ಬಾಸಲಿ ದೇವರಿಡು, ರಿಯಾಜ್ ಪೀರಜಾದೆ, ಮೌಲಾಸಾಬ ವೈದ್ಯ, ಸಿರಾಜಅಹಮ್ಮದ್ ಧಾರವಾಡ, ದಾವಲಸಾಬ್ ಮಸೂತಿ, ಕಾಶೀಮಸಾಬ ಅಲ್ಲಿಬಾಯಿ, ಬಾಬಾಜಾನ್ ಮುಲ್ಲಾ ಪಾಲ್ಗೊಂಡಿದ್ದರು.

ರಂಜಾನ್ ಪ್ರಯುಕ್ತ ಮಸೀದಿಗಳು, ದರ್ಗಾಗಳನ್ನು ವಿದ್ಯುತ್ ದೀಪಾಲಂಕಾರದಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು.

ಕುಂದಗೋಳದಲ್ಲಿ ಸಾಮೂಹಿಕ ಪ್ರಾರ್ಥನೆ: ಕುಂದಗೋಳ ಪಟ್ಟಣ ಸೇರಿದಂತೆ ತಾಲೂಕಿನ ಸಂಶಿ, ಗುಡಗೇರಿ, ಗುಡೇನಕಟ್ಟಿ, ಬಿಳೇಬಾಳ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮುಸ್ಲಿಮರು ರಂಜಾನ್ ಹಬ್ಬದ ನಿಮಿತ್ತ ಸಾಮೂಹಿಕ ಪ್ರಾರ್ಥನೆ ಮಾಡಿದರು.

ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರು, ದೇಶ, ರಾಜ್ಯಕ್ಕೆ ಒಳ್ಳೆಯದನ್ನಾಗಲಿ. ರೈತರಿಗೆ ಉತ್ತಮ ಮಳೆಯಾಗಿ ಬೆಳೆ ಬರಲಿ ಎಂದು ಪ್ರಾರ್ಥಿಸಿದರು. ಈ ವೇಳೆ ಅಂಜುಮನ್ ಇಸ್ಲಾಂ ಅಧ್ಯಕ್ಷ ಖಯುಂ ನಾಲಬಂದ, ಮುಖಂಡರಾದ ರಾಯಸಾಬ್ ಕಳ್ಳಿಮನಿ, ಬಾಬಾಜಾನ್ ಮಿಶ್ರಿಕೋಟಿ, ಹಜರತಲಿ ಕರ್ಜಗಿ, ಸಲಿಂ ಕಡ್ಲೆ, ಎ.ಟಿ. ಹುಬ್ಬಳ್ಳಿ ಸಲೀಂ ಕ್ಯಾಲಕುಂಡ, ಇಬ್ರಾಹಿಂ ಆಸಂನವರ ಇದ್ದರು.

ಧಾರವಾಡದಲ್ಲಿ ರಂಜಾನ್‌ ಸಾಮೂಹಿಕ ಪ್ರಾರ್ಥನೆ: ಧಾರವಾಡ ನಗರದ ಗುಲಗಂಜಿಕೊಪ್ಪ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸಲ್ಮಾನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲಾನಾ ಬಾಬಾಜಾನ್ ತಹಶೀಲ್ದಾರ್ ಪ್ರಾರ್ಥನೆ ಬೋಧಿಸಿದರು.

ಸ್ಥಳೀಯ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ, ಉಪಾಧ್ಯಕ್ಷ ಬಶೀರಅಹ್ಮದ ಜಹಾಗೀರದಾರ, ಕಾರ್ಯದರ್ಶಿ ಎಸ್‌.ಎಸ್. ಸರಗೀರೊ, ಖಜಾಂಚಿ ಮಹಮ್ಮದರಫೀಕ ಶಿರಹಟ್ಟಿ, ಖೈರುದ್ದೀನ್‌ ಶೇಖ್, ರಿಯಾಜ್ ನನ್ನೆಸಾಬನವರ, ಯಾಸೀನ್ ಹಾವೇರಿಪೇಟ್, ಇಕ್ಬಾಲ್ ತಮಟಗಾರ, ಮೆಹಬೂಬ ಪಠಾಣ, ನಿಜಾಮ ರಾಹಿ, ಇರ್ಫಾನ್ ತಾಡಪತ್ರಿ, ಸಾದಿಕ್, ಅಬ್ದುಲಗನಿ ಗೋಲಂದಾಜ ಮುಂತಾದ ಗಣ್ಯರು, ಅನೇಕ ಹಿರಿಯರು, ಮಕ್ಕಳು ಸೇರಿದಂತೆ ಸಾವಿರಾರು ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಆನಂತರ ಮುಸ್ಲಿಮರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಘಟಗಿ ಬಳಿ ಟ್ಯಾಂಕರ್‌ನಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್‌ ಸೋರಿಕೆ
ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಸಂಕಲ್ಪ