ನವದೆಹಲಿ: ಬೆಂಗಳೂರಿನಲ್ಲಿ ನಡೆದ, ಐಪಿಎಲ್ ವಿಜೇತ ಆರ್ಸಿಬಿ ತಂಡದ ವಿಜಯೋತ್ಸವದ ವೇಳೆ 11 ಅಮಾಯಕರ ಬಲಿ ಪಡೆದ ಕಾಲ್ತುಳಿತದ ಬಗ್ಗೆ ರಾಜ್ಯದಲ್ಲಿ ಸರ್ಕಾರದ ಪಾಲಿಗೆ ಕಂಟಕಪ್ರಾಯವಾಗಿರುವ ಹೊತ್ತಿನಲ್ಲಿ, ಕಾಂಗ್ರೆಸ್ ಹೈಕಮಾಂಡ್ ಕೂಡಾ, ವಿಜಯೋತ್ಸವದಲ್ಲಿ ರಾಜ್ಯ ಸರ್ಕಾರ ಭಾಗಿಯಾಗಿದ್ದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಭೇಟಿ ವೇಳೆ ‘ಆರ್ಬಿಐ ತಂಡದ ಐಪಿಎಲ್ ವಿಜಯಯಾತ್ರೆಯಲ್ಲಿ ರಾಜ್ಯ ಸರ್ಕಾರವೂ ಭಾಗಿಯಾಗಿದ್ದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಕುಂಭಮೇಳ ಮತ್ತು ಶಬರಿಮಲೆ ಕಾಲ್ತುಳಿತ ನಡೆದಾಗ ಅದರ ಬಗ್ಗೆ ಉತ್ತರಪ್ರದೇಶದ ಬಿಜೆಪಿ ಅಥವಾ ಕೇರಳದ ಎಡಪಂಥೀಯ ಸರ್ಕಾರದಂತೆ ಮಾಡದೆ, ಕರ್ನಾಟಕ ಸರ್ಕಾರ ಜನರ ವಿಷಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಕಾಂಗ್ರೆಸ್ ಪಕ್ಷದ ಪಾಲಿಗೆ ಜನರು ಬಹಳ ಮೌಲ್ಯಯುತವಾದವರು. ಸರ್ಕಾರ ಜನರ ಪರವಾಗಿರಬೇಕು’ ಎಂದು ರಾಹುಲ್ ಹೇಳಿದ್ದಾರೆ ಎನ್ನಲಾಗಿದೆ.3 ತಾಸಿನ ಸಭೆ ಬಳಿಕ ಮಾತನಾಡಿದ ವೇಣುಗೋಪಾಲ್, ‘ಕರ್ನಾಟಕ ಸರ್ಕಾರವು ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಘಟನೆ ಬಗ್ಗೆ ವರದಿ ಸಲ್ಲಿಸುವಂತೆ ಪಕ್ಷದ ಕೇಂದ್ರ ನಾಯಕರು ಆದೇಶಿಸಿದ್ದಾರೆ’ ಎಂದು ಹೇಳಿದ್ದಾರೆ.