ಕನ್ನಡಪ್ರಭ ವಾರ್ತೆ ಮೈಸೂರು
ರಾಮಕೃಷ್ಣನಗರದ ರಾಮಕೃಷ್ಣ ವೃತ್ತದಲ್ಲಿ ಮೈಸೂರು ಯೋಗ ಅಸೋಸಿಯೇಷನ್, ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯುಕ್ತವಾಗಿ ರಥಸಪ್ತಮಿಯ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರ ಹಾಗೂ ಸೂರ್ಯ ಯಜ್ಞ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಅನೇಕ ಆಸನ ಭಂಗಿಗಳಿಂದ ಸಂಯೋಜಿತಗೊಂಡಿರುವ ಸೂರ್ಯನಮಸ್ಕಾರ ಪದ್ಧತಿಯ ಅಭ್ಯಾಸದಿಂದ ಮನುಷ್ಯನ ಪರಿಪೂರ್ಣ ಆರೋಗ್ಯ ಹೊಂದುತ್ತಾನೆ ಎಂದು ಅವರು ಹೇಳಿದರು.ಹಿರಿಯ ಸಂಸ್ಕೃತ ವಿದುಷಿ ಡಾ.ಕೆ. ಲೀಲಾ ಪ್ರಕಾಶ್ ಮಾತನಾಡಿ, ಈ ಜಗತ್ತಿನ ಅಸ್ತಿತ್ವಕ್ಕೆ ಕಾರಣೀಭೂತನಾಗಿರುವ ಸೂರ್ಯನನ್ನು ಆರಾಧಿಸುವ ವೈಶಿಷ್ಟ ಪೂರ್ಣವಾದ ಹಿರಿಮೆಯನ್ನು ರಥಸಪ್ತಮಿ ಹೊಂದಿದೆ. ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ಎಂದು ಆಚರಿಸಲ್ಪಡುವ ರಥಸಪ್ತಮಿಯ ನಂತರ ಸಪ್ತಾಶ್ವಗಳಿಂದ ಕೂಡಿದ ರಥವನ್ನು ಸೂರ್ಯನು ಉತ್ತರಕ್ಕೆ ತಿರುಗಿಸಿ ಉತ್ತರಾಯಣ ಪುಣ್ಯ ಕಾಲಕ್ಕೆ ಅನು ಮಾಡಿಕೊಡುತ್ತಾನೆ. ರಥಸಪ್ತಮಿಯೊಂದು ಮಾಡುವ ಸೂರ್ಯನಮಸ್ಕಾರದ ಪದ್ಧತಿ ಸೂರ್ಯನ ಅನುಗ್ರಹ ಸಂಪಾದನೆಗೆ ಅತ್ಯುತ್ತಮ ಮಾರ್ಗ ಎಂದರು.
ನಂತರ ಆರ್ಯ ಸಮಾಜದಿಂದ ಸೂರ್ಯ ಯಜ್ಞ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂರಾರು ಯೋಗಪಟುಗಳು ಪಾಲ್ಗೊಂಡು 108 ಸೂರ್ಯ ನಮಸ್ಕಾರವನ್ನು ಮಾಡಿದರು.