ಹರಪನಹಳ್ಳಿ: ಶ್ರೀರಾಮಚಂದ್ರನ ಆದರ್ಶ ಗುಣಗಳು ಹಾಗೂ ಧಾರ್ಮಿಕ ಜೀವನ ವೈಶಿಷ್ಟ್ಯಗಳನ್ನು ಒಮ್ಮೆ ನೊಡಿದರೆ ಆತನ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿ ಪರಿಣಮಿಸುತ್ತದೆ ಎಂದು ಸ್ಥಳೀಯ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಹೇಳಿದ್ದಾರೆ.
ರಾಮನು ತನ್ನ ಜೀವನದಲ್ಲಿ ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಸಮತೋಲನ ಕಾಪಾಡಿದ ಮಹಾ ವ್ಯಕ್ತಿ. ತಂದೆಯ ಆದೇಶಕ್ಕೆ ಗೌರವ ನೀಡಿ, ತನ್ನ ಸ್ಥಾನ ತ್ಯಜಿಸಿ, ಅರಣ್ಯಕ್ಕೆ ತೆರಳಿದ ಮಹಾನ್ ಧೀರ. ಪತ್ನಿ ಸೀತೆಯನ್ನೂ ಸಹೃದಯತೆಯಿಂದ ಆರಕ್ಷಿಸಿದ ಪತಿವ್ರತಪರಿ. ಅದೇ ರೀತಿ, ವಾನರ ಸೇನೆಯೊಡಗೂಡಿ ರಾಮರಾಜ್ಯದ ಸ್ಥಾಪನೆಗಾಗಿ ಹೋರಾಡಿದ ಸಮರ್ಥ ನಾಯಕ ಎಂದು ತಿಳಿಸಿದರು.
ರಾಮನ ಸತ್ಯ ಮತ್ತು ಧರ್ಮದ ಪಾಲನೆ, ಪ್ರಾಮಾಣಿಕತೆ, ಸಹನೆಯಂತಹ ಗುಣಗಳು ಮಾನವ ಜಗತ್ತಿಗೆ ಶಾಶ್ವತ ಮಾದರಿಯಾಗಿದೆ. ತನ್ನ ಮಾತಿಗೆ ಮತ್ತು ಶಪಥಕ್ಕೆ ಸದಾ ನಿಷ್ಠನಾಗಿದ್ದ ರಾಮನ ಆದರ್ಶ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಯೋಗ್ಯ ಎಂದು ನುಡಿದರು.ಇಂದು, ಶ್ರೀರಾಮನ ಆದರ್ಶಗಳನ್ನು ಪಾಲಿಸುವ ಮೂಲಕ ನಾವು ಶಾಂತಿ, ಸೌಹಾರ್ದ ಮತ್ತು ಸಜ್ಜನಿಕೆಯುಕ್ತ ಸಮಾಜವನ್ನು ನಿರ್ಮಿಸಬಹುದು. ನಮ್ಮ ನೈತಿಕತೆ, ಪ್ರೀತಿಯ ಮತ್ತು ಭಕ್ತಿಯ ಬೆಳವಣಿಗೆಯಲ್ಲಿ ರಾಮನ ತತ್ವಗಳು ಪ್ರೇರಣೆಯಾಗಲಿ ಎಂದು ಆಶಿಸಿದರು.
ಹಳೆ ಹುಬ್ಬಳ್ಳಿಯ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಶ್ರೀಶಭಟ್ಟರು ಹೈದಳೆ ಸಾನ್ನಿಧ್ಯ ವಹಿಸಿ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟು ಆಶೀರ್ವಚನೆ ನೆರವೇರಿಸಿದರು.ಪುರಸಭಾ ಅಧ್ಯಕ್ಷೆ ಎಂ.ಪಾತೀಮಾಬಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಟಿ. ವೆಂಕಟೇಶ, ಮಂಜುನಾಥ ಇಜಂತಕರ್, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಗೊಂಗಡಿ ನಾಗರಾಜ, ಬಸಪ್ಪ, ದಾನಿ ಲಲಿತಮ್ಮ , ಸವಿತಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.