ರಾಮಲಲ್ಲಾ ಪ್ರತಿಷ್ಠಾಪನೆ: ಮುಸ್ಲಿಮರಿಂದಲೂ ಸಂಭ್ರಮ

KannadaprabhaNewsNetwork |  
Published : Jan 21, 2024, 01:32 AM IST
ಅಫಜಲ್ಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಮುಖಂಡ ರಿತೇಶ ಗುತ್ತೇದಾರ ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ ಮಾಡಿದರು.  | Kannada Prabha

ಸಾರಾಂಶ

ರಾಮ ಕೇವಲ ಹಿಂದುಗಳಿಗಷ್ಟೇ ಆದರ್ಶವಲ್ಲ, ಅವರಲ್ಲಿನ ಮೌಲ್ಯಗಳು ಎಲ್ಲಾ ಧರ್ಮದವರಿಗೂ ಅನ್ವಯವಾಗುವಂಥವು ಹೀಗಾಗಿ ಜ.22ರಂದು ರಾಮ ಮಂದಿರ ಲೋಕಾರ್ಪಣೆಯ ದಿನ ನಾವು ಕೂಡ ನಮ್ಮ ಮನೆಗಳ ಮುಂದೆ ದೀಪ ಬೆಳಗಿ ಸಂಭ್ರಮಿಸುತ್ತೇವೆ ಎಂದು ಮಸಲ್ಮಾನ ಬಾಂಧವರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಮರ್ಯಾದಾ ಪುರುಷೋತ್ತಮ ರಾಮ ಕೇವಲ ಹಿಂದುಗಳಿಗಷ್ಟೇ ಆದರ್ಶವಲ್ಲ, ಅವರಲ್ಲಿನ ಮೌಲ್ಯಗಳು ಎಲ್ಲಾ ಧರ್ಮದವರಿಗೂ ಅನ್ವಯವಾಗುವಂಥವು ಹೀಗಾಗಿ ಜ.22ರಂದು ರಾಮ ಮಂದಿರ ಲೋಕಾರ್ಪಣೆಯ ದಿನ ನಾವು ಕೂಡ ನಮ್ಮ ಮನೆಗಳ ಮುಂದೆ ದೀಪ ಬೆಳಗಿ ಸಂಭ್ರಮಿಸುತ್ತೇವೆ ಎಂದು ಮಸಲ್ಮಾನ ಬಾಂಧವರು ತಿಳಿಸಿದರು.

ಬಿಜೆಪಿ ಯುವ ಮುಖಂಡ ರಿತೇಶ ಗುತ್ತೇದಾರ ಅವರು ಅಫಜಲ್ಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದ ವೇಳೆ ಮುಸಲ್ಮಾನ ಬಾಂಧವರ ಬಡಾವಣೆಯಲ್ಲಿ ಮಂತ್ರಾಕ್ಷತೆ ವಿತರಣೆ ವೇಳೆ ಮುಸಲ್ಮಾನ ಬಾಂಧವರು ಸಂತಸದಿಂದ ಮಂತ್ರಾಕ್ಷತೆ ಸ್ವಿಕರಿಸಿ ರಾಮ ಮಂದಿರ ಲೋಕಾರ್ಪಣೆಯ ದಿನವನ್ನು ಸಂಭ್ರಮಿಸುತ್ತೇವೆಂದು ತಿಳಿಸಿದ ಘಟನೆ ನಡೆಯಿತು.

ಯುವ ಮುಖಂಡ ರಿತೇಶ ಗುತ್ತೇದಾರ ಮಾತನಾಡಿ ರಾಮ ಕೇವಲ ಹಿಂದುಗಳ ಸ್ವತ್ತಲ್ಲ, ಸಮಸ್ತ ಭಾರತೀಯರ ಸ್ವತ್ತು. ಎಲ್ಲರೂ ರಾಮನನ್ನು ಎದೆಯಲ್ಲಿಟ್ಟು ಮೆರೆಸುವ ದಿನ ಬಂದಿವೆ. ಹೀಗಾಗಿ ಜ.22ರಂದು ಎಲ್ಲರೂ ಸೇರಿ ಸಂಭ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ವಿಜಯಕುಮಾರ ಗುತ್ತೇದಾರ,ದಸ್ತಯ್ಯ ಗುತ್ತೇದಾರ, ದತ್ತು ಪಾಟೀಲ, ರವಿ ತೆಗ್ಗೆಳ್ಳಿ, ಚಾಂದ ಪಟೇಲ ಸೇರಿದಂತೆ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು