ವಂಡರ್ ಲಾದಲ್ಲಿ ಗರುಡ ಗ್ಲೈಡ್‌ರೈಡ್‌ಗೆ ಶ್ರೇಯಾಂಕ ಪಾಟೀಲ್ ಚಾಲನೆ

KannadaprabhaNewsNetwork |  
Published : Apr 11, 2026, 01:15 AM IST
10ಕೆಆರ್ ಎಂಎನ್ 2.ಜೆಪಿಜಿವಂಡರ್ ಲಾ ಹಾಲಿಡೇಸ್ ಹೊಚ್ಚ ಹೊಸದಾಗಿ 'ಗರುಡಗ್ಲೈಡ್'  ಅತ್ಯಾಧುನಿಕ ರೋಲರ್ ಕೋಸ್ಟರ್‌ಗೆ ಭಾರತೀಯ ಕ್ರಿಕೆಟ್ ಮಹಿಳಾ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಶುಕ್ರವಾರ ಚಾಲನೆ ನೀಡಿದರು. | Kannada Prabha

ಸಾರಾಂಶ

ಗಾಳಿಯಲ್ಲಿ ತೂಗಾಡುತ್ತಾ ವೇಗದಲ್ಲಿ ಸಾಗುವ ಈ ರೈಡ್, ಪ್ರವಾಸಿಗರಿಗೆ ರೋಚಕ ಅನುಭವ ನೀಡಲಿದೆ. ಈ ರೈಡ್ ಅಳವಡಿಕೆ ಮತ್ತು ಸಂಯೋಜನೆಯನ್ನು ವಂಡರ್ ಲಾದ ಸ್ವಂತ ಎಂಜಿನಿಯರಿಂಗ್ ತಂಡವು ನಿರ್ವಹಿಸಿದ್ದು. ಅತ್ಯುನ್ನತ ಜಾಗತಿಕ ಸುರಕ್ಷತಾ ಮಾನದಂಡಗಳು ಮತ್ತು ನಿಖರತೆಯಿಂದ ಕಾರ್ಯನಿರ್ವಹಿಸಿವೆ.

ಕನ್ನಡಪ್ರಭ ವಾರ್ತೆ ರಾಮನಗರ

ವಂಡರ್ ಲಾ ಹಾಲಿಡೇಸ್ ಹೊಚ್ಚ ಹೊಸದಾಗಿ ''''''''ಗರುಡಗ್ಲೈಡ್'''''''' ಅತ್ಯಾಧುನಿಕ ರೋಲರ್ ಕೋಸ್ಟರ್‌ಗೆ ಭಾರತೀಯ ಕ್ರಿಕೆಟ್ ಮಹಿಳಾ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನನಗೆ ''''''''ಗರುಡಗ್ಲೈಡ್'''''''' ಉದ್ಘಾಟಿಸುವ ಅವಕಾಶ ಸಿಕ್ಕಿದ್ದು ಸಂತಸ ತಂದಿದೆ. ಎರಡು ಬೃಹತ್ ಇನ್ವರ್ಷನ್ (ತಲೆಕೆಳಗಾಗುವ) ರೋಲರ್ ಕೋಸ್ಟರ್‌ಗಳನ್ನು ಹೊಂದಿರುವ ಭಾರತದ ಮೊದಲ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ವಂಡರ್ ಲಾ ಪಾತ್ರವಾಗಿದೆ ಎಂದು ಹೇಳಿದರು.

ವಂಡರ್ ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿತ್ತಿಲಪ್ಪಿಲ್ಲಿ ಮಾತನಾಡಿ, ಗಾಳಿಯಲ್ಲಿ ತೂಗಾಡುತ್ತಾ ವೇಗದಲ್ಲಿ ಸಾಗುವ ಈ ರೈಡ್, ಪ್ರವಾಸಿಗರಿಗೆ ರೋಚಕ ಅನುಭವ ನೀಡಲಿದೆ. ಈ ರೈಡ್ ಅಳವಡಿಕೆ ಮತ್ತು ಸಂಯೋಜನೆಯನ್ನು ವಂಡರ್ ಲಾದ ಸ್ವಂತ ಎಂಜಿನಿಯರಿಂಗ್ ತಂಡವು ನಿರ್ವಹಿಸಿದ್ದು. ಅತ್ಯುನ್ನತ ಜಾಗತಿಕ ಸುರಕ್ಷತಾ ಮಾನದಂಡಗಳು ಮತ್ತು ನಿಖರತೆಯಿಂದ ಕಾರ್ಯನಿರ್ವಹಿಸಿವೆ ಎಂದರು.

ರೈಡ್ ಮಾಡುವವರು ರೋಲ್ ಓವರ್, ವರ್ಟಿಕಲ್ ಲೂಪ್, ಸೈಡ್ ವೈಂಡರ್ ಮತ್ತು ಡಬಲ್ ಇನ್ ಲೈನ್ ಟ್ವಿಸ್ಟ್ ಗಳನ್ನು ಸತತವಾಗಿ ಅನುಭವಿಸುತ್ತಾರೆ. ಯಾವುದೇ ವಿರಾಮವಿಲ್ಲದೆ ಸಂಪೂರ್ಣ ರೋಮಾಂಚನ ನೀಡುವಂತೆ ವಿನ್ಯಾಸಗೊಳಿಸ ಲಾಗಿದೆ. ಇದಕ್ಕಾಗಿ ₹34 ಕೋಟಿ ಹೂಡಿಕೆ ಮಾಡಲಾಗಿದ್ದು, ಇದು ಭಾರತಕ್ಕೆ ವಿಶ್ವದರ್ಜೆಯ ಸಾಹಸಮಯ ಅನುಭವಗಳನ್ನು ತರುವ ವಂಡರ್ ಲಾದ ಬದ್ಧತೆಗೆ ಸಾಕ್ಷಿಯಾಗಿದೆ. ಗರುಡ ಗ್ಲೈಡ್ ಕೇವಲ ಒಂದು ಹೊಸ ಆಕರ್ಷಣೆ ಮಾತ್ರವಲ್ಲ, ಅದೊಂದು ವಿಶಿಷ್ಟ ಮೈಲಿಗಲ್ಲಾಗಿದೆ ಎಂದು ಹೇಳಿದರು.

ಎಸ್‌ಎಲ್‌ಸಿ ಮಾದರಿಯು ಜಾಗತಿಕವಾಗಿ ಅತ್ಯಂತ ಜನಪ್ರಿಯವಾಗಿದ್ದು, ಸತತವಾದ ಇನ್ವರ್ಷನ್‌ಗಳು ಮತ್ತು ದಿಕ್ಕಿನ ವೇಗದ ಬದಲಾವಣೆಗಳ ಮೂಲಕ ಅತ್ಯಂತ ತೀವ್ರವಾದ ಅನುಭವವನ್ನು ನೀಡುತ್ತದೆ. ಗರುಡ ಗ್ಲೈಡ್‌ನ 130 ಸೆಕೆಂಡ್‌ಗಳ ರೈಡ್ ಸೈಕಲ್ ಅನ್ನು ಸತತ ವೇಗವಾಗಿ ಸಾಗಲು ವಿನ್ಯಾಸ ಗೊಳಿಸಲಾಗಿದ್ದು, ಪ್ರಾರಂಭದಿಂದ ಅಂತ್ಯದವರೆಗೆ ಪ್ರತಿ ಕ್ಷಣವೂ ಮನರಂಜನೆ ನೀಡುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಯೂಟ್ಯೂಬರ್ ''''''''ಡಾ.ಬ್ರೋ'''''''' ಖ್ಯಾತಿಯ ಗಗನ್ ಶ್ರೀನಿವಾಸ್ ಮತ್ತು ಈ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್‌ನ ಸಿಓಓ ಧೀರನ್ ಚೌಧರಿ ಹಾಗೂ ಬೆಂಗಳೂರು ಪಾರ್ಕ್ ಮುಖ್ಯಸ್ಥರಾದ ಎಚ್.ಎಸ್. ರುದ್ರೇಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರೀಘಟ್ಟ ಚೌಡೇಶ್ವರಿ ದೇವಿ ಜಾತ್ರಾಮಹೋತ್ಸವ
ಗ್ರಾಮೀಣ ಜನರಿಗೆ ಗ್ರಾಮ-ನೆಟ್ ಭಾರತ ಯೋಜನೆ ವರದಾನ