ಸಿಂಧನೂರು/ತುರ್ವಿಹಾಳದಲ್ಲೂ ರಾಯರ ಪೂರ್ವಾರಾಧನೆ

KannadaprabhaNewsNetwork |  
Published : Aug 21, 2024, 12:37 AM IST
20ಕೆಪಿಎಸ್ಎನ್ಡಿ4ಎ | Kannada Prabha

ಸಾರಾಂಶ

ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ಮೂರ್ತಿ ಅಲಂಕಾರಗೊಳಿಸಿರುವುದು. ಬೆಂಗಳೂರಿನ ಪಂಡಿತ ಗುರುರಾಜ ದಾಸರಿಂದ ರಾಯರ ವೈಭವ ಕುರಿತಾಗಿ ವಿಶೇಷ ಪ್ರವಚನ ನಡೆಯಿತು

ಸಿಂಧನೂರು/ತುರ್ವಿಹಾಳ:

ನಗರ ಹಾಗೂ ತಾಲೂಕಿನ ತುರ್ವಿಹಾಳದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಯರ 353ನೇ ಆರಾಧನಾ ಮಹೋತ್ಸವದ ನಿಮಿತ್ತ ಪೂರ್ವಾರಾಧನೆ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಗುರುರಾಯರ ಅಷ್ಟೋತ್ತರ, ರಾಯರಿಗೆ ವಿಶೇಷ ಅಲಂಕಾರ ಹಾಗೂ ಪೂಜೆಗಳು ವಿಧಿವತ್ತಾಗಿ ನಡೆದವು. ಸಿಂಧನೂರಿನ ರಾಯರ ಮಠದಲ್ಲಿ ಬೆಂಗಳೂರಿನ ಪಂಡಿತ ಗುರುರಾಜ ದಾಸರಿಂದ ಹರಿದಾಸರ ಸಂಕೀರ್ತನೆಗಳಲ್ಲಿ ರಾಯರ ವೈಭವ ಕುರಿತಾಗಿ ವಿಶೇಷ ಪ್ರವಚನ ನಡೆಯಿತು. ಪೂರ್ವಾರಾಧನೆಗೂ ಮುನ್ನ ದಿನ ಗೋಪೂಜೆ, ಲಕ್ಷ್ಮಿಪೂಜೆ, ದವಸ ಧಾನ್ಯಗಳ ಪೂಜೆಗಳು ನಡೆದವು.

ತುರ್ವಿಹಾಳ ರಾಯರ ಮಠದಲ್ಲಿ ಮಂಗಳವಾರ ಗುರುರಾಜ ದಾಸರಿಗೆ ಸನ್ಮಾನಿಸಲಾಯಿತು. ಗುರು ಸೇವಾ ಸಮಿತಿ ಅಧ್ಯಕ್ಷ ಗೋಕುಲ್ರಾವ್, ಮಾಜಿ ಅಧ್ಯಕ್ಷ ಶೇಷಗಿರಿರಾವ್ ಚನ್ನಳ್ಳಿ, ಕಾರ್ಯದರ್ಶಿ ರಾಘವೇಂದ್ರ ರಾವ್ ಕುಲಕರಣಿ, ದಡೇಸುಗೂರು, ಶ್ರೀಧರ್ ಕುಲಕರ್ಣಿ ವಕೀಲ ಉಪಸ್ಥಿತರಿದ್ದರು.

ಸಿಂಧನೂರಿನ ಕಾರ್ಯಕ್ರಮದಲ್ಲಿ ಮಠದ ವ್ಯವಸ್ಥಾಪಕ ಶಾಮಾಚಾರ್, ವಿಚಾರಣಾಕರ್ತ ರಾಘವೇಂದ್ರರಾವ್ ಕುಲಕರ್ಣಿ, ಅರ್ಚಕ ನವೀನ್ ಆಚಾರ್, ಗುರುರಾಜ ಆಲ್ದಾಳ, ನರಸಿಂಹಾಚಾರ್ ಮಠಾಧಿಕಾರಿ, ಗೋಪಾಲ್ ಆಚಾರ್ ಜೋಶಿ, ಪ್ರಹ್ಲಾದಗುಡಿ, ನಾಗೇಂದ್ರ ಕುಮಾರ್ ಸಾಹುಕಾರ್, ಜಯತೀರ್ಥ ದಾಸ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ