ಮರು ಮೌಲ್ಯ ಮಾಪನ: 3 ವಿದ್ಯಾರ್ಥಿನಿಗಳ ಅಂಕ ಹೆಚ್ಚಳ

KannadaprabhaNewsNetwork | Published : May 27, 2025 1:48 AM
ನರಸಿಂಹರಾಜಪುರ: ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಎಸ್.ಎಸ್.ಎಲ್.ಸಿ.ಯ ಮೂವರು ವಿದ್ಯಾರ್ಥಿನಿಯರ ಮರು ಮೌಲ್ಯ ಮಾಪನದಿಂದಾಗಿ ಅಂಕ ಹೆಚ್ಚಾಗಿದೆ ಎಂದು ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ ಗೌಡ ತಿಳಿಸಿದ್ದಾರೆ.
Follow Us

ನರಸಿಂಹರಾಜಪುರ: ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಎಸ್.ಎಸ್.ಎಲ್.ಸಿ.ಯ ಮೂವರು ವಿದ್ಯಾರ್ಥಿನಿಯರ ಮರು ಮೌಲ್ಯ ಮಾಪನದಿಂದಾಗಿ ಅಂಕ ಹೆಚ್ಚಾಗಿದೆ ಎಂದು ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ ಗೌಡ ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ಫಲಿತಾಂಶ ಬಂದಾಗ 587 ಅಂಕ ಪಡೆದಿದ್ದ ಅಂಬಿಕ ಟಿ.ಆರ್. ಮರು ಮೌಲ್ಯ ಮಾಪನದಿಂದ ವಿಜ್ಞಾನ ದಲ್ಲಿ 12 ಅಂಕ ಹೆಚ್ಚು ಮತ್ತು ಗಣಿತದಲ್ಲಿ ಶೇ. 100ರಷ್ಟು ಅಂಕ ಪಡೆದು 599 ( ಶೇ 96) ಅಂಕ ಪಡೆದಿದ್ದಾಳೆ. ತಾಲೂಕಿ ನಲ್ಲಿ ಸರ್ಕಾರಿ ಶಾಲೆಗಳ ಪೈಕಿ ಅತಿ ಹೆಚ್ಚು ಅಂಕ ಪಡೆದ ಕೀರ್ತಿಗೆ ಪಾತ್ರಳಾಗಿದ್ದಾಳೆ.

ಸಾನ್ವಿತಾಗೆ ಮರು ಮೌಲ್ಯ ಮಾಪನದಿಂದ 2 ಅಂಕ ಹೆಚ್ಚಾಗಿದೆ. 548 ಅಂಕ ಪಡೆದಿದ್ದ ಈಕೆ ಈಗ 550 ಅಂಕ ಪಡೆದಿದ್ದಾಳೆ. ಕನ್ನಡದಲ್ಲಿ ಶೇ.100 ರಷ್ಟು ಅಂಕ ಗಳಿಸಿದ್ದಾಳೆ. ಅಲ್ಲದೆ ಅಪೇಕ್ಷಾ ಎಂಬ ವಿದ್ಯಾರ್ಥಿನಿಗೆ ಮರು ಮೌಲ್ಯ ಮಾಪನದಿಂದ 19 ಅಂಕ ಹೆಚ್ಚಾಗಿದೆ.

ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆ ಸತತವಾಗಿ 3 ವರ್ಷಗಳಿಂದ ಶೇ.100 ರಷ್ಟು ಫಲಿತಾಂಶ ಪಡೆದಿದೆ. ರಾಷ್ಟ್ರಮಟ್ಟದ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಕಟ್ಟಿನಮನೆ ಸರ್ಕಾರಿ ಪ್ರೌಢ ಶಾಲೆಯ 5 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ತಾಲೂಕಿನಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ 5 ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಮುಗಿಯುವರೆಗೂ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದರೆ ಪ್ರತಿ ತಿಂಗಳೂ ಸ್ಕಾಲರ್ ಶಿಪ್ ಬರಲಿದೆ. ಅಲ್ಲದೆ ಇದೇ ಪರೀಕ್ಷೆಯಲ್ಲಿ ನಮ್ಮ ಶಾಲೆಯ ಸಂಚಿತ್ ಡಿ.ಯು. ಎಂಬ ವಿದ್ಯಾರ್ಥಿ 180 ಕ್ಕೆ 101 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.